ಛೋಟಾ ಬಾಂಬೆ ಸಿನಿಮಾ ಶೂಟಿಂಗ್ ಹುಬ್ಳೀಲಿ ಶುರು
Team Udayavani, Jun 10, 2019, 1:17 PM IST
ಹುಬ್ಬಳ್ಳಿ: ಛೋಟಾ ಬಾಂಬೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.
ಹುಬ್ಬಳ್ಳಿ: ವೈಕೆ ಕ್ರಿಯೇಷನ್ಸ್ದಡಿ “ಛೋಟಾ ಬಾಂಬೆ’ ಕನ್ನಡ ಚಲನಚಿತ್ರದ ಚಿತ್ರೀಕರಣ ಇಲ್ಲಿನ ಗೋಕುಲ ರಸ್ತೆಯ ಲೋಟಸ್ ಗಾರ್ಡನ್ದಲ್ಲಿ ರವಿವಾರದಿಂದ ಆರಂಭಗೊಂಡಿತು. ಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಯುಸುಫ ಖಾನ್ ಹಾಗೂ ಸಹ ನಿರ್ಮಾಪಕ ಅಶಾದ್ ಖಾನ ಕಿತ್ತೂರ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ನಿರ್ದೇಶಕ ಯುಸುಫ ಖಾನ್, ಹೂ ಬಳ್ಳಿ ಎನ್ನುವ ಊರು ಛೋಟಾ ಬಾಂಬೆ ಹೇಗಾಯಿತು. ಈ ಛೋಟಾ ಬಾಂಬೆ ಪುನಃ ಹೂ ಬಳ್ಳಿ ಆಗಲು ಏನು ಮಾಡಬೇಕು ಎಂಬ ಸಂದೇಶ ನೀಡುವುದೇ ಚಿತ್ರದ ಮುಖ್ಯ ತಿರುಳಾಗಿದೆ. 40 ದಿನಗಳ ಕಾಲ ಹುಬ್ಬಳ್ಳಿಯಲ್ಲಿಯೇ ಚಿತ್ರೀಕರಣವಾಗಲಿದೆ. ಇದರಲ್ಲಿ ಐದು ಹಾಡುಗಳಿವೆ ಎಂದರು.
ನಾನು ಇಲ್ಲಿಯೇ ಹುಟ್ಟಿ ಬೆಳೆದವ. ಸದ್ಯ ಮುಂಬಯಿಯಲ್ಲಿ ವಾಸುತ್ತಿದ್ದು, ಬಾಲಿವುಡ್ ನಟ ನಾನಾ ಪಾಟೇಕರ ಅವರ ಜೊತೆ ಕೆಲಸ ಮಾಡಿದ ಅನುಭವವಿದೆ. ಈ ಮೊದಲು ‘ನೀ ನನ್ನ ಜೀವ’ ಚಿತ್ರ ನಿರ್ಮಿಸಿದ್ದೆ. ಉತ್ತರ ಕರ್ನಾಟಕ ಭಾಗದ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದಿಂದ ಛೋಟಾ ಬಾಂಬೆ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾಯಕ, ನಾಯಕಿ ಸೇರಿದಂತೆ ಬಹುತೇಕ ಕಲಾವಿದರು ಈ ಭಾಗದವರೇ ಆಗಿದ್ದಾರೆ ಎಂದು ತಿಳಿಸಿದರು. ನಟರಾದ ಸೂರಜ್ ಸಾಸನೂರ, ಅಭಿಷೇಕ ಜಾಲಿಹಾಳ, ಶೆನೋಯ್ ಕಾಟವೆ, ಯಶಸ್ವಿನಿ ಶೆಟ್ಟಿ, ಶಿವು ಹಿರೇಭೈರಗಿ, ಸುನಿಲ ಪತ್ರಿ, ಸಲೀಂ ಎಂ. ಇನ್ನಿತರೆ ಕಲಾವಿದರು ಹಾಗೂ ಗಣ್ಯರಾದ ಪ್ರಸಾದ ಶೆಟ್ಟಿ, ಪ್ರಶಾಂತ ಶೆಟ್ಟಿ ಮೊದಲಾದವರಿದ್ದರು.
ತಾರಾಗಣ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್