ಹಾಡಹಗಲೇ ಜನಸಮೂಹದ ಮಧ್ಯೆ ಲಾಂಗು-ಮಚ್ಚಿನ ಅಬ್ಬರ
Team Udayavani, Jun 21, 2019, 3:14 PM IST
ಹುಬ್ಬಳ್ಳಿ: ಅವಳಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಹಾಡಹಗಲೇ ಮಾರಕಾಸ್ತ್ರಗಳಿಂದ ಗುಂಪುಗಳು ದಾಳಿಗಿಳಿಯುತ್ತಿರುವ ಘಟನೆಗಳು ನಾಗರಿಕರ ನೆಮ್ಮದಿ ಕೆಡಿಸುತ್ತಿದೆ.
ತಮ್ಮ ವೈಯಕ್ತಿಕ ವಿಚಾರಕ್ಕೆ ಹಾಗೂ ಹಳೆಯ ದ್ವೇಷವನ್ನಿಟ್ಟುಕೊಂಡು ಪುಢಾರಿಗಳ ಗುಂಪು ಒಬ್ಬರ ಮೇಲೆ ಇನ್ನೊಬ್ಬರು ಮಾರಕಾಸ್ತ್ರ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಾಗಿದೆ. ಗುಂಪು ಪೊಲೀಸರ ಭಯವಿಲ್ಲದೆ ಜನಸಮೂಹದ ಮಧ್ಯೆಯೆ ತಲ್ವಾರ್, ಮಚ್ಚು ಝಳಪಿಸುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಜೂ. 7ರಂದು ಹಳೇಹುಬ್ಬಳ್ಳಿ ನೇಕಾರ ನಗರ ಈಶ್ವರನಗರದಲ್ಲಿ ಕ್ಷುಲ್ಲಕ ವಿಷಯವಾಗಿ ಸೆಟ್ಲಮೆಂಟ್ನ ಹುಸೇನಸಾಬ್ ಬಿಜಾಪುರಿ, ಜಾಧವ ಹಾಗೂ ಸೂರಿ, ಗಿರಿ ಗುಂಪಿನ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿತ್ತು. ಆಗ ಹುಸೇನಸಾಬಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು.
ಅದೇರೀತಿ ಜೂ. 10ರಂದು ಗಾರ್ಡನ್ ಪೇಟೆಯಲ್ಲಿ ಕಲಾಲ ಸಮಾಜದ ಜಾಗದ ವಿಷಯವಾಗಿ ಮಿರಜಕರ ಕುಟುಂಬದವರೊಂದಿಗೆ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಸಮಾಜದವರೊಂದಿಗೆ ತೆರಳಿ ತಕರಾರು ತೆಗೆದು ಹಲ್ಲೆ ಮಾಡಿದ್ದರು. ಈ ವಿಷಯವಾಗಿ ಸಮಾಜದ ಎರಡು ಗುಂಪಿನವರು ಘಂಟಿಕೇರಿ ಠಾಣೆ ಮುಂದೆ ಜಮಾಯಿಸಿದ್ದರು.
ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಜೂ. 14ರಂದು ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ ತನ್ನ ಸಹಚರರೊಂದಿಗೆ ಮಾರಕಾಸ್ತ್ರಗಳೊಂದಿಗೆ ದೇವೇಂದ್ರಪ್ಪ ಆಲಕುಂಟೆ ಕುಟುಂಬದವರ ಮೇಲೆ ಲಾಂಗು, ಮಚ್ಚು, ತಲ್ವಾರ್, ಕ್ರಿಕೆಟ್ ಬ್ಯಾಟ್ಗಳಿಂದ ಹಲ್ಲೆ ಮಾಡಿದ್ದರು. ಈ ಸಂದರ್ಭದಲ್ಲಿ ನಾಲ್ವರು ತೀವ್ರ ಗಾಯಗೊಂಡಿದ್ದರು. ಅಲ್ಲದೆ ಈ ಗುಂಪು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ಗಳಿಗೆ ಹಾನಿಪಡಿಸಿತ್ತು. ಈ ಘಟನೆಯಿಂದ ಅಲ್ಲಿದ್ದ ಮಕ್ಕಳು, ಮಹಿಳೆಯರು, ವೃದ್ಧರು ತೀವ್ರ ಆತಂಕಕ್ಕೊಳಗಾಗಿದ್ದರು. ಪುಢಾರಿಗಳು ತಲ್ವಾರ್, ಮಚ್ಚುಗಳನ್ನು ಹಿಡಿದು ಪ್ರದೇಶದ ತುಂಬೆಲ್ಲ ಓಡಾಡಿದ, ವಾಹನಗಳಿಗೆ ಹಾನಿಪಡಿಸಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿ ಕಮರಿಪೇಟೆ ಪೊಲೀಸರು ವೆಂಕಟೇಶ ಮೇಸ್ತ್ರಿ ಸೇರಿದಂತೆ ಮೂವರನ್ನು ಬಂಧಿಸಿ, ಕೆಲ ಷರತ್ತುಗೊಂದಿಗೆ ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಸಾರ್ವಜನಿಕವಾಗಿ ಮಚ್ಚು, ಲಾಂಗ್ಗಳನ್ನು ಝಳಪಿಸುತ್ತ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮಕೈಗೊಳ್ಳದೆ ಮೃದುಧೋರಣೆ ಅನುಸರಿಸಿದ ಪೊಲೀಸರ ಈ ನಡೆ ಬಗ್ಗೆ ಸಾರ್ವಜನಿಕರು ಕಂಗಾಲಾಗಿದ್ದಾರೆ.
ನೇಕಾರನಗರ ಈಶ್ವರ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬಂಧಿತರಾಗಿ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಗಳ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ವಾಹನಗಳನ್ನು ಜಖಂಗೊಳಿಸಿದೆ. ಇದನ್ನೆಲ್ಲ ನೋಡಿದ ಜನರು ಕಾರಾಗೃಹ ಆವರಣದಲ್ಲಿಯೇ ಹೊಡೆದಾಟ ನಡೆಸುತ್ತಾರೆಂದರೆ ಇನ್ನು ಉಳಿದ ಸ್ಥಳಗಳಲ್ಲಿ ಇವರ ಆರ್ಭಟ ಹೇಗಿರಬಾರದು. ಇವರಿಗೆ ಪೊಲೀಸರ ಭಯವಿಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
•ಶಿವಶಂಕರ ಕಂಠಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ