ಜೂಜಾಟಕ್ಕೆ ಪೊಲೀಸರದ್ದೇ ಸಾಥ್?
|ಹುಬ್ಬಳ್ಳಿಯಹೋಟೆಲ್ವೊಂದರ ಕೋಣೆಯೇ ಅಡ್ಡಾ |ಎಲೆ ತಟ್ಟುವ ಕೆಲಸದಲ್ಲಿ ಕೆಲ ಸಿಬ್ಬಂದಿ ಭಾಗಿ
Team Udayavani, May 27, 2019, 2:07 PM IST
ಸಾಂದರ್ಭಿಕ ಚಿತ್ರ.
ಹುಬ್ಬಳ್ಳಿ: ನಗರದ ಹೋಟೆಲ್ವೊಂದರಲ್ಲಿ ಇಸ್ಪೀಟ್ ಜೂಜಾಟ ಕೇಂದ್ರವೊಂದು ನಡೆಯುತ್ತಿದ್ದು, ವಿಚಿತ್ರವೆಂದರೆ ಇದನ್ನು ತಡೆಯಬೇಕಾದ ಪೊಲೀಸ್ ಸಿಬ್ಬಂದಿಯೇ ಇದರ ಸಕ್ರಿಯ ಸದಸ್ಯರಾಗಿದ್ದಾರೆ!
ನಗರದ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿನ ಹೋಟೆಲ್ವೊಂದರ ಕೋಣೆಯನ್ನೇ ತಮ್ಮ ಜೂಜಾಟದ ಅಡ್ಡೆ ಮಾಡಿಕೊಂಡಿದ್ದು, ಅನೇಕ ಪೊಲೀಸ್ ಸಿಬ್ಬಂದಿ ಪ್ರತಿದಿನ ಬೆಳಗ್ಗೆಯಿಂದಲೇ ಈ ಕೇಂದ್ರದಲ್ಲಿ ಎಲೆ ತಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಇಸ್ಪೀಟ್ ಜೂಜಾಟಕ್ಕೆ ಸಿಲುಕಿದ ಪೊಲೀಸ್ ಸಿಬ್ಬಂದಿಯಲ್ಲಿ ಅನೇಕರು ಹಣ ಕಳೆದುಕೊಂಡಿದ್ದು, ಇದರಿಂದ ಅವರ ಕುಟುಂಬ ತೀವ್ರ ಸಂಕಷ್ಟ ಪಡುವಂತಾಗಿದೆ.
ಪೊಲೀಸ್ ಇಲಾಖೆಯ ಎಸ್ಬಿ (ವಿಶೇಷ ವಿಭಾಗ) ಡ್ಯೂಟಿ ಮಾಡುವವರು, ರಾತ್ರಿ ಗಸ್ತು ತಿರುಗುವವರು, ಕ್ರೈಂ ಸಿಬ್ಬಂದಿ, ವಾಹನಗಳ ಚಾಲಕರು ಜೂಜಾಟದಲ್ಲಿ ತೊಡಗುತ್ತಿದ್ದಾರೆಂದು ಹೇಳಲಾಗುತ್ತಿದೆ. ನಗರದಲ್ಲಿ ನಡೆಯುವ ಮಟ್ಕಾ, ಜೂಜಾಟದಂತಹ ಅಕ್ರಮ ದಂಧೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುವವರೇ ನಾವು. ನಮ್ಮ ಮಾಹಿತಿ ಅವರಿಗೆ ಹೇಗೆ ಹೋಗಲಿದೆ ಎಂಬ ಮನೋಭಾವ ಇವರದ್ದಾಗಿದೆ ಎನ್ನಲಾಗಿದೆ.
ಜೂಜಾಟಕ್ಕೆ ಸಿಲುಕಿ ಹಣ ಕಳೆದುಕೊಂಡ ಅನೇಕರು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್ಗಳು ಸೇರಿದಂತೆ ಖಾಸಗಿಯವರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲ-ಬಡ್ಡಿ ಪಾವತಿಸಲಾಗದೆ ಪರದಾಡುತ್ತಿದ್ದಾರೆ. ಇಸ್ಪೀಟ್, ಜೂಜಾಟ ಇನ್ನಿತರ ಅಕ್ರಮ ದಂಧೆಗಳಲ್ಲಿ ತೊಡಗಿದವರನ್ನು ವಶಕ್ಕೆ ಪಡೆಯುವ ಇಲ್ಲವೆ ಬಂಧಿಸುವ ಕಾರ್ಯ ಮಾಡುವ ಪೊಲೀಸರೇ ಈ ಕಾರ್ಯಗಳಲ್ಲಿ ತೊಡಗಿದ್ದು, ಕ್ರಮ ಕೈಗೊಳ್ಳುವವರು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ. ಅಧಿಕಾರಿಗಳು ಇದನ್ನು ತಡೆಗಟ್ಟದಿದ್ದರೆ ಇಲಾಖೆಯ ಮರ್ಯಾದೆ ಹಾಳಾಗುವುದರಲ್ಲಿ ಸಂಶಯವಿಲ್ಲವೆಂದು ಹೆಸರು ಹೇಳಲಿಚ್ಚಿಸದ ಓರ್ವರು ‘ಉದಯವಾಣಿ’ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ