ಮಳೆಗಾಲ ಬಂತೆಂದರೆ ಸಮುದ್ರದ ಅಲೆ ಮನೆಗೆ ನುಗ್ಗುವ ಚಿಂತೆ
ಬಗೆಹರಿಯದ ಕಡಲ್ಕೊರತ ಸಮಸ್ಯೆ
Team Udayavani, Jun 13, 2019, 4:17 PM IST
ಅಂಕೋಲಾ: ಹಾರವಾಡಾದಲ್ಲಿ ಕಳೆದ ವರ್ಷ ಕಡಲ್ಕೊರೆತ ಆಗಿರುವುದು.
ಅರುಣ ಶೆಟ್ಟಿ
ಅಂಕೋಲಾ: ಮಳೆಗಾಲ ಬಂತೆಂದರೆ ಸಾಕು ಸಮುದ್ರ ತೀರದ ನಿವಾಸಿಗಳಿಗೆ ಎಲ್ಲಿಲ್ಲದ ಭಯ ಆವರಿಸುತ್ತೆ. ಎಲ್ಲಿ ಸಮುದ್ರದ ಅಲೆಗಳು ಮನೆಗೆ ನುಗ್ಗುತ್ತವೆ ಎನ್ನುವುದೆ ಚಿಂತೆ. ಹೀಗಾಗಿ ಮಳೆಗಾಲ ಎಂದರೆ ಸಮುದ್ರ ತಟದ ನಿವಾಸಿಗಳು ಯಾವಾಗ, ಎಲ್ಲಿ ಏನು ಅನಾಹುತ ಆಗುತ್ತದೆ ಎಂದು ಭಯಭೀತರಾಗುತ್ತಾರೆ.
ಮಳೆಗಾಲ ಸಮಿಪಿಸುತ್ತಿದ್ದಾಗ ಮಾತ್ರ ಕಡಲ್ಕೊರೆತ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ನೆನಪಾಗುತ್ತದೆ. ಬೇಸಿಗೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕೈಗೊಳ್ಳುವ ಬದಲು ಇಲಾಖೆ ನಿದ್ದೆಗೆ ಜಾರಿರುತ್ತದೆ. ಹೀಗಾಗಿ ಕಡಲ ಮಕ್ಕಳ ಆತಂಕಕ್ಕೆ ಕೊನೆಯೇ ಇಲ್ಲದಂತಾಗಿದೆ.
ಭಾವಿಕೇರಿ ಗಣೇಶಭಾಗದ ಕಡಲ ತಟದಲ್ಲಿ ಅಪೂರ್ಣ ಕಾಮಗಾರಿಯಿಂದಾಗಿ ನಿರಂತರ ಕಡಲ್ಕೊರೆತ ಉಂಟಾಗುತ್ತಿದೆ. ಹಾರವಾಡದಲ್ಲಿಯೂ ತಡೆಗೊಡೆ ನಿರ್ಮಿಸಿದರು ಇನ್ನೊಂದು ಬಾಗದಲ್ಲಿ ನೀರು ಒಳ ಹೊಕ್ಕುವ ಸಂಭವವು ಇದೆ. ಇಲ್ಲಿ ಹತ್ತಾರು ತೆಂಗಿನ ಮರಗಳ ಬುಡದಲ್ಲಿ ಕೊರಕಲು ಉಂಟಾಗಿ, ಮರಗಳು ನೆಲಕ್ಕುರುಳುವ ಹಂತದಲ್ಲಿವೆ. ಈ ಬಾರಿಯೂ ಕಡಲ ಕೊರೆತದಿಂದ ಮನೆಗಳಿಗೆ ನೀರು ನುಗ್ಗುವ ಸಂಭವವು ಇದೆ.
ಗಣೇಶಭಾಗ ಕಡಲ ತೀರದಲ್ಲಿ 9-10 ವರ್ಷಗಳಿಂದ ಕಡಲ್ಕೊರೆತ ಉಂಟಾಗುತ್ತಿದೆ. ಬೇಲೇಕೇರಿ ಭಾಗದಲ್ಲಿ 2004ರಿಂದ ಅದಿರು ವಹಿವಾಟು ನಡೆಸಲು ಸಮುದ್ರವನ್ನು ಅತಿಕ್ರಮಿಸಿ ಜಟ್ಟಿಗಳನ್ನು ನಿರ್ಮಿಸಿದ ಪರಿಣಾಮ ಭಾವಿಕೇರಿ ಗಣೇಶಭಾಗ ಪ್ರದೇಶದ ಮೇಲೆ ಪರಿಸರ ವೈಪರೀತ್ಯ ಪರಿಣಾಮದಿಂದಾಗಿ ಕಡಲ್ಕೊರೆತ ಕಂಡು ಬಂದಿದೆ. ಸುಮಾರು 20 ಎಕರೆ ಪ್ರದೇಶವು ಸಮುದ್ರ ನೀರು ನುಂಗಿದ ಪರಿಣಾಮ ರೈತರ ಭೂಮಿ ಬಂಜರಾಗಿದೆ. 12 ವರ್ಷಗಳಿಂದ ಕಡಲ್ಕೊರೆತವನ್ನು ತಡೆಯಲು ಸಂಬಂಧಪಟ್ಟ ಇಲಾಖೆ ವಿಫಲವಾಗಿದೆ. ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಮಸ್ಯೆ ಮುಂದುವರೆದಿದೆ.
ತಾಲೂಕಿನಲ್ಲಿ ಫಲವತ್ತಾದ ಉಸುಕು ಮಿಶ್ರಿತ ಮಣ್ಣು ಭಾವಿಕೇರಿಯದಾಗಿದೆ. ಸಮುದ್ರದ ಉಪ್ಪು ನೀರು ನುಗ್ಗಿದ ಪರಿಣಾಮ ರೈತರು ಸಂಕಷ್ಟ ಪಡುವಂತಾಗಿದೆ. ಇನ್ನು 250 ಮೀ. ಪ್ರದೇಶದಿಂದ ನೀರು ನುಗ್ಗಲು ಆರಂಭಿಸಿದೆ. ಕೂಡಲೇ ಉಸುಕಿನ ಚೀಲವನ್ನಾದರೂ ಹಾಕಿ ರೈತರನ್ನು ರಕ್ಷಿಸಬೇಕೆಂದು ಭಾವಿಕೇರಿಯ ಉದಯ ನಾಯಕ ಡಿಸಿ ಹಾಗೂ ಸಂಬಂಧ ಪಟ್ಟ ಇಲಾಖೆಗೆ ಒತ್ತಾಯಿಸಿದ್ದಾರೆ.
ಸಮುದ್ರದ ಬೋರ್ಗರೆವ ಕಡಲ್ಕೊರೆತದಿಂದ ಜನರನ್ನು ರಕ್ಷಿಸಲು ಸರಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಆದರೆ ಕರಾವಳಿ ತೀರದಲ್ಲಿ ಅನೇಕ ಕಡೆಗಳಲ್ಲಿ ಸಮುದ್ರ ಕೊರೆತಕ್ಕೆ ತಡೆಗೋಡೆ ಆಗಬೇಕಾದ ಅವಶ್ಯಕತೆ ಇದ್ದುದರಿಂದ ಸರಕಾರದಿಂದ ಬರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಶಾಶ್ವತ ಪರಿಹಾರಕ್ಕೆ ಜನರ ಒತ್ತಾಯ
ನೆರೆಯ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಅನುದಾನ ಬಳಸಿ ಕಡಲ್ಕೊರೆತ ಸಮಸ್ಯೆಗೆ ಪರಿಹಾರ ಕಂಡು ಕೊಂಡಿರುವ ಹಾಗೆ ಇಲ್ಲೂ ಕಡಲ ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಲು ಜಿಲ್ಲೆಯ ಸಚಿವ ಆರ್.ವಿ. ದೇಶಪಾಂಡೆ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಕಾರ್ಯಪ್ರವೃತ್ತರಾಗಬೇಕೆಂದು ಜನರು ಆಗ್ರಹಿಸಿದ್ದಾರೆ. ಇನ್ನಾದರೂ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಬಹುದೆಂದು ಇಲ್ಲಿನ ಜನತೆ ಕಾಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ