ರಾಜ್ಯದೆಲ್ಲೆಡೆ ಯೋಗ ದಿನಾಚರಣೆ ಸಂಭ್ರಮ
Team Udayavani, Jun 22, 2019, 3:08 AM IST
ಬೆಂಗಳೂರು: ಒಂದೆಡೆ ಸೂರ್ಯೋದಯ, ಇನ್ನೊಂದೆಡೆ ಜಾತಿ, ಧರ್ಮ, ವಯಸ್ಸಿನ ಭೇದವಿಲ್ಲದೆ ಆ ಸೂರ್ಯನಿಗೆ ನಮಸ್ಕರಿಸಿದ ಸಾವಿರಾರು ಮಂದಿ. ಬಳಿಕ ಯೋಗದ ವಿವಿಧ ಆಸನಗಳು, ಪ್ರಾಣಾಯಾಮ, ಧ್ಯಾನ… ಇದು 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಮುಂಜಾನೆ ರಾಜ್ಯದೆಲ್ಲೆಡೆ ನಡೆದ ಸಾಮೂಹಿಕ ಯೋಗದ ವೇಳೆ ಕಂಡು ಬಂದ ದೃಶ್ಯಗಳು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಇಲಾಖೆ, ರಾಜ್ಯ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮ ಆಯೋಜಿಸಿತ್ತು. ಇಲ್ಲಿ ಬೆಂಗಳೂರಿನ ವಿವಿಧ ಯೋಗ ಸಂಸ್ಥೆಗಳ 10 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
“ಹೃದಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಎಸ್.ಪಾಟೀಲ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂಖಾನ್ ಹಾಗೂ ಇತರರು ಪಾಲ್ಗೊಂಡಿದ್ದರು. ಜಗತ್ತಿನ ಹಿರಿಯ ವ್ಯಕ್ತಿ ಮತ್ತು ಯೋಗ ಸಾಧಕರಾದ 123 ವರ್ಷದ ಸ್ವಾಮಿ ಶಿವಾನಂದ ಅವರು ಪ್ರದರ್ಶನದ ಕೇಂದ್ರ ಬಿಂದುವಾಗಿದ್ದರು. ಅರ್ಜಂಟೀನಾದ ಏಕಾರಾ ದೇವಿನಾಥ ಕೂಡ ಪಾಲ್ಗೊಂಡಿದ್ದರು.
ಇದೇ ವೇಳೆ, ಉತ್ತಮ ಆರೋಗ್ಯಕ್ಕಾಗಿ 642211 ಆರೋಗ್ಯ ಸೂತ್ರ ಬಿಡುಗಡೆ ಮಾಡಲಾಯಿತು. ಇದರ ವಿಸ್ತೃತರೂಪ, “ಮನುಷ್ಯ ನಿತ್ಯ 6 ಗಂಟೆ ನಿದ್ರೆ, 4 ಲೀ. ನೀರು, ದಿನಕ್ಕೆ 2 ಸಲ ಆಹಾರ ಸೇವನೆ, 2 ಸಲ ಪ್ರಾರ್ಥನೆ, ಒಂದು ಗಂಟೆ ಯೋಗಾಭ್ಯಾಸ, ವಾರಕ್ಕೆ ಒಂದು ದಿನ ಉಪವಾಸ ಮಾಡಬೇಕು ಎಂಬುದಾಗಿದೆ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ