ವಿಶ್ರಾಂತಿ ಇಲ್ಲದೆ ಒತ್ತಡವೇ ಹೆಚ್ಚಿರುವ ಬದುಕಿಗೆ ಯೋಗವೇ ಬೇಕು


Team Udayavani, Jun 22, 2019, 11:10 AM IST

SHOBHA-SHETTY

ಬದುಕಿನಲ್ಲಿ ಯೋಗ-ಭಾಗ್ಯ ಒಟ್ಟಿಗೆ ಸಾಗಬೇಕೆಂದರೆ “ಯೋಗ’ ಇರಲೇಬೇಕು. “ಯೋಗ ಜೀವನ ‘ ಅಂಕಣ ಇಂದಿನಿಂದ ಆರಂಭ. ಒಂದು ತಿಂಗಳ ಕಾಲ ಹಲವಾರು ಯೋಗ ಗುರುಗಳು ಇಂದಿನ ಬದುಕಿಗೆ ಯೋಗದ ಅಗತ್ಯವನ್ನು ಇಲ್ಲಿ ವಿವರಿಸುವರು.

ಉಡುಪಿ: ಈಗ ಮಹಿಳೆಯರಿಗೆ ಮನೆ ಕೆಲಸದ ಜತೆ ಉದ್ಯೋಗದ ಧಾವಂತವೂ ಇದೆ. ಮಹಿಳೆಯರಿಗೆ ರೆಸ್ಟ್‌ ಇಲ್ಲವಾಗಿದೆ, ಸ್ಟ್ರೆಸ್‌ ಹೆಚ್ಚಿಗೆಯಾಗಿದೆ. ಆದ್ದರಿಂದ ಮಹಿಳೆಯರಿಗೆ ಯೋಗಾಸನ ಅತ್ಯಗತ್ಯ ಎನ್ನುತ್ತಾರೆ ಯೋಗ ಪಟು, “ಯೋಗಾಚಾರ್ಯ’ ಬಿ.ಕೆ.ಎಸ್‌. ಅಯ್ಯಂಗಾರರ ಶಿಷ್ಯೆ ಶೋಭಾ ಶೆಟ್ಟಿ.

* ಮಹಿಳೆಯರಿಗೆ ಯೋಗಾಸನ ಬೇಕೆ?
ಖಂಡಿತವಾಗಿ. ಮಹಿಳೆಯರು ಕುಟುಂಬ ವನ್ನು ಸಲಹುವ ಜತೆಗೆ ಉದ್ಯೋಗವನ್ನು ನಿಭಾಯಿಸಬೇಕಿದೆ. ಈ ಕಾಲದಲ್ಲಿ ಮಹಿಳೆಯ ರಿಗೆ ವಿಶ್ರಾಂತಿ ಎಂಬುದಿಲ್ಲ. ಇರುವುದು ಸ್ಟ್ರೆಸ್‌ ಮಾತ್ರ. ಕೆಲಸಕ್ಕೆ ಹೋಗುವುದರಿಂದ ಕುಳಿತು ಕೊಂಡು ಕೆಲಸ ಮಾಡಿ ಬೆನ್ನು ನೋವು, ಕಾಲು ನೋವು ಬರುತ್ತದೆ. ಇದೆಲ್ಲದರ ಒತ್ತಡ ಕಡಿಮೆ ಮಾಡಲು ಯೋಗಾಸನಕ್ಕೆ ಶರಣಾಗಬೇಕು.

* ಯಾವ ಯಾವ ಆಸನಗಳು ಸೂಕ್ತ?
ಎಲ್ಲ ಆಸನಗಳನ್ನೂ ಮಾಡಬಹುದು. ಒಂದೊಂದು ಆಸನಗಳ ಲಾಭ ಒಂದೊಂದು ಬಗೆ. ಶೀರ್ಷಾಸನ, ಸರ್ವಾಂಗಾಸನ, ಹಲಾಸನ, ಸೇತುಬಂಧ ಸರ್ವಾಂಗಾಸನ, ವಿಪರೀತ ಕರಣಿ-ಈ 5 ಆಸನಗಳನ್ನು ಎಲ್ಲರೂ ಮಾಡ ಬೇಕು. ಇದರಿಂದ ಹಾರ್ಮೋನ್‌ ಸಿಸ್ಟಮ್‌ ಸರಿಯಾಗುತ್ತದೆ ಎಂದು ಗುರೂಜಿ ಬಿ.ಕೆ.ಎಸ್‌. ಅಯ್ಯಂಗಾರ್‌ ಹೇಳುತ್ತಿದ್ದರು.

* ಮಹಿಳೆಯರಿಗೆ ಕೆಲಸದ ಒತ್ತಡದ ಜತೆಗೆ ಯೋಗಾಭ್ಯಾಸ ಕಷ್ಟವಲ್ಲವೆ?
ಏನಾದರೂ ಸಮಯ ಹೊಂದಾಣಿಕೆ ಮಾಡಿ ಕೊಂಡು ಯೋಗಾಭ್ಯಾಸ ಮಾಡಬೇಕು. ಉದಾಹರಣೆಗೆ, ಬೆಳಗ್ಗೆ ಸ್ವಲ್ಪ ಹೊತ್ತು, ಸಂಜೆ ಸ್ವಲ್ಪ ಹೊತ್ತು ಯೋಗಾಭ್ಯಾಸ ಮಾಡಬಹುದು. ಸುಸ್ತಾಗಿ ಬಂದು ಮಲಗಿದಾಗಲೇ ಸುಪ್ತ ಪಾದಾಂಗುಷ್ಠಾಸನವನ್ನು ಮಾಡಬಹುದು. ದಿಂಬಿನ ಮೇಲೆ ಅಂಗಾತ ಮಲಗಿ ಸುಪ್ತಬದ್ಧ ಕೋನಾಸನವನ್ನು ಮಾಡಬಹುದು. ಇದೆಲ್ಲ ದೇಹವನ್ನು ರೀಚಾರ್ಜ್‌ ಮಾಡುತ್ತದೆ. ಸುಮ್ಮನೆ ನಿಂತುಕೊಂಡು ಮಾಡುವ ಆಸನಗಳೂ ಇವೆ.

* ಗರ್ಭಿಣಿಯರಿಗೆ ಯೋಗಾಸನ ಸೂಕ್ತವೆ?
ಹೌದು. ಆದರೆ ಗರ್ಭಿಣಿಯರಾದಾಗಲೇ ಯೋಗಾಸನವನ್ನು ಶುರು ಮಾಡಬಾರದು. ಮೊದಲೇ ಯೋಗಾಭ್ಯಾಸ ಮಾಡುತ್ತಿದ್ದು, ಗರ್ಭಿಣಿಯರಾದ ಬಳಿಕ ಮುಂದುವರಿಸಿದರೆ ಉತ್ತಮ.

ಕಾರ್ಕಳ ತಾಲೂಕು ನೀರೆಯವರಾದ ಶೋಭಾ ಶೆಟ್ಟಿಯವರು ಹುಟ್ಟಿದ್ದು ಬೆಳೆದದ್ದು ಪುಣೆಯಲ್ಲಿ. 1979ರಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿದಾಗ ಪುಣೆಯ ಬಿ.ಕೆ.ಎಸ್‌. ಅಯ್ಯಂಗಾರರ ಸಂಸ್ಥೆಗೆ ಸೇರಿದರು. ಅಲ್ಲಿ ಬಿಎ ಪದವಿ ಓದಿದ ಶೋಭಾ ಅನಂತರ ಯೋಗ ಕ್ಷೇತ್ರದಲ್ಲಿ ಮುಂದುವರಿಯಲು ನಿರ್ಧರಿಸಿದರು. 1985ರಲ್ಲಿ ಉಡುಪಿಗೆ ಮದುವೆಯಾಗಿ ಬಂದ ಬಳಿಕ ಉಡುಪಿ ಮಿಶನ್‌ ಕಂಪೌಂಡ್‌ನ‌ಲ್ಲಿರುವ ಮನೆಯಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದಾರೆ. ಮಂದಬುದ್ಧಿಯವರಿಗೂ ಯೋಗಾಸನದ ಮೂಲಕ ಚುರುಕು ಬುದ್ಧಿ ಬರುವಂತೆ ಮಾಡಿದ ಉದಾಹರಣೆಗಳೂ, ಸಹಜ ಹೆರಿಗೆಗೆ ಬೇಕಾದ ಯೋಗಾಸನಗಳನ್ನು ಕಲಿಸಿಕೊಟ್ಟ ಉದಾಹರಣೆಗಳೂ ಇವೆ.

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.