ಪರಿಸರ ದಿನಾಚರಣೆ: 80 ಸಸಿ ನೆಟ್ಟ ಯುವಕರು
Team Udayavani, Jun 10, 2019, 11:12 AM IST
ಬೇತಮಂಗಲ ಹೋಬಳಿ ವ್ಯಾಪ್ತಿಯ ಹುಲ್ಕೂರು ಯುವಕರು ತಮ್ಮ ಗ್ರಾಮದ ಮುಖ್ಯದ್ವಾರದವರೆಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟರು.
ಬೇತಮಂಗಲ: ಹೋಬಳಿ ವ್ಯಾಪ್ತಿಯ ಹುಲ್ಕೂರು ಯುವಕರು ಮತ್ತು ಗ್ರಾಮಸ್ಥರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದ ಮುಖ್ಯದ್ವಾರದವರೆಗೂ ಸಸಿ ನೆಟ್ಟರು.
ಬಂಗಾರು ತಿರುಪತಿ ದೇಗುಲದಿಂದ 1 ಕಿ.ಮೀ ದೂರದಲ್ಲಿರುವ ಗ್ರಾಮವು ಇತರರಿಗೆ ಮಾದರಿಯಾಗಬೇಕೆಂಬ ದೂರ ದೃಷ್ಟಿಯಿಂದ ಗ್ರಾಮದ ರಸ್ತೆಯ ಎರಡೂ ಬದಿಯಲ್ಲಿ ಸಸಿ ನೆಡಲಾಯಿತು ಎಂದು ಯುವಕರು ಹೇಳಿದರು.
ಮೊದಲ ಬಾರಿಗೆ ಸಸಿಗಳ ನೆಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಪರಿಸರ ಬೆಳೆಸಿ-ಉಳಿಸಲು ಮುಂದಾಗಿದ್ದೇವೆ. ಗಿಡಮರ ಬೆಳೆಸುವುದರಿಂದ ಉತ್ತಮ ವಾತಾವರಣ ನಿರ್ಮಾಣಗೊಂಡು, ಮಳೆ-ಬೆಳೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹುಲ್ಕೂರು ಗ್ರಾಮದಲ್ಲಿ 80 ಸಸಿ ನೆಡುವ ಉದ್ದೇಶ ಹೊಂದಿದ್ದು, ಸುತ್ತಲೂ ಬೇಲಿ ನಿರ್ಮಿಸಿ ಮರಗಳಾಗಿ ಬೆಳೆಸಲು ಪಣತೋಡುವುದಾಗಿ ತಿಳಿಸಿದರು. ಯುವಕರಾದ ಪುರುಷೋತ್ತಮ್, ಶ್ರೀಕಾಂತ್, ಹರೀಶ್, ಗೋಪಾಲ್, ಸುರೇಶ್, ಧಮೇಂದ್ರ, ಅಮರೇಶ್, ವೇಣುಗೌಡ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್