ಸ್ಟಾಂಪ್‌ ಪೇಪರ್‌ ಕರಾಮತ್ತು; ಮನೆಗಳಿಗೆ ಆಪತ್ತು

•ಸೂರು ಕಳೆದುಕೊಂಡು ಬೀದಿಗೆ ಬಂದವರ ಗೋಳು•ಸಾಲ ಮಾಡಿ, ಚಿನ್ನಾಭರಣ ಮಾರಾಟ ಮಾಡಿ ಕಟ್ಟಿದ ಮನೆ ಹಾಳು

Team Udayavani, Jun 11, 2019, 7:07 AM IST

hubali-tdy-1..

ಹುಬ್ಬಳ್ಳಿ: ಸ್ವಂತದ್ದೊಂದು ಸೂರು ಹೊಂದಬೇಕೆಂಬ ಆಸೆಯಿಂದ ಯಾರನ್ನೋ ನಂಬಿ ನಗರ ಮಧ್ಯಭಾಗದಲ್ಲಿ ಕಡಿಮೆ ಹಣಕ್ಕೆ ಜಾಗ ಸಿಗುತ್ತದೆಯಲ್ಲ ಎಂದು ಹಿಂದೆ-ಮುಂದೆ ನೋಡದೆ ನಿವೇಶನ ಪಡೆದು, ಮನೆ ಕಟ್ಟಿದವರೀಗ ಪಶ್ಚಾತಾಪ ಪಡುವಂತಾಗಿದೆ. ಇಲ್ಲಿನ ಬೆಂಗೇರಿಯ ಸುಮಾರು 72 ಮನೆಯವರು ಹಣವೂ ಇಲ್ಲ, ಮನೆಯೂ ಇಲ್ಲದೆ ಅಕ್ಷರಶಃ ಬೀದಿಪಾಲಾದ ಸ್ಥಿತಿ ಅನುಭವಿಸುವಂತಾಗಿದೆ.

ಇಲ್ಲಿನ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಬಳಿ ಸುಮಾರು 2 ಎಕರೆ 28 ಗುಂಟೆ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡಿದ್ದ 52 ಕುಟುಂಬಗಳು ಯಾರೋ ಮಾಡಿದ ತಪ್ಪಿಗೆ ಇದೀಗ ಮನೆ ಕಳೆದುಕೊಳ್ಳುವಂತಾಗಿದೆ. ಕಳೆದ 20-30 ವರ್ಷಗಳಿಂದ ಇದ್ದ ಜಾಗ ಇನ್ನೇನು ತಮ್ಮದಾಯಿತು ಎಂದು ನಂಬಿ ಸಾಲ ಮಾಡಿ, ಚಿನ್ನಾಭರಣ ಮಾರಾಟ ಮಾಡಿ ಮನೆ ಕಟ್ಟಿದವರೀಗ ಎಲ್ಲವನ್ನೂ ಕಳೆದುಕೊಂಡಿದ್ದಾರೆ.

ಕಡಿಮೆ ದರದಲ್ಲಿ ಜಾಗ ಕೊಡುತ್ತೇವೆಂದು ಜನರನ್ನು ನಂಬಿಸಿ ಇನ್ನೊಬ್ಬರ ಜಾಗ ಮಾರಾಟ ಮಾಡುವವರ ದಂಧೆ ನಗರದಲ್ಲಿ ಜೋರಾಗಿ ನಡೆಯುತ್ತಿದೆ. ಇಂತಹ ವಂಚಕರಿಗೆ ಮಧ್ಯಮವರ್ಗ, ಬಡವರೇ ಟಾರ್ಗೆಟ್. ಏಕೆಂದರೆ ಅವರು ಇದ್ದ ಹಣದಲ್ಲಿಯೇ ಮನೆ ಕಟ್ಟಿಸಿಕೊಳ್ಳಬೇಕೆಂಬ ಕನಸು ಕಂಡಿರುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಳ್ಳುವ ಖದೀಮರ ಜಾಲವು ಅವರಿಗೆ ಕಡಿಮೆ ದರದಲ್ಲಿ ಜಾಗ ಕೊಡಿಸುತ್ತೇವೆಂದು 10-20 ರೂ. ಬಾಂಡ್‌ ಪೇಪರ್‌ನಲ್ಲಿ ಬರೆದುಕೊಟ್ಟು ಬಿಡುತ್ತಾರೆ. ಒಂದು ವೇಳೆ ಜಾಗಕ್ಕೆ ನೋಂದಣಿ ಮಾಡಿಸಬೇಕೆಂದರೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ಅಲ್ಲದೆ ಬ್ಯಾಂಕ್‌ನಿಂದ ಸಾಲ ಮಾಡಿ ಕಟ್ಟಿಸಬೇಕೆಂದರೂ ಇನ್ನಿತರೆ ಕಾಗದಪತ್ರಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ ಎಂಬುದು ಬಹುತೇಕ ಬಡವರ ಆಲೋಚನೆ. ಹೀಗಾಗಿ ವಂಚಕರು ಇದನ್ನೇ ತಮ್ಮ ಬಂಡವಾಳವನ್ನಾಗಿಸಿಕೊಂಡು ಯಾರದೋ ಜಾಗವನ್ನು ತಮ್ಮದೆಂದು ನಂಬಿಸಿ ಬಡವರನ್ನು ವಂಚಿಸುತ್ತಿರುವುದು ಸಾಮಾನ್ಯವಾಗಿದೆ.

ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಬಳಿಯ ಮೋಹನ ಮಂಕಣಿ ಎಂಬುವರ ಮಾಲೀಕತ್ವದ ಜಾಗೆಯಲ್ಲೂ ನಡೆದದ್ದು ಇದೇ ರೀತಿ. ಮಂಕಣಿ ಅವರ ಜಾಗವನ್ನು ತಮ್ಮದೆಂದು ನಂಬಿಸಿ ಸುಮಾರು 52 ಕುಟುಂಬವರಿಗೆ ಮಾರಾಟ ಮಾಡಲಾಗಿದೆ. ಜಾಗ ಮಾರಿದವರು ಆರಾಮವಾಗಿದ್ದಾರೆ, ಖರೀದಿಸಿದವರು ಮಾತ್ರ ಬೀದಿಪಾಲಾಗಿ ಮುಂದೇನು ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ದುಡಿದ ಹಣದಲ್ಲಿ ಉಳಿತಾಯ ಮಾಡಿ, ಸಾಲ ಮಾಡಿ ಕಟ್ಟಿದ ಮನೆಯಲ್ಲಿ ಇರಲು ಬಿಡುವುದಿಲ್ಲವೆಂದರೆ ಅಲ್ಲಿಯೇ ಬಿದ್ದು ಸಾಯಲಾದರು ನನ್ನನ್ನು ಬಿಡಿ’ ಎಂದು ಮನೆಯೊಳಗೆ ಹೋಗಲು ತಡೆಯುತ್ತಿದ್ದ ಪೊಲೀಸರನ್ನು ಕೂಲಿ ಮಾಡಿಕೊಂಡಿದ್ದ ವೃದ್ಧ ಶರೀಫಸಾಬ್‌ ನದಾಫ್ ಹಲವು ಬಾರಿ ಅಂಗಲಾಚಿದ್ದು ಕಂಡು ಬಂದಿತು.
ಕುಟುಂಬದ ಆಸರೆಗಾಗಿ ಮನೆ ಮಾಡಿಕೊಳ್ಳಬೇಕೆಂಬ ಆಸೆಯಿಂದ ತವರು ಮನೆಯಲ್ಲಿ ಜಗಳ ಮಾಡಿಕೊಂಡು, ಹೊಲ ಮಾರಿಸಿ ಹಣ ತಂದು ಮನೆ ಕಟ್ಟಿಸಿಕೊಂಡಿದ್ದೆ. ಈಗ ಸೂರು ಇಲ್ಲವಾಯಿತು. ತವರು ಮನೆಯವರು ನನ್ನನ್ನು ತಮ್ಮಲ್ಲಿ ಇಟ್ಟುಕೊಳ್ಳುವುದಿಲ್ಲ. ನಾನು ಮನೆ ಮತ್ತು ತವರು ಮನೆ ಎರಡು ಕಳೆದುಕೊಂಡ ಮೇಲೆ ವಯಸ್ಸಾದ ಪತಿ, ನಾಲ್ಕು ಹೆಣ್ಣುಮಕ್ಕಳು, ಮಂದ ಮಗನೊಂದಿಗೆ ಜೀವನ ನಡೆಸುವುದೇ ಕಷ್ಟ. •ಬೀಬಿಜಾನ ನದಾಫ, ಮನೆ ಕಳೆದುಕೊಂಡ ಮಹಿಳೆ

ಮನೆ ಕಳೆದುಕೊಂಡವರು ಬಿಕ್ಕಿ ಬಿಕ್ಕಿ ಅತ್ತರು:

ದುಡಿದ ಹಣದಲ್ಲಿ ಒಂದಿಷ್ಟು ಹಣ ಉಳಿಸಿ, ಸಾಲಸೋಲ ಮಾಡಿ ಕನಸಿನ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಜನರು ತಮ್ಮ ಎದುರೇ ಜೆಸಿಬಿ ಯಂತ್ರಗಳಿಂದ ಧರೆಗುರುಳಿತ್ತಿದ್ದ ಮನೆಯನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತರು, ಎದೆ ಬಡಿದುಕೊಂಡು ಗೋಗರೆಯುತ್ತಿದ್ದರು. ಈ ದೃಶ್ಯ ಎಂಥವರ ಮನವನ್ನೂ ಕಲಕುವಂತಿತ್ತು. ಆದರೆ ಅಲ್ಲಿದ್ದ ಬಹುತೇಕರು ಅಸಹಾಯಕರಾಗಿದ್ದರು. ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ ಎನ್ನುತ್ತಿದ್ದರು.
•ಶಿವಶಂಕರ ಕಂಠಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.