ಮೈತ್ರಿಯಿಂದಾಗಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ
Team Udayavani, Jun 8, 2019, 3:03 AM IST
ನಾಗಮಂಗಲ: ಈಗಿನ ಸನ್ನಿವೇಶಗಳನ್ನು ಕಾಂಗ್ರೆಸ್ನ ನಾಯಕರು ಸೂಕ್ಷ್ಮವಾಗಿ ಅವಲೋಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಕಷ್ಟಕರವಾಗಿರುತ್ತವೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಭವಿಷ್ಯ ನುಡಿದರು.
ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿ, “ರಾಷ್ಟ್ರೀಯ ನಾಯಕರ ಮೈತ್ರಿ ಬಗೆಗಿನ ತೀರ್ಮಾನಕ್ಕೆ ನಾನು ಸಂಪೂರ್ಣ ಬದ್ಧ. ಪಕ್ಷದ ಯಾವುದೇ ನಿರ್ಣಯವನ್ನು ನಾನು ಟೀಕಿಸಲು ಹೋಗುವುದಿಲ್ಲ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರು ಇರುವ ಗೊಂದಲಗಳನ್ನು ಪೂರ್ಣ ಪ್ರಮಾಣದಲ್ಲಿ ಸರಿಪಡಿಸಬೇಕು.
ಮೈತ್ರಿ ಸರ್ಕಾರದ ನಡೆ ನೋಡುತ್ತಿದ್ದರೆ ಕಾಂಗ್ರೆಸ್ಗೆ ಒಳ್ಳೆಯ ಭವಿಷ್ಯವಂತೂ ಗೋಚರಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೂ ಬುದ್ಧಿ ಕಲಿಯದೇ ಹೋದರೆ ಕಾಂಗ್ರೆಸ್ ಪಕ್ಷದ ನಾವೆಲ್ಲರೂ ಮತ್ತಷ್ಟು ನೋವು ಅನುಭವಿಸಬೇಕಾಗುತ್ತದೆ. ಜೆಡಿಎಸ್ನವರಿಗೆ ಜನ ಇನ್ನಷ್ಟು ಬುದ್ಧಿ ಕಲಿಸುತ್ತಾರೆ ಎಂದರು.