ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿ 2 ಭೂಕಂಪ; ಸಾವು ನೋವು ಇಲ್ಲ
Team Udayavani, Jun 20, 2019, 12:14 PM IST
ಪುಣೆ : ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂದು ಬೆಳಗ್ಗೆ 4.8 ಮತ್ತು 3 ಅಂಕಗಳ ಲಘು ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪಗಳಿಂದ ಯಾವುದೇ ಜೀವ ಹಾನಿ, ನಾಶ ನಷ್ಟ ಸಂಭವಿಸಿಲ್ಲ ಎಂದವರು ಹೇಳಿದ್ದಾರೆ.
ಭೂಕಂಪದ ಅನುಭವವಾಗುತ್ತಲೇ ಜನರು ಭಯ ಭೀತರಾಗಿ ತಮ್ಮ ಮನೆ, ಕಟ್ಟಡಗಳಿಂದ ಹೊರಗೋಡಿ ಬಂದರು. ಮೊದಲ ಭೂಕಂಪ ಬೆಳಗ್ಗೆ 7.47ರ ಹೊತ್ತಿಗೆ ಸಂಭವಿಸಿತು.
ಎರಡನೇ ಭೂಕಂಪ ಬೆಳಗ್ಗೆ 8.27ರ ಹೊತ್ತಿಗೆ ಸಂಭವಿಸಿತು. ಪುಣೆಯಿಂದ ಸುಮಾರು 120 ಕಿ.ಮೀ. ದೂರದ ಸಾತಾರ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದವು ಎಂದು ಭಾರತೀಯ ಹವಾಮಾನ ಇಲಾಖಾ ಕೇಂದ್ರ ಹೇಳಿದರು.
ಎರಡೂ ಭೂಕಂಪಗಳ ಕೇಂದ್ರ ಬಿಂದು ಅನುಕ್ರಮವಾಗಿ 10 ಕಿ.ಮೀ. ಮತ್ತು 5 ಕಿ.ಮೀ. ನೆಲದಾಳದಲ್ಲಿ ಕಂಡು ಬಂದವು ಎಂದು ಕೇಂದ್ರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ