ಸಿಡಿಲಿಗೆ ಇಬ್ಬರು ಬಾಲಕರು ಸೇರಿ ಐವರ ದುರ್ಮರಣ
Team Udayavani, Jun 4, 2019, 3:00 AM IST
ಕಲಬುರಗಿ: ಬಿಸಿಲಿನಿಂದ ತತ್ತರಿಸಿದ್ದ ಕಲಬುರಗಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ಗಾಳಿ-ಗುಡುಗು ಸಿಡಿಲು ಮಿಶ್ರಿತ ಮಳೆ ಸುರಿದ ಪರಿಣಾಮ ಚಿತ್ತಾಪುರ ತಾಲೂಕಿನ ಮಾಡಬೂಳನಲ್ಲಿ ಮೂವರು ಹಾಗೂ ಆಳಂದ ತಾಲೂಕಿನಲ್ಲಿ ಬಾಲಕರಿಬ್ಬರು ಸೇರಿ ಐವರು ಸಿಡಿಲಿಗೆ ಬಲಿಯಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಗಾಳಿಯೊಂದಿಗೆ ಮಳೆ ಸುರಿಯಲು ಆರಂಭಿಸಿದಾಗ ಹೊಲದಲ್ಲಿ ರಕ್ಷಣೆಗೆಂದು ಗಿಡದ ಕೆಳಗೆ ನಿಂತಾಗ ಅವಘಡ ಸಂಭವಿಸಿದೆ. ಚಿತ್ತಾಪುರ ತಾಲೂಕಿನ ಮಾಡಬೂಳ ತಾಂಡಾದ ಹೊಲದಲ್ಲಿ ಗೇಮು ಶಂಕ್ರು ರಾಠೊಡ (32), ಸುರೇಶ ಮಾನಸಿಂಗ್ ಪವಾರ (30) ಹಾಗೂ ಗೊಂದಗೇರಿ ತಾಂಡಾದ ಯುವರಾಜ ಖೇಮು ಚವ್ಹಾಣ (24) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸೀನಾಬಾಯಿ ಜಗನ್ನಾಥ ಪವಾರ (35) ಎಂಬ ಮಹಿಳೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಳಂದ ಪಟ್ಟಣದ ಹೊರವಲಯದ ಹೊಲದಲ್ಲಿ ಸಿಡಿಲಿಗೆ ಆಳಂದನ ಖಾಜಿಗಲ್ಲಿಯ ಅಬ್ದುಲ್ ಘನಿ ಲಾಡ್ಲೆಸಾಬ್ ಮಾಸುಲದಾರ್ (12) ಹಾಗೂ ಢೋರಗಲ್ಲಿಯ ಸೂರ್ಯಕಾಂತ ದಿಗಂಬರ ಶೇರಖಾನೆ (13) ಸಾವಿಗೀಡಾಗಿದ್ದಾರೆ. ಚಿಂಚೋಳಿ ತಾಲೂಕು ಕುಡಹಳಿಯಲ್ಲಿ ಸಿಡಿಲಿಗೆ 14 ಕುರಿಗಳು ಮೃತಪಟ್ಟಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್