3 ತಿಂಗಳಿಂದ ಸಿಗದ ಮಾಸಾಶನ: ಆರೋಪ
ತಿಂಗಳಲ್ಲಿ ಒಂದು ದಿನ ಪೋಸ್ಟ್ಮ್ಯಾನ್ಗೆ ಕಾಯುವ ಪರಿಸ್ಥಿತಿ
Team Udayavani, Jun 5, 2019, 5:23 PM IST
ಶಹಾಬಾದ: ಮಾಸಾಶನ ಪಡೆಯಲು 60ಕ್ಕೂ ಹೆಚ್ಚು ಫಲಾನುಭವಿಗಳು ಗಿಡದ ಕೆಳಗೆ ಕುಳಿತಿದ್ದರು.
ಶಹಾಬಾದ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ ಮಾಸಾಶನ ಕಳೆದ ಮೂರು ತಿಂಗಳಿಂದ ದೊರಕಿಲ್ಲ ಎಂದು ರಾಘವೇಂದ್ರ ಮಂದಿರ ಮುಂಭಾಗ ಮತ್ತು ಪಕ್ಕದ ಗಿಡದ ಕೆಳಗೆ ಮಂಗಳವಾರ ಸೇರಿದ್ದ 60ಕ್ಕೂ ಹೆಚ್ಚು ಫಲಾನುಭವಿಗಳು ಆರೋಪಿಸಿದರು.
ಅಂಚೆ ಕಚೇರಿಯಲ್ಲಿ ಹಣ ನೀಡಬೇಕಾದ ಸಿಬ್ಬಂದಿಯೊಬ್ಬರು ತಮಗೆ ಮನಸ್ಸಿಗೆ ಬಂದ ಸ್ಥಳದಲ್ಲಿ ಕರೆದು ಸತಾಯಿಸುತ್ತಿದ್ದಾರೆಂದು ಫಲಾನುಭವಿಗಳು ಆರೋಪಿಸಿದರು. ಪ್ರತಿ ತಿಂಗಳು ಮಾಸಾಶನ ಪಡೆಯಬೇಕಾದರೆ 100 ರೂ. ಕೊಡಬೇಕು. ಕೊಡದಿದ್ದರೆ ನಮ್ಮ ಮಾಸಾಶನ ಬಂದಿಲ್ಲ ಎಂದು ಸತಾಯಿಸುತ್ತಾರೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಅಂಚೆ ಕಚೇರಿ ಸಿಬ್ಬಂದಿ ಕರ್ತವ್ಯ ಮರೆತು ದೇವಸ್ಥಾನ ಮುಂಭಾಗ ಅಥವಾ ಯಾವುದೋ ಗಿಡದ ಕೆಳಗೆ ಕರೆದು ಹಣ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮಾಸಾಶನ ಪಡೆಯುವವರು ತಿಂಗಳಲ್ಲಿ ಒಂದು ದಿನ ಪೋಸ್ಟ್ಮ್ಯಾನ್ಗೆ ಕಾಯುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಅಂಚೆ ವ್ಯವಸ್ಥಾಪಕರು ಅಂಚೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ ರಾಜನ್ ಆಗ್ರಹಿಸಿದರು.
ಮನವಿ: ನಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಮಾಸಾಶನ ಹಾಕಿದರೆ ಇಷ್ಟೆಲ್ಲ ಸಮಸ್ಯೆಯಾಗಲ್ಲ. ಅಲ್ಲದೇ ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ಬರೊಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬ್ಯಾಂಕ್ ಖಾತೆಗೆ ಹಣ ಹಾಕುವ ಕೆಲಸ ಮಾಡಬೇಕೆಂದು ಫಲಾನುಭವಿಗಳು ಮನವಿ ಮಾಡಿದರು.
ಈಗಾಗಲೇ ನಮ್ಮ ಸಿಬ್ಬಂದಿ ಮೇಲೆ ದೂರುಗಳು ಬಂದಿವೆ. ಮಾಸಾಶನ ವಿತರಣೆಗೆ ಲಂಚ ಪಡೆಯುತ್ತಿರುವ ಬಗ್ಗೆ ದೂರು ಸಲ್ಲಿಸಿದರೆ ಅದನ್ನು ಮೇಲಧಿಕಾರಿಗಳಿಗೆ ತಿಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
•ವಾಣಿ ಕುಲಕರ್ಣಿ,
ಪೋಸ್ಟ್ ಮಾಸ್ಟರ್, ಶಹಾಬಾದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
DK Sivakumar: ಪ್ರಜ್ವಲ್ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ
MUST WATCH
ಹೊಸ ಸೇರ್ಪಡೆ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ