“ಮುಸ್ಲಿಂ ಪ್ರಭಾಕರನ್’ ಸೃಷ್ಟಿ ಯತ್ನ ಬೇಡ
Team Udayavani, Jun 10, 2019, 6:00 AM IST
ಕೊಲೊಂಬೋ: ಎಪ್ರಿಲ್ನಲ್ಲಿ ಈಸ್ಟರ್ ಬಾಂಬ್ ದಾಳಿ ನಡೆದ ಬಳಿಕ ದೇಶ ಇಬ್ಭಾಗವಾಗಿದೆ ಎನ್ನುವುದನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಒಪ್ಪಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಎಲ್ಟಿಟಿಇ ವೇಲುಪಿಳ್ಳೆ ಪ್ರಭಾಕರನ್ನನ್ನು ಮುಖ್ಯಸ್ಥನಾಗಿ ಹೊಂದಿದ್ದಂತೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಮುಸ್ಲಿಂ ಪ್ರಭಾಕರನ್ನನ್ನು ಸೃಷ್ಟಿಸುವ ಪ್ರಯತ್ನ ನಡೆಯುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ನಾವು ದೇಶವನ್ನು ವಿಭಜಿಸಿದರೆ ದುಷ್ಪರಿಣಾಮ ಬೀರಲಿದೆ. ಮತ್ತೂಂದು ಯುದ್ಧ ಶುರುವಾಗಲಿದೆ’ ಎಂದಿದ್ದಾರೆ.