ಬರದಲ್ಲೂ ವರವಾದ ಕೆರೆಗಳನ್ನು ಕಾಪಾಡಿ

14 ಸಾವಿರ ಜನಸಂಖ್ಯೆ-ಜಾನುವಾರುಗಳಿಗೆ ಜೀವಜಲ•ಹೂಳು ತೆಗೆದರೆ ಕೃಷಿಗೂ ಅನುಕೂಲ

Team Udayavani, Jun 1, 2019, 9:52 AM IST

1-June-1

ಆಳಂದ: 40 ವರ್ಷಗಳಲ್ಲಿ ಒಮ್ಮೆಯೂ ಬತ್ತದ ಸಾಲೇಗಾಂವ ಕೆರೆ. (ಸಂಗ್ರಹ ಚಿತ್ರ)

ಮಹಾದೇವ ವಡಗಾಂವ
ಆಳಂದ:
ಭೀಕರ ಬರದಲೂ ಬತ್ತದೆ ಜನ-ಜಾನುವಾರುಗಳಿಗೆ ವರವಾದ ತಾಲೂಕಿನ ಪ್ರಮುಖ ನಾಲ್ಕು ಕೆರೆಗಳು ಕಾಯಕಲ್ಪಕ್ಕೆ ಎದುರು ನೋಡುತ್ತಿವೆ.

ಸಣ್ಣ ನೀರಾವರಿ ಇಲಾಖೆಯಿಂದ 1972ರ ಬರಗಾಲದಲ್ಲಿ ಅಂದಿನ ಶಾಸಕ ದಿ| ಎ.ವಿ. ಪಾಟೀಲ ಅವರ ಅಧಿಕಾರ ಅವಧಿಯಲ್ಲಿ ನಿರ್ಮಾಣವಾದ ತಾಲೂಕಿನ ಸಾಲೇಗಾಂವ, ಆಳಂದ, ಮಟಕಿ ಸೇರಿ ಇನ್ನಿತರ ಕೆರೆಗಳು ಇಂದಿಗೂ ವರವಾಗಿವೆ.

ಸಾಲೇಗಾಂವ ಗ್ರಾಮದ ಕೆರೆಯಿಂದ ಕೆಳಭಾಗದ ಹತ್ತಾರು ಹಳ್ಳಿಗಳು ಅಂತರ್ಜಲ ಕಾಯ್ದುಕೊಂಡಿವೆ. ಅಲ್ಲದೆ, ಕೆರೆ ಕೆಳಭಾಗದಲ್ಲಿ ತೋಡಿದ ನಾಲ್ಕು ಬಾವಿಗಳಿಂದ ತಾಲೂಕಿನ ಚಿತಲಿ, ಖಜೂರಿ, ಸಾಲೇಗಾಂವ ಗ್ರಾಮಕ್ಕೆ ವರ್ಷವೀಡಿ ನೀರು ಒದಗಿಸಲಾಗುತ್ತಿದೆ. ಚಿತಲಿ ಗ್ರಾಮದಲ್ಲಿ 3000, ಸಾಲೇಗಾಂವ 4000, ಖಜೂರಿ ಗ್ರಾಮದಲ್ಲಿ 7000 ಸಾವಿರ ಜನಸಂಖ್ಯೆ ಸೇರಿ ಜಾನುವಾರುಗಳಿಗೆ ಈ ಕೆರೆ ನೀರೇ ವರವಾಗಿದೆ. ಕಳೆದ 15 ವರ್ಷಗಳ ಹಿಂದೆ ಕೆರೆ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಾಗ ಸ್ಪಂದಿಸಿದ ಅಂದಿನ ಸಚಿವ ರೇವುನಾಯಕ ಬೆಳಮಗಿ ಅವರು, ಸಣ್ಣ ನೀರಾವರಿ ಇಲಾಖೆಗೆ ಸರ್ಕಾರದ ಸುಮಾರು ಒಂದು ಕೋಟಿ ರೂ. ಒದಗಿಸಿದ್ದರಿಂದ ಬದುವಿನ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಪ್ರತಿವರ್ಷ ನೀರಿನ ಒಳಹರಿವಿನಿಂದಾಗಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದೆ. ಕೆರೆ ಬದುವಿನ ಎತ್ತರ ಇನ್ನಷ್ಟು ಹೆಚ್ಚಿಸಿದರೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿ ಕುಡಿಯಲು ಹಾಗೂ ಕೃಷಿಗೂ ಒದಗಿಸಬಹುದಾಗಿದೆ. ಆದರೆ ಇಂಥ ಕೆರೆಗಳಿಗೆ ಸರ್ಕಾರ ಹುಡುಕಿ ಅಗತ್ಯ ಕಾಮಗಾರಿ ಕೈಗೊಳ್ಳಬೇಕು ಎಂದು ಜೀವ ಮತ್ತು ಜಲ ಪ್ರೇಮಿಗಳು ಒತ್ತಾಯಿಸಿದ್ದಾರೆ.

ತಾಲೂಕು ಕೇಂದ್ರ ಆಳಂದ ಪಟ್ಟಣದ ಉರಮಗಾ ಹೆದ್ದಾರಿ ಮಾರ್ಗದಲ್ಲಿನ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಹತ್ತಿರವಿರುವ ಸಣ್ಣ ಕೆರೆಯಿಂದ ಜನರಿಗೆ ದೊಡ್ಡ ಮಟ್ಟದ ಉಪಕಾರವಾಗಿದೆ. ಕೆರೆ ಆವರಣದಲ್ಲೇ ತೆರೆದ ಬಾವಿ ತೋಡಿ ತೆಲಾಕುಣಿ ಹಾಗೂ ಗ್ರಾಪಂ ಕೇಂದ್ರ ಕಿಣ್ಣಿಸುಲ್ತಾನ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ. ಇಂಥ ಕೆರೆ ಒತ್ತುವರಿಯಾಗಿದೆ. ಅಲ್ಲದೆ, ಅಪಾರ ಪ್ರಮಾಣದ ಹೂಳು ತುಂಬಿದ್ದು, ಕೆರೆ ಒಡ್ಡು ಎತ್ತರಿಸುವ ಕೆಲಸ ನಡೆದರೆ ನೀರಿನ ಬರ ದೂರವಾಗಲಿದೆ. ಅಲ್ಲದೇ, ಇಲ್ಲಿ ಉದ್ಯಾನವನ ಮಾಡಬೇಕು ಎನ್ನುವ ಜನರ ಬಹುದಿನದ ಬೇಡಿಕೆ ಕನಸಾಗಿಯೇ ಉಳಿದುಕೊಂಡಿದೆ. ಬಾವಿ ತೋಡಿ ತೀರ್ಥ ತಾಂಡಕ್ಕೂ ಇಲ್ಲಿಂದಲೇ ನೀರು ಒದಗಿಸಲು ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ಕೆಲಸ ಪ್ರಗತಿಯಲ್ಲಿದೆ. ಗಂಡಾಂತರ ಪರಿಸ್ಥಿತಿಯಲ್ಲೂ ನೀರು ಒದಗಿಸುವ ಸಾಮರ್ಥ್ಯ ಹೊಂದಿರುವ ಕೆರೆಗಳ ಅಭಿವೃದ್ಧಿ ಮಾಡಿ ನೀರು ಸಂಗ್ರಹವಾದರೆ ಆಪತ್ಕಾಲದಲ್ಲೂ ಬರ ಹಿಂಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು.

ಸಾಲೇಗಾಂವ ಕೆರೆ ಸುಮಾರು 40 ವರ್ಷಗಳಿಂದಲೂ ಮಳೆ ಕೊರತೆ, ಬರದ ಬವಣೆ ನಡುವೆಯೂ ಸಂಗ್ರಹವಾದ ನೀರಿನಲ್ಲೇ ಜೀವ ಸಂಕುಲಕ್ಕೆ ಅನುಕೂಲ ಕಲ್ಪಿಸಿದೆ. ಬರಬಿದ್ದರೂ ಒಮ್ಮೆಯೂ ಬತ್ತದೆ ಇರುವ ಕೆರೆಯಲ್ಲಿ ಈಗ ಸಾಕಷ್ಟು ಹೂಳು ತುಂಬಿದೆ. ಕೆರೆ ಒಡ್ಡಿನ ಎತ್ತರ ಹೆಚ್ಚಿಸಿದರೆ ಕುಡಿಯಲು ಅಷ್ಟೇ ಅಲ್ಲ, ಕೃಷಿಗೂ ವರ್ಷವೀಡಿ ನೀರು ಪೂರೈಸುವ ಸಾಮರ್ಥ್ಯ ಹೊಂದಿದೆ.

ಮಂಟಕಿ, ಬೆಳಮಗಿ ಕೆರೆಯಲ್ಲೂ ಪ್ರಸಕ್ತ ಶೇ. 50ರಷ್ಟು ನೀರಿದೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿದೆ. ಇಂಥ ಕೆರೆಗಳನ್ನು ಅಭಿವೃದ್ಧಿ ಮಾಡಿ ಅನುಕೂಲ ಒದಗಿಸುವುದು ಅಗತ್ಯವಾಗಿದೆ. ಸಂಬಂಧಿತ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃರ್ತರಾಗಬೇಕಿದೆ.

ಟಾಪ್ ನ್ಯೂಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.