ಚಿಕಿತ್ಸೆ ನೀಡಿದ ಡಾ.ಉಮೇಶ ಜಾಧವ
Team Udayavani, Jun 8, 2019, 3:02 AM IST
ಯಾದಗಿರಿ: ತಾಲೂಕಿನ ಮುಂಡರಗಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ, ಸ್ವತಃ ಚಿಕಿತ್ಸೆ ನೀಡುವ ಮೂಲಕ ಕಲಬುರಗಿ ಸಂಸದ ಡಾ| ಉಮೇಶ ಜಾಧವ್ ಮಾನವೀಯತೆ ಮೆರೆದಿದ್ದಾರೆ.
ಮುಂಡರಗಿ ಬಳಿ ಟಂಟಂ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನಲ್ಲಿ ತೆರಳುತ್ತಿದ್ದ ಟಿಕ್ಯಾ (35), ನರೇಶ (25) ಎಂಬುವವರು ತೀವ್ರ ಗಾಯಗೊಂಡಿದ್ದರು. ಸಂಸದ ಜಾಧವ್ ಅವರು ಯಾದಗಿರಿಯಿಂದ ಸೈದಾಪುರ ರೈಲ್ವೆ ಕೋಚ್ ಫ್ಯಾಕ್ಟರಿ ವೀಕ್ಷಣೆಗೆ ತೆರಳುತ್ತಿರುವ ಮಾರ್ಗ ಮಧ್ಯೆಯೇ ಅಪಘಾತದ ವಿಷಯ ತಿಳಿದು ಹಿಂತಿರುಗಿ ಸ್ಥಳಕ್ಕಾಗಮಿಸಿದರು.
ಗಾಯಾಳುಗಳು ತೀವ್ರ ರಕ್ತಸ್ರಾವದಿಂದ ಬಳಲುತ್ತಿರುವುದನ್ನು ಕಂಡು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ, ತಾವೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.