ರೈತರಿಗೆ ಖುಷಿ ತಂದ ಆರಿದ್ರಾ ಮಳೆ
Team Udayavani, Jun 24, 2019, 9:46 AM IST
ಚಿಂಚೋಳಿ: ರವಿವಾರ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮುಲ್ಲಾಮಾರಿ ನದಿಗೆ ನೀರು ಹರಿದು ಬಂದಿದೆ.
ಚಿಂಚೋಳಿ: ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ರವಿವಾರ ಮಧ್ಯಾಹ್ನ ಸತತವಾಗಿ ಎರಡು ಗಂಟೆಗಳ ಕಾಲ ಗುಡುಗು ಸಿಡಲಿನ ಅರ್ಭಟದಿಂದ ಕೂಡಿದ ಧಾರಾಕಾರ ಮಳೆಯಾಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪ್ರಸಕ್ತ ಸಾಲಿನ ಜೂನ್ ತಿಂಗಳ ಪ್ರಾರಂಭವಾಗಿದ್ದರು ಸಹ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದರು. ಮುಂಗಾರು ಬಿತ್ತನೆ ಮಾಡದೇ ಮೋಡದತ್ತ ಮುಖ ಮಾಡಿ ಕುಳಿತಿದ್ದ ರೈತನಿಗೆ ರವಿವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆ ಖುಷಿ ತಂದಿದೆ. ಶುಕ್ರವಾರ ರಾತ್ರಿಯಿಡಿ ಸುರಿದ ಸಾಧಾರಣ ಮಳೆಯಿಂದಾಗಿ ತಾಲೂಕಿನ ಕೆಲವು ಗ್ರಾಮ ಮತ್ತು ತಾಂಡಾಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು. ಆದರೆ ರವಿವಾರ ಮಧ್ಯಾಹ್ನ ವ್ಯಾಪಕ ಮಳೆ ಆಗಿದ್ದರಿಂದ ಬಿತ್ತನೆ ಕಾರ್ಯಕ್ಕೆ ಅಡ್ಡಿಯುಂಟಾಗಿದೆ.
ತಾಲೂಕಿನ ಕಲ್ಲೂರಿನಲ್ಲಿ ಭಾರಿ ಮಳೆ ಆಗಿದ್ದರಿಂದ ಪಕ್ಕದಲ್ಲಿ ಹರಿಯುವ ನಾಲಾಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಅಲ್ಲದೇ ಚಿಂಚೋಳಿ ಪಟ್ಟಣಕ್ಕೆ ಹತ್ತಿರದಲ್ಲಿ ಹರಿಯುವ ಮುಲ್ಲಾಮಾರಿ ನದಿಗೆ ಮಳೆ ನೀರು ಬಂದಿದೆ. ಕಳೆದ ಅನೇಕ ವರ್ಷಗಳಿಂದ ಒಣಗಿ ಹೋಗಿದ್ದ ಮುತ್ತುಲ ನಾಲಾಕ್ಕೆ ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದು ಬಂದಿದೆ. ದಸ್ತಾಪುರ ಹತ್ತಿರ ಹರಿಯುವ ನಾಲಾ ತುಂಬಿ ಹರಿದಿದೆ.
ಎಡೆಬಿಡದೇ ಸುರಿದ ಮಳೆಯಿಂದಾಗಿ ಬಡಿದರ್ಗಾ ಮತ್ತು ಮೋಮಿನಪುರ, ಚೋಟ ದರ್ಗಾದಲ್ಲಿರುವ ಚರಂಡಿ ನೀರು ಕೆಲವು ಮನೆಗಳಿಗೆ ನುಗ್ಗಿದೆ ಎಂದು ಬಡಿದರ್ಗಾದ ಹಸೇನ್ ಹಾಶ್ಮಿ ತಿಳಿಸಿದ್ದಾರೆ. ಚಿಮ್ಮಾಇದಲಾಯಿ, ಸುಲೇಪೇಟ, ಐನೋಳಿ, ಸಾಲೇಬೀರನಳ್ಳಿ, ಅಣವಾರ, ಕೋಡ್ಲಿ, ರಟಕಲ್, ಐನಾಪುರ, ಚಿಮ್ಮನಚೋಡ, ಕನಕಪುರ, ಹಸರಗುಂಡಗಿ, ಮಿರಿಯಾಣ, ಶಾದಿಗಡಿಕೇಶ್ವರ, ನಿಡಗುಂದಾ, ಶಿರೋಳಿ, ಹೊಡೇಬೀರನಳ್ಳಿ, ಕೊರವಿ, ಕುಡಹಳ್ಳಿ, ನಾವದಗಿ, ಚಂದನಕೇರಾ, ರಾಣಾಪುರ, ನರನಾಳದಲ್ಲಿ ವ್ಯಾಪಕ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್