ಸಂಕಷ್ಟಕ್ಕೆ ದೂಡಿದ ಬಿರುಗಾಳಿ ಮಳೆಯ ಆರ್ಭಟ

ಆಲಿಕಲ್ಲು ಸಹಿತ ಭಾರೀ ಮಳೆಗೆ ಅಪಾರ ಹಾನಿ • ಗಾಳಿಯ ಆರ್ಭಟಕ್ಕೆ ಪಪ್ಪಾಯಿ, ಸಪೋಟ, ಮಾವು ಬೆಳೆ ಹಾನಿ

Team Udayavani, May 26, 2019, 2:45 PM IST

mandya-tdy-4..

ನಾಗಮಂಗಲ ತಾಲೂಕಿನ ಹರಳಕೆರೆ ಗ್ರಾಮದ ಸೀತಾರಾಮು ಎಂಬವರ ಮನೆ ಚಾವಣಿ ಹಾರಿ ಹೋಗಿರುವುದು.

ನಾಗಮಂಗಲ: ತಾಲೂಕಿನಾದ್ಯಂತ ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಮಳೆಗೆ ಹಲವು ಗ್ರಾಮಗಳು ಅಪಾರ ನಷ್ಟ ಅನುಭವಿಸಿದ್ದರೆ ಶುಕ್ರವಾರ ಸಂಜೆ ಮತ್ತೆ ವರುಣನ ರುದ್ರ ನರ್ತನ ಮುಂದುವರೆದಿತ್ತು.

ಗುರುವಾರ ಸುರಿದ ಮಳೆಗೆ ಕೇವಲ ಅಕ್ಕಪಕ್ಕದ ಗ್ರಾಮಗಳಷ್ಟೇ ನಷ್ಟ ಅನುಭವಿಸಿದರೆ ಶುಕ್ರವಾರದ ಮಳೆಗಾಳಿಗೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳು ನಷ್ಟ ಅನುಭವಿಸಿವೆ.

ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆಯಲ್ಲಿ ಕೆಂಪು ಹೂಗಳಿಂದ ಮೈದುಂಬಿಕೊಂಡು ಮಂಡ್ಯದಿಂದ ನಾಗಮಂಗಲಕ್ಕೆ ಬರುವವರನ್ನು ಸ್ವಾಗತಿಸುತ್ತಿದ್ದ ಗುಲ್ಮೊಹರ್‌ನ ಅನೇಕ ಮರಗಳು ಧರೆಗುರುಳಿದ್ದವು. ಕೇವಲ ಮರಗಳಷ್ಟೇ ಅಲ್ಲದೆ ವಿದ್ಯುತ್‌ ಕಂಬಗಳೂ ನೆಲಕ್ಕುರುಳಿದ್ದವು. ವಾಹನ ಸಂಚಾರ ಅಸ್ತವ್ಯಸ್ತ ಅಷ್ಟೇ ಅಲ್ಲ ಪಾದಚಾರಿಗಳೂ ಅತ್ತಿಂದಿತ್ತ ನಡೆದಾಡುವುದೂ ದುಸ್ತರವಾಗಿತ್ತು.

ನೆಲಕಚ್ಚಿದ ಅಪಾರ ಮೇವು:ಇಷ್ಟೇ ಅಲ್ಲದೆ ಅನೇಕರ ಜಮೀನಿನಲ್ಲಿ ಮುಸುಕಿನಜೋಳದ ಕಡ್ಡಿಗಳು ಸಂಪೂ ರ್ಣವಾಗಿ ಗಾಳಿ ರಭಸಕ್ಕೆ ಬುಡಮೇಲಾಗಿವೆ.

ಮುಸುಕಿನಜೋಳದ ಕಡ್ಡಿಗಳು ಹಾಳಾಗದೆ ಇದ್ದಿದ್ದರೆ ಕನಿಷ್ಟ 4 ರಿಂದ 5 ತಿಂಗಳ ಅವಧಿಗೆ ಜಾನುವಾರುಗಳಿಗೆ ಮೇವಾ ಗುತ್ತಿತ್ತು ಎಂದು ರೈತರು ಹಲುಬುತ್ತಿದ್ದರು. 30 ವರ್ಷದ ಹಿಂದಿನ ಅರಳಿಮರ ಬುಡ ಸಮೇತ ಧರೆಗುರುಳಿತ್ತು. 12 ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿವೆ.

30 ಅಡಿ ದೂರದಲ್ಲಿ ಬಿದ್ದಿತ್ತು:ಕರಡಹಳ್ಳಿಯಲ್ಲಿ ಬಿರುಗಾಳಿಯ ರಭಸದ ಉದಾಹರಣೆಯೆಂದರೆ ಗ್ರಾಮದ ನಿವಾಸಿ ಭಟ್ರಾ ರಾಮಣ್ಣ ಎಂಬವರ ಮನೆಗೆ ಹೊಂದಿಸಲಾಗಿದ್ದ 1800 ಕೆ.ಜಿ. ತೂಕದ ಕಬ್ಬಿಣದ ಚಾವಣಿ ಕಿತ್ತು ಹಾರಿಹೋಗಿ 30 ಅಡಿ ದೂರದಲ್ಲಿ ಬಿದ್ದಿತ್ತು ಎಂದು ಗ್ರಾಮದ ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.

ಬಿರುಗಾಳಿ, ಸುಂಟರಗಾಳಿ ಎಂದು ಕೇಳಿದ್ದೆವು. ಆದರೆ ಶುಕ್ರವಾರ ರಾತ್ರಿ ಅದರ ರೌದ್ರಾವತಾರದ ಪ್ರತ್ಯಕ್ಷ ದರ್ಶನವಾಯಿತು. ನನ್ನಿಡೀ ಜೀವಮಾನದಲ್ಲಿ ಇಂತಹ ಗಾಳಿಯ ಆರ್ಭಟ ಕಂಡಿರಲಿಲ್ಲ. ಕಬ್ಬಿಣದ ತುಂಡುಗಳು ಗಾಳಿಯಲ್ಲಿ ತೇಲುವಂತಹ ದೃಶ್ಯ ಕಂಡು ನಿಜಕ್ಕೂ ಅಚ್ಚರಿ ಪಟ್ಟಿದ್ದೇನೆ. ಆದ ನಷ್ಟಕ್ಕೆ ತಾಲೂಕು ಆಡಳಿತ ಸ್ಪಂದಿಸಿ ಶೀಘ್ರವೇ ಪರಿಹಾರ ಕಲ್ಪಿಸಲಿ.● ಸೀತಾರಾಮು, ಹರಳಕೆರೆ ಗ್ರಾಮ ಪಂಚಾಯಿತಿ ಸದಸ್ಯ

ಪಪ್ಪಾಯಿ, ಸಪೋಟ ಇನ್ನಿತರೆ ಮರಗಳು ಧರೆಗೆ:

ತಾಲೂಕಿನ ಕೂಗಳತೆ ದೂರದ ಹರಳಕೆರೆ ಗ್ರಾಮ ಮಳೆ ಗಾಳಿಯ ಆರ್ಭಟಕ್ಕೆ ಮುಕ್ಕಾಲು ಪಾಲು ನಲುಗಿ ಹೋಗಿದೆ. ಗ್ರಾಮದ ಗೋಪಾಲಕೃಷ್ಣ ಎಂಬವರ ಜಮೀನಿನಲ್ಲಿ ಹಾಕಲಾಗಿದ್ದ 1000 ಕ್ಕೂ ಹೆಚ್ಚು ಪಪ್ಪಾಯ ಗಿಡಗಳು ಭೂಮಿ ಮೇಲೆ ಮಲಗಿ ನಿದ್ರಿಸುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿತ್ತು. 15 ಕ್ಕೂ ಹೆಚ್ಚು ಸಪೋಟ ಮರಗಳು ಹಣ್ಣುಗಳ ಸಮೇತ ನೆಲಕ್ಕುರುಳಿದ್ದವು. 5 ಬೇವಿನ ಮರ ಹಾಗೂ 1 ಮಾವಿನ ಮರ ಧರೆಗುರುಳಿದೆ. ಹಾಗೆಯೇ ಸೀತಾರಾಮು ಎಂಬವರ ಶೆಡ್‌ ಗಾಳಿ ಮಳೆಗೆ ಆಹುತಿಯಾಗಿತ್ತು. ಕರಿ ಮುದ್ದಪ್ಪ ಎಂಬುವವರ ವಾಸದ ಮನೆಗೆ ಹೊಂದಿ ಕೊಂಡಂತಿದ್ದ ಈರುಳ್ಳಿ ಶೆಡ್‌ 30 ಕ್ವಿಂಟಲ್ ಈರುಳ್ಳಿ ಸಮೇತ ಹಾನಿ ಗೊಳಗಾಗಿದೆ. ಮರಿಯಣ್ಣ ಮತ್ತು ಕೃಷ್ಣೇಗೌಡ ಎಂಬವರ ಶೆಡ್ಡು, ಮರಿಯಪ್ಪ ಎಂಬವರ 30 ಕ್ವಿಂಟಲ್ ಈರುಳ್ಳಿ ಹಾಗೂ ಶೆಡ್‌, ಸಣ್ಣಮರಿ ಎಂಬವರಿಗೆ ಸೇರಿದ 30 ಕ್ವಿಂಟಲ್ ಮತ್ತು ಶೆಡ್‌, ಶಿವಲಿಂಗಮ್ಮ ಸೀತಾರಾಮು ಎಂಬುವವರ 1 ತೆಂಗಿನಮರ, ಮೆಣಸಿನ ಗಿಡ, ಟೊಮೋಟೊ ಗಿಡ, ಶಿವಲಿಂಗಪ್ಪ ಎಂಬವರ 1 ಶೆಡ್‌, ಚನ್ನೇಗೌಡ ಸಿದ್ಧಯ್ಯ ಎಂಬವರ ದನದ ಕೊಟ್ಟಿಗೆ ಹೀಗೆ ಹಲವೆಡೆ ರೈತರ ಸೇರಿದಂತೆ ನಾಗರಿಕರ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ಟಾಪ್ ನ್ಯೂಸ್

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.