ಟಿ.ಎನ್. ಸೀತಾರಾಮ್ ಹೇಳಿದ ರಾಜ್ ಕುಮಾರ್ ಕಥೆ


Team Udayavani, May 31, 2019, 2:35 PM IST

t-n

ಬೆಂಗಳೂರು: ಟಿ.ಎನ್. ಸೀತಾರಾಮ್ ಎಂದರೆ ಸಾಕು ವಿಭಿನ್ನ ಶೈಲಿಯ, ಗಟ್ಟಿ ಕಥಾ ಹಂದರದ ಧಾರವಾಹಿಗಳು, ಸಿನಿಮಾಗಳು ಕಣ್ಣ ಮುಂದೆ ಬರುತ್ತವೆ. “ಮಾಯಾಮೃಗ, ಮುಕ್ತ ಮುಕ್ತ” ಮತ್ತು ಈಗ ಪ್ರಸಾರವಾಗುತ್ತಿರುವ ‘ಮಗಳು ಜಾನಕಿ’ ಧಾರವಾಹಿಗಳಿಂದ ಸೀತಾರಾಮ್ ಮನೆ ಮಾತಾಗಿದ್ದಾರೆ.

ಟಿ.ಎನ್.ಸೀತಾರಮ್ ಅವರು ಗುರುವಾರ ತನ್ನ ಫೇಸ್ ಬುಕ್ ಖಾತೆಯಲ್ಲಿ ಕನ್ನಡದ ವರನಟ ಡಾ.ರಾಜ್ ಕುಮಾರ್ ಅವರ ಜೊತೆಗಿನ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಟಿ.ಎನ್. ಸೀತಾರಾಮ್ ಅವರು ನೆನಪು ಮಾಡಿಕೊಂಡ ಆ ಕಥೆ ಯಥಾವತ್ತಾಗಿ ಇಲ್ಲಿದೆ ನೋಡಿ.

ಆ ದಿನಗಳಲ್ಲಿ ರಾಜಕುಮಾರ್ ರವರು ಕನ್ನಡದ ಮನಸ್ಸು ಗಳನ್ನು ಅಕ್ಷರಶಃ ಆಳುತ್ತಿದ್ದರು.. ನನಗೆ ಅವರನ್ನು ಮಾತನಾಡಿಸಿ ಸಾಧ್ಯ ವಾದರೆ ಅವರ ಜತೆ ಒಂದು photo ತೆಗೆಸಿಕೊಳ್ಳ ಬೇಕೆಂಬ ಆಸೆ ನನ್ನ ಹೈಸ್ಕೂಲ್ ದಿನಗಳಿಂದ ಇದ್ದು , ಆ ಆಸೆ ಈಡೇರದೆ ಕಮರಿ ಹೋಗಿತ್ತು..

ಆ ದಿನಗಳಲ್ಲಿ ನನ್ನ ಮಾಯಾಮೃಗ ಮುಗಿದಿತ್ತು..ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೆ….ಆ ಅವಮಾನ ಕಾಡುತ್ತಿತ್ತು..

. ನಂತರ ಕೆಲವು ದಿನಕ್ಕೆ ಈಟಿವಿ ಶುರುವಾಯಿತು…. ಆ ಸಮಯದಲ್ಲಿ ಒಂದು ರಾತ್ರಿ 9 ಗಂಟೆ ಸಮಯದಲ್ಲಿ ಚೆನ್ನ phone ಮಾಡಿದರು.ಚೆನ್ನ ರಾಜ್ ಕುಮಾರ್ ರವರ ಅತ್ಯಂತ ಆತ್ಮೀಯ ವ್ಯಕ್ತಿ, ಸೆಕ್ರೆಟರಿ, ಎಲ್ಲಾ.. ನನಗೆ ಗೊತ್ತಿದ್ದ ಮನುಷ್ಯ..

“ಅಣ್ಣ ಇಲ್ಲೊಬ್ಬರು ನಿಮ್ಮ ಹತ್ತಿರ ಮಾತನಾಡಬೇಕಂತೆ” ಎಂದರು
“ಯಾರು” ಎಂದೆ.
ನೋಡಿದರೆ ಮಾತನಾಡುತ್ತಿದ್ದುದು ಸ್ವತಹ ರಾಜಕುಮಾರ್ ರವರು.
“ನಮಸ್ಕಾರ… …ನಿಮ್ಮ ಧಾರಾವಾಹಿಗಳ ಅಭಿಮಾನಿ…ನಿಮ್ಮ ಮಾಯಾಮೃಗವಂತೂ ನಾವು ಒಂದು ದಿನ ಬಿಟ್ಟಿಲ್ಲ…” ಎಂದು ಹೇಳುತ್ತಿದ್ದಂತೆ ನನ್ನ ಗಂಟಲು ಒಣಗಿ, ಎದೆ ಹೊಡೆದು ಕೊಳ್ಳಲು ಆರಂಭಿಸಿತು…
‘ಈಗ ನಾವು ನಮ್ಮ ಬ್ಯಾನರ್ ನ ಅಡಿಯಲ್ಲಿ ಒಂದು ಧಾರಾವಾಹಿ ಈಟಿವಿ ಗೆ ಮಾಡಬೇಕೆಂದು ತೀರ್ಮಾನವಾಗಿದೆ… ನಾಳೆ ಭಾನುವಾರ ಚಿತ್ರೀಕರಣ ಆರಂಭ…. ತಾವು ಮುಖ್ಯ ಅತಿಥಿಗಳಾಗಿ ಬಂದು ಕ್ಯಾಮರಾ ಆನ್ ಮಾಡಬೇಕು.” ಎಂದರು. ಅನಿರೀಕ್ಷಿತವಾಗಿ ಬಂದ ಈ ಸಂತೋಷದಿಂದಾಗಿ ನನಗೆ ಮಾತೇ ಹೊರಡಲಿಲ್ಲ. ಅದನ್ನು ಅವರು ತಪ್ಪು ತಿಳಿದರು.

” ನಿಮಗೆ ಅವತ್ತು ಬಿಡುವಿಲ್ಲ ಅಂದರೆ ಹೇಳಿ.ನಿಮಗೆ ಅನುಕೂಲವಾದ ದಿನಕ್ಕೆ ಚಿತ್ರೀಕರಣವನ್ನು ಮುಂದೂಡುತ್ತೇವೆ ” ಎಂದರು.ನನಗೆ ನಾಚಿಕೆ ಆಯಿತು.”ಇಲ್ಲ ಸಾರ್…( ಸಾರ್ ಅನ್ನಬೇಕೋ, ಅಣ್ಣಾವ್ರೇ ಅನ್ನಬೇಕೋ ಎಂಬ ಗೊಂದಲ)…ಬಿಡುವಾಗಿದ್ದೇನೆ ಬರುತ್ತೇನೆ” ಎಂದು ಹೇಳಿಬಿಟ್ಟೆ.ಅವತ್ತೆಲ್ಲ ನನಗೆ ಅನುಮಾನ.. ಬೇರೆಯವರಿಗೆ ಹೇಳಲುಹೋಗಿ ನನಗೆ ಹೇಳಿರಬಹುದೇ ಎಂದು.

ಭಾನುವಾರ ಗೀತಾ, ಅಶ್ವಿನಿ ಜತೆ ಹೋದೆ.ಅವರ ಮನೆಯ ಎಲ್ಲರೂ ಇದ್ದರು..ಅವರಂಥ ಸೌಜನ್ಯದ ಮೂರ್ತಿಯನ್ನು ನಾನು ನೋಡೇ ಇರಲಿಲ್ಲ..
ನಾನು ಹೋಗುವುದಕ್ಕೆ ಕಾಯುತ್ತಿದ್ದರು.ಹಾರ ಹಾಕಿದರು.ಅದೇ ಗೀತಾ ಕೈಲಿ ಚಿತ್ರದಲ್ಲಿ ಇರುವ ಹಾರ.

ನಾನು ಸೋತಿದ್ದರ ಅವಮಾನ ನಂತರ ಮಾಯವಾಯಿತು

ಟಾಪ್ ನ್ಯೂಸ್

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

108 ಆ್ಯಂಬುಲೆನ್ಸ್‌ ಸಿಬಂದಿ ಮುಷ್ಕರ: ಇಂದು ನಿರ್ಧಾರ

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು

Sullia ಮೊಬೈಲ್‌ ರಿಚಾರ್ಜ್‌ಗೆ ಬಂದ ಯುವತಿಯ ಫೋಟೋ ತೆಗೆದ ಆರೋಪ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

ಕೊರಗಜ್ಜ, ಕಲ್ಲುರ್ಟಿ ದೈವಗಳಿಗೆ ‘ಫಸ್ಟ್ ಲುಕ್’ ತೋರಿಸಿ ಅನುಮತಿ ಪಡೆದ ‘ಕೊರಗಜ್ಜ’ ಚಿತ್ರತಂಡ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್‌ʼ

12

ʼಟಾಕ್ಸಿಕ್ʼ ಅಪ್ಡೇಟ್‌ಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಮತ್ತಷ್ಟು ಆ್ಯಕ್ಟಿವ್ ಆಗ್ತಾರಾ ಯಶ್?

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Kaatera; ಬರಹಗಾರರಿಗೆ ರಾಕ್‌ಲೈನ್‌ ಕಾರು ಗಿಫ್ಟ್

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Lok Sabha Election: ರಾಜ್ಯದಲ್ಲಿ 2ನೇ ಹಂತದ ಮತದಾನ ಆರಂಭ… ಕೆಲವೆಡೆ ಮತಯಂತ್ರದಲ್ಲಿ ದೋಷ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

Vijayapura: ನಗರದಲ್ಲಿ ಮತಯಂತ್ರ ದೋಷ, ಆರಂಭವಾಗದ ಮತದಾನ

1

Daily Horoscope: ಶುಭಸೂಚನೆಗಳೊಂದಿಗೆ ದಿನಾರಂಭಗೊಳ್ಳಲಿದೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.