ಶೇಕಮಲೆಯ 2 ಕಡೆ ಬಸ್ಸು ತಂಗುದಾಣ ನಿರ್ಮಾಣ


Team Udayavani, Jun 13, 2019, 5:00 AM IST

t-13

ಬಡಗನ್ನೂರು: ಶೇಕಮಲೆಯ ಎರಡು ಕಡೆಗಳಲ್ಲಿ ಬಸ್ಸು ತಂಗುದಾಣ ನಿರ್ಮಾಣ ಮಾಡುವ ಬಗ್ಗೆ ಅರಿಯಡ್ಕ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಸ್‌. ಅವರ ಅಧ್ಯಕ್ಷತೆಯಲ್ಲಿ ಜೂ.  11ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಅರಿಯಡ್ಕ ಗ್ರಾಮದ ಕೆಳಗಿನ ಶೇಕಮಲೆ ಹಾಗೂ ಮೇಲಿನ ಶೇಕಮಲೆಯಲ್ಲಿ ಬಸ್ಸು ತಂಗುದಾಣ ನಿರ್ಮಾಣದ ಬಗ್ಗೆ ಪರ ವಿರೋಧ ಸಾರ್ವಜನಿಕ ಅರ್ಜಿ ಪರಿಶೀಲಿಸಿ ಮಾತನಾಡಿದ ಪಿಡಿಒ ಪದ್ಮಾ ಕುಮಾರಿ, ಬಸ್ಸು ತಂಗುದಾಣದ ವಿಷಯದಲ್ಲಿ ನಾನು ತುಂಬಾ ಕಿರುಕುಳ ಅನುಭವಿಸಿದ್ದೇನೆ. ಅನೇಕ ಬೆದರಿಕೆ ಕರೆಗಳು ಬಂದಿದೆ. ಆಲೋಚನೆ ಮಾಡಿ ಕ್ರಿಯಾ ಯೋಜನೆ ತಯಾರಿಸಬೇಕು. ಈ ಬಗ್ಗೆ ಸರಿಯಾದ ತಿರ್ಮಾನ ಕೈಗೊಂಡ ಬಳಿಕವೇ ತಂಗುದಾಣ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದು ಎಂದರು. ಅಧ್ಯಕ್ಷೆ ಸವಿತಾ ಎಸ್‌. ಮಾತನಾಡಿ, ತಂಗುದಾಣದ ವಿಷಯ ಕಳೆದ ಗ್ರಾಮಸಭೆಯಲ್ಲಿ ಪ್ರಸ್ತಾವಿಸಿ ಎರಡೂ ಕಡೆ ಬಸ್ಸು ತಂಗುದಾಣ ಮಾಡುವ ಬಗ್ಗೆ ತಿಳಿಸಲಾಗಿದೆ. ಮತ್ತೆ ಆ ವಿಚಾರವನ್ನು ಸಾಮಾನ್ಯ ಸಭೆಗೆ ಏಕೆ ತರಬಾರದು ಎಂದರು.

ಈ ಹಿಂದೆ ನಿರ್ಧರಿಸಿದಂತೆ ಎರಡು ಕಡೆ ತಂಗುದಾಣ ಮಾಡವುದಾದರೆ ಮಾಡಿ. ಇಲ್ಲವಾದರೆ ಬೇಡ ಎಂದು ರಾಜೇಶ್‌ ಎಚ್‌. ತಿಳಿಸಿದರು. ಅವರಿಗೆ ಸಂತೋಷ್‌ ಕುಮಾರ್‌, ಹೊನ್ನಪ್ಪ ಪುಜಾರಿ, ರೋಹಿತ್‌ ಪೂಜಾರಿ, ಪ್ರಮಲತಾ ಜೆ. ರೈ ಧ್ವನಿಗೂಡಿಸಿದರು. ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ, ಎರಡು ಕಡೆಗಳಲ್ಲಿ ತಂಗುದಾಣದ ಅನಿವಾರ್ಯತೆ ಇದೆ. ಆಕ್ಷೇಪ ಕೊಟ್ಟವರ ಮನವೊಲಿಸಿ ಈ ಹಿಂದೆ ನಿಗದಿತ ಸ್ಥಳದಲ್ಲಿ ತಂಗುದಾಣ ನಿರ್ಮಾಣ ಮಾಡೋಣ ಎಂದರು. ಈ ಬಗ್ಗೆ ಸರ್ವ ಸದಸ್ಯರ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳಲಾಯಿತು.

ಕೊಳವೆಬಾವಿ: ಪರ-ವಿರೋಧ ಚರ್ಚೆ
ದಲಿತ ಕುಟುಂಬದ ರಾಮಚಂದ್ರ ಬಿನ್‌ ಮಲ್ಲ ಅವರು ಕೊಳವೆ ಬಾವಿ ಕೊರೆಯಲು ಅನುಮತಿ ಕೇಳಿದ್ದಾರೆ. ಒಂದು ವೇಳೆ ಪಂಚಾಯತ್‌ ಕೊಳವೆ ಬಾವಿಗೆ ಸಮಸ್ಯೆ ಉಂಟಾದಲ್ಲಿ ತನ್ನ ಕೊಳವೆ ಬಾವಿಯಿಂದ ನೀರು ಕೊಡುವ ಬಗ್ಗೆ ಅಫಿದವತ್‌ ಮುಖಾಂತರ ತಿಳಿಸಿದ್ದಾರೆ. ಅವರಿಗೆ ಕೊಳವೆ ಬಾವಿ ಮಾಡಲು ಅನುಮತಿ ನೀಡೊಣ ಎಂದು ಉಪಾಧ್ಯಕ್ಷ ಲೋಕೇಶ್‌ ಚಾಕೋಟೆ ಹೇಳಿದರು.

ಸದಸ್ಯೆ ಶಶಿಕಲಾ ಚೌಟ ಮಾತನಾಡಿ, ಗ್ರಾ.ಪಂ. ಕೊಳವೆ ಬಾವಿಯ 500 ಮೀ. ಒಳಗಡೆ ಬೇರೆ ಕೊಳವೆ ಬಾವಿ ತೆಗೆಯಬಾರದು ಎನ್ನುವ ನಿಯಮ ಇದೆ. ಈ ಭಾಗದ 22 ಫ‌ಲಾನುಭವಿ ಕುಟುಂಬಗಳು ಪಂಚಾಯತ್‌ ಕೊಳವೆ ಬಾವಿಯಿಂದ ನೀರು ಪಡೆಯುತ್ತಿವೆ. ಅವರಿಗೆ ಅನ್ಯಾಯವಾಗಬಾರದು. ನೀರಿನ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಎಂದು ಹೇಳಿದರು.

ತಾರತಮ್ಯ ಮಾಡಬೇಡಿ
ಸದಸ್ಯ ಸಂತೋಷ್‌ ಕುಮಾರ್‌ ಕುತ್ಯಾಡಿ ಪ್ರತಿಕ್ರಿಯಿಸಿ, ಶ್ರೀಮಂತರಿ ಗಾದರೆ ತತ್‌ಕ್ಷಣ ಅನುಮತಿ ಕೊಡುತ್ತೀರಿ, ಬಡವರಿಗೆ ಏಕೆ ತಾರತಮ್ಯ ಮಾಡುವುದು ಎಂದು ಪ್ರಶ್ನಿಸಿದರು. ಪಂಚಾಯತ್‌ ಕೊಳವೆ ಬಾವಿಯ ಸುತ್ತಲಿನ ಎಲ್ಲ ಕೊಳವೆ ಬಾವಿಯನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಣಯ ಮಾಡುವಂತೆ ಒತ್ತಾಯಿಸಿದರು. ಸದಸ್ಯರಾದ ರೋಹಿತ್‌ ಪೂಜಾರಿ ಹಾಗೂ ರಾಜೇಶ್‌ ಧ್ವನಿಗೂಡಿಸಿದರು.

ಈ ಬಗ್ಗೆ ಆಡಳಿತ ಪಕ್ಷದ ಸದಸ್ಯರು ಬಹುಮತದ ಆಧಾರದ ಮೇಲೆ ಸರ್ವಾನುಮತದಿಂದ ಅನುಮತಿ ನೀಡಲು ತೀರ್ಮಾನಿಸಿದರು. ವಿಪಕ್ಷ ಸದಸ್ಯರು ಸಭೆ ಕರೆದು ತೀರ್ಮಾ ನಿಸುವಂತೆ ಒತ್ತಾಯಿಸಿದರು. ಎರಡು ರೀತಿಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು. ನೀರಿನ ಸಮಿತಿಯ ಸಭೆ ಕರೆಯಲು ತೀರ್ಮಾನಿಸಲಾಯಿತು.

ಸದಸ್ಯರಾದ ತಿಲಕ್‌ ರೈ ಕುತ್ಯಾಡಿ, ಮಹಾಲಿಂಗ ನಾಯ್ಕ, ರವೀಂದ್ರ ಪೂಜಾರಿ, ನವೀನ ಬಿ.ಡಿ., ಚಿತ್ರಾ ಎನ್‌., ಸಾವಿತ್ರಿ ಕುರುಂಜ, ಹೊನ್ನಪ್ಪ ಪೂಜಾರಿ, ಸುಂದರ, ಸದಾನಂದ ಮಣಿಯಾಣಿ, ಅಮೃತಾ, ಸರೋಜಿನಿ, ಸಹನಾ ನಳಿನಾಕ್ಷಿ, ಹೇಮಾವತಿ, ಸೀತರಾಮ ಮೇಲ್ಪಾದೆ, ನಿರ್ಮಲಾ ಎಸ್‌.ಪಿ., ಪಿಡಿಒ ಪದ್ಮಾ ಕುಮಾರಿ, ಕಾರ್ಯದರ್ಶಿ ಕೃಷ್ಣರಾಜ್‌ ಭಟ್‌ ಉಪಸ್ಥಿತರಿದ್ದರು. ಲೆಕ್ಕ ಸಹಾಯಕ ರವೀಂದ್ರ ಪಾಟೀಲ್‌ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಗುಮಾಸ್ತ ಪ್ರಭಾಕರ ಸರಕಾರದ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿ ಓದಿ ವಂದಿಸಿದರು. ಸಿಬಂದಿ ಸಹಕರಿಸಿದರು.

ತೆರಿಗೆ ಬಳಿಕ ಪರವಾನಿಗೆ
ಅರಿಯಡ್ಕ ಮಸೀದಿ ಕಟ್ಟಡದ ತೆರಿಗೆ ವಿನಾಯಿತಿ ಮಾಡಿ ಕಟ್ಟಡ ನವೀಕರಣ ಪರವಾನಿಗೆ ನೀಡುವಂತೆ ಬಂದಿದ್ದ ಅರ್ಜಿ ಬಗ್ಗೆ ಚರ್ಚಿಸಲಾಗಿ ತೆರಿಗೆ ಪಡೆದುಕೊಂಡ ಬಳಿಕ ಕಟ್ಟಡ ಪರವಾನಿಗೆ ನೀಡಲು ತೀರ್ಮಾನಿಸಲಾಯಿತು. ಕಾವು ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಪರಿಸರ ಮಲಿನ ಮಾಡುತ್ತಿರುವ ಬಗ್ಗೆ ಉಪಾಧ್ಯಕ್ಷ ಪ್ರಸ್ತಾವಿಸಿದರು. ಈ ಬಗ್ಗೆ ಸಂಸ್ಥೆಗೆ ನೋಟಿಸ್‌ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.