ಮೇ 26: ಮುಂಬಯಿಯಲ್ಲಿ ಕೈವಲ್ಯ ಮಠಾಧೀಶರ ದೀಕ್ಷಾ ರಜತ ಮಹೋತ್ಸವ


Team Udayavani, May 22, 2019, 5:01 PM IST

10

ಮುಂಬಯಿ: ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮಾಜದ ಅನುಯಾಯಿಗಳುಳ್ಳ ಮಠಗಳ ಸಾಲಿನಲ್ಲಿ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಅತಿ ಆದಿ ಮಠವೂ ಹಾಗೂ ಪ್ರಾಚೀನ ವಾದದು. ಸುಮಾರು 2,700 ವರ್ಷಗಳ ಇತಿಹಾಸವುಳ್ಳ ಈ ಮಠವು ಗೋವಾ, ಪೊಂಡಾದ ಕವಳೆ ಎಂಬ ಸ್ಥಾನದಿಂದ ತಮ್ಮ ಆಡಳಿತವನ್ನು ನಡೆಸಿ ಭಾರತಾದ್ಯಂತ ಹಲವು ಶಾಖೆಗಳನ್ನು ಹೊಂದಿದೆ.

ಅತಿ ಪ್ರಾಚೀನ ಸ್ಮಾರ್ಥ ಪಂಥಕ್ಕೆ ಸೇರಿದ ಗೌಡಪಾದಾಚಾರ್ಯ ಕೈವಲ್ಯ ಮಠದ ಆರಾಧ್ಯ ದೇವತೆ ಶ್ರೀ ಭವಾನಿ ಶಂಕರ. ಕ್ರಿಸ್ತಪೂರ್ವ 230ರಲ್ಲಿಮೊಟ್ಟ ಮೊದಲನೆ ಗುರುವರ್ಯರಾದ ಶ್ರೀಮದ್‌ ಗೌಡಪಾದಾಚಾರ್ಯ ಗುರುವರ್ಯ ಅವರ ಶಿಷ್ಯ ಸ್ವಾಮೀಜಿ ಶ್ರೀ ಗೋವಿಂದ ಭಗವದ್‌ಪಾದಾ ಚಾರ್ಯರು ಹಿಂದೂ ಸಂಸ್ಕೃತಿಯ ಬುನಾದಿಯಾಗಿರುವ ಗಣಮಾನ್ಯ ಶ್ರೇಷ್ಠ ಗುರು ಶ್ರೀ ಆದಿಶಂಕರರಿಗೆ ದೀಕ್ಷೆಯನ್ನು ದಯಪಾಲಿಸಿ ಗೋಮಾಂತಕದಲ್ಲಿ (ಗೋವಾ) ಮಠವನ್ನು ಸ್ಥಾಪಿಸಿ ಭವಾನಿ ಶಂಕರ ದೇವರನ್ನು ಆರಾಧಿಸುತ್ತಾ ಧರ್ಮ ಪ್ರಚಾರಗೈದರು.

ಶ್ರೀ ಸಂಸ್ಥಾನದ ವಿದ್ಯಮಾನ ಗುರುವರ್ಯರಾದ ಪರಮಪೂಜ್ಯ ಶ್ರೀಮದ್‌ ಶಿವಾನಂದ ಸರಸ್ವತಿ ಸ್ವಾಮೀಜಿ ಅವರು ಸಂಸ್ಥಾನದ 77ನೇ ಯತಿವರ್ಯರಾಗಿ ಗುರು ಶ್ರೀಮದ್‌ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರಿಂದ ದೀಕ್ಷೆಯನ್ನು ಸ್ವೀಕರಿಸಿ 1994ನೇ ಇಸವಿಯಲ್ಲಿ ಮಠದ ಪಟ್ಟವನ್ನು ಅಲಂಕರಿಸಿದರು. ಶ್ರೀಗಳು ಅಂದಿನಿಂದ ಹಲವು ಮಠ ಮಂದಿರಗಳನ್ನು ಜೀರ್ಣೋದ್ಧಾರಗೊಳಿಸಲು ಸಕ್ರಿಯರಾದಷ್ಟೇ ಅಲ್ಲ ಭಾರತದಲ್ಲೆಡೆ ಧರ್ಮಪ್ರಚಾರಗೈಯಲು ಸಂಚರಿಸಿ ಶಿಷ್ಯ ವರ್ಗಕ್ಕೆ ಬೋಧಿಸುತ್ತಿದ್ದಾರೆ.

ಮುಂಬಯಿ ದಕ್ಷಿಣ ಭಾಗದಲ್ಲಿ ನೆಲೆಸಿರುವ ಬಾಣಗಂಗಾ ಪರಿಸರದ ಮಠದ ಮಹತ್ವದ ಶಾಖೆ ವಾಲ್ಕೇಶ್ವರದ ಶಾಂತಾದುರ್ಗ ದೇವಳ ಕವಳೇ ಮಠದ ವತಿಯಿಂದ ಮೇ 26ರಂದು ಮುಂಬಯಿಯ ದಾದರ್‌ಪೂರ್ವದ ಕಿಂಗ್ಸ್‌ ಜಾರ್ಜ್‌ ಸ್ಕೂಲಿನ ಬಿ.ಎನ್‌. ವೈದ್ಯ ಸಭಾಗೃಹದಲ್ಲಿಸಂಜೆ 5 ಗಂಟೆಯಿಂದ ಅತಿ
ವಿಜೃಂಭಣೆಯಿಂದ ಸ್ವಾಮೀಜಿ ಅವರ ದೀಕ್ಷಾ ಸಮಾರಂಭದ ರಜತ ಮಹೋತ್ಸವವನ್ನು ಆಚರಿಸಲಿದೆ. ಅಂದು ಸಂಜೆ ಪರಮಪೂಜ್ಯ ಗುರುವರ್ಯರನ್ನು ಭಕ್ತ ಸಮಾಜ ಬಾಂಧವರು ರಾಜಾ ಶಿವಾಜಿ ವಿದ್ಯಾಲಯ ದಾದರ್‌ಗೆಸ್ವಾಗತಿಸಲಿರುವರು. ಈ ಸಂದರ್ಭದಲ್ಲಿ ಭಕ್ತಿ ಸಂಗೀತ ರಸಮಂಜರಿಯನ್ನು ಆಯೋಜಿಸ
ಲಾಗಿದೆ. ಬಳಿಕ ಸ್ವಾಮೀಜಿಯವರು ಸಮಾಜಬಾಂಧವ ರನ್ನು ಉದ್ದೇಶಿಸಿ ಆಶೀರ್ವಚನ ನೀಡಲಿರುವರು.
ಶಾಂತಾದುರ್ಗ ದೇವಿಯ 54ನೇ ವರ್ಧಾಪನಾ ಮಹೋತ್ಸವವನ್ನು ಮೇ 26ರಿಂದ ಮೇ 29ರವರೆಗೆ ಸಂಭ್ರಮದಿಂದ ಆಚರಿಸಲಾಗುವುದು. ಮೇ 29ರಂದು ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿÉ ದೇವಿಯ ಪಲ್ಲಕ್ಕಿ ಸೇವೆ ನಡೆಯಲಿದೆ. ಮೇ 26ರಂದು ದೀಕ್ಷಾ ಸಮಾರಂಭ ದಲ್ಲಿ ಭಾಗವಹಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ 23625566 ಅನ್ನು ಸಂಪರ್ಕಿಸಿ ದೇಣಿಗೆ ಪ್ರವೇಶಪತ್ರ ಪಡೆಯಬಹುದೆಂದು ಮಠದ ಸಮಿತಿ ಸದಸ್ಯ, ವಕ್ತಾರ ಕಮಲಾಕ್ಷ ಸರಾಫ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಸ್ವಾಮೀಜಿಯವರು ಮೇ 22ರಂದು ಸಂಜೆ 6ಕ್ಕೆ ವಾಲ್ಕೇಶ್ವರದ ಸ್ವಮಠಕ್ಕೆ ಆಗಮಿಸಲಿದ್ದಾರೆ.

ಟಾಪ್ ನ್ಯೂಸ್

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

7

Miyazaki mango: ಶಂಕರಪುರದಲ್ಲಿ ವಿಶ್ವದ ದುಬಾರಿ ಮಾವಿನಹಣ್ಣು! 

5

ಲಕ್ಷದ್ವೀಪ ಪ್ರವಾಸೋದ್ಯಮದ ಅವಕಾಶ ಬಳಸಿಕೊಳ್ಳುವಲ್ಲಿ ಮಂಗಳೂರು ಹಿನ್ನಡೆ

Anjali Ambigera Case; Girish and Anjali got married 15 days ago!

Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

ರೈಲಿನಲ್ಲಿ ಮಹಿಳೆಯೊಂದಿಗೆ ಕಿರಿಕ್; ಚಾಕು ಇರಿತ; ಅಂಜಲಿ ಹಂತಕ ಸಿಕ್ಕಿ ಬಿದ್ದಿದ್ಹೇಗೆ?

kiccha sudeepa gave update about max

MAX; ಅಭಿಮಾನಿಗಳಿಗೆ ಸುದೀಪ್‌ ಅಪ್ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

World Mother’s Day 2024: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

Desi Swara: ಅಮೆರಿಕದಲ್ಲಿ ಲೈಬ್ರರಿ, ಮಕ್ಕಳು ಮತ್ತು ನಾಯಿ….!

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

ಕರ್ನಾಟಕ ಸಂಘ ಕತಾರ್‌: ವಾರ್ಷಿಕ ಸಂಭ್ರಮ ವಸಂತೋತ್ಸವ-24 ಆಚರಣೆ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಮಕ್ಕಳೊಂದಿಗೆ ಬೆರೆತು ಮನಸ್ಸನ್ನು ಅರಿಯೋಣ

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

Desi Swara: ಸಿರಿಗನ್ನಡ ಮ್ಯೂನಿಕ್‌: ನವವರ್ಷವನ್ನು ಹರುಷದಿ ಸ್ವಾಗತಿಸಿದ ಸಿರಿಗನ್ನಡಿಗರು

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

ಲೈಂಗಿಕ ದೌರ್ಜನ್ಯ: ಸಾಕ್ಷ್ಯ ಸಂಗ್ರಹಕ್ಕೆ ಇನ್ಮುಂದೆ ಸುರಕ್ಷಿತ ಕಿಟ್‌ ಬಳಕೆ

Kundapur: ಹೇರಿಕೆರೆ ಅಭಿವೃದ್ಧಿಗೊಂಡರೆ ಹತ್ತಾರು ಹಳ್ಳಿಗಳಿಗೆ ನೀರು

Kundapur: ಹೇರಿಕೆರೆ ಅಭಿವೃದ್ಧಿಗೊಂಡರೆ ಹತ್ತಾರು ಹಳ್ಳಿಗಳಿಗೆ ನೀರು

7

Miyazaki mango: ಶಂಕರಪುರದಲ್ಲಿ ವಿಶ್ವದ ದುಬಾರಿ ಮಾವಿನಹಣ್ಣು! 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.