ಮದುವೆ ಮನೆಯಲ್ಲಿ ಸಸಿ ವಿತರಿಸಿ ಪರಿಸರ ಜಾಗೃತಿ
Team Udayavani, Jun 17, 2019, 3:02 PM IST
ಗಂಗಾವತಿ: ತಾಲೂಕಿನ ಹಣವಾಳ ಗ್ರಾಮದ ಶಿಕ್ಷಕ ಜಗದೀಶ ರಸ್ತಾಪೂರ ಅವರ ಸರಳ ವಿವಾಹದಲ್ಲಿ ಮದುವೆಗೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸಲಾಯಿತು. ತಮ್ಮ ಗುರುಗಳಿಗೆ ಶುಭ ಕೋರಲು ಆಗಮಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಇಂಗ್ಲಿಷ್ ಶಬ್ಧಕೋಶ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ ರಸ್ತಾಪೂರ ಮಾತನಾಡಿ, ಮದುವೆಯ ಹೆಸರಿನಲ್ಲಿ ದುಂದುವೆಚ್ಚ ಹೆಚ್ಚಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ಇತರರಿಗೆ ಉಪಯುಕ್ತವಾಗುವ ರೀತಿಯಲ್ಲಿ ಯೋಚಿಸಬೇಕು. ಮದುವೆಗಾಗಿ ಪೆಂಡಾಲ್ ಸೇರಿ ಭರ್ಜರಿ ಅಲಂಕಾರ ಮಾಡಿ ಹಣ ಪೋಲಾಗದಂತೆ ತಡೆಯಲು ಬಡಶಾಲಾ ಮಕ್ಕಳಿಗೆ ಅಥವಾ ವೃದ್ಧಾಶ್ರಮ, ಅನಾಥಶ್ರಾಮಗಳಿಗೆ ನೆರವಾಗಬೇಕು. ಗಿಡಮರಗಳ ಕೊರತೆಯಿಂದಾಗಿ ಮಳೆಯ ಬಾರದಂತಾಗಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು ಎಂದರು. ಮದುವೆ ಆಗಮಿಸಿದ್ದ ಪ್ರತಿಯಯೊಬ್ಬರೂ ನೂತನ ದಂಪತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ