ಗೋಶಾಲೆ ಜಾನುವಾರುಗಳಿಗೆ ಕೊಳೆತ ಭತ್ತದ ಮೇವು!

ಬಿಸಿಲಲ್ಲಿ ಬಸವಳಿವ ಸಾವಿರಾರು ಜಾನುವಾರುಗಳು, 35 ಟನ್‌ ಮೇವು ಸಂಗ್ರಹ

Team Udayavani, Jun 24, 2019, 1:11 PM IST

24-June-22

ಕೂಡ್ಲಿಗಿ: ಕಳಪೆ ಗುಣಮಟ್ಟದ ಮೇವನ್ನು ತೋರಿಸುತ್ತಿರುವ ರೈತರು.

ಕೂಡ್ಲಿಗಿ: ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ಗೋಶಾಲೆ ಆರಂಭವಾಗಿ 4 ತಿಂಗಳಾಗಿದ್ದು, 3 ತಿಂಗಳು ಉತ್ತಮ ಗುಣಮಟ್ಟ ಮೇವು ಜಾನುವಾರುಗಳಿಗೆ ವಿತರಣೆ ಮಾಡಲಾಗಿತ್ತು. ಆದರೆ, ಕಳೆದ 2 ವಾರಗಳಿಂದ ಕಳಪೆ ಗುಣಮಟ್ಟದ, ಕೊಳೆತ ಭತ್ತದ ಮೇವು ವಿತರಿಸುವುದರಿಂದ ಮೇವು ತಿನ್ನದೇ ಜಾನುವಾರುಗಳು ಪರದಾಡುತ್ತಿವೆ.

ಸದ್ಯ ಗೋಶಾಲೆಯಲ್ಲಿ 3 ಸಾವಿರ ಜಾನುವಾರುಗಳಿದ್ದು, 35 ಟನ್‌ ಮೇವು ಸಂಗ್ರಹವಾಗಿದೆ. ಆದರೆ ಗುಣಮಟ್ಟದ ಮೇವು ವಿತರಣೆಗೆ ಸ್ಥಳೀಯ ಆಡಳಿತ ಮುಂದಾಗಬೇಕಿದೆ. ಒಂದು ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಸಮರ್ಪಕ ನೆರಳಿನ ವ್ಯವಸ್ಥೆ ಕಲ್ಪಿಸದಿರುವ ಕಾರಣ ದಿನ ಪೂರ್ಣ ಬಿಸಿಲಿನ ಶಾಖಕ್ಕೆ ಬಳಲುತ್ತಿರುವುದು ಮಾತ್ರ ದುರ್ದೈವ.

ಇಲ್ಲಿಯವರೆಗೂ ಒಟ್ಟು 1739 ಟನ್‌ ಬಂದಿದ್ದು, ಇದರಲ್ಲಿ 1705 ಟನ್‌ ಮೇವು ಖಾಲಿಯಾಗಿದೆ. 34 ಟನ್‌ ಮಾತ್ರ ಮೇವು ಸಂಗ್ರಹವಿದೆ. ಸದ್ಯ ಗೋಶಾಲೆಯಲ್ಲಿ ಸುಮಾರು 3 ಸಾವಿರ ಜಾನುವಾರುಗಳಿದ್ದು, ನಿತ್ಯ 15 ಟನ್‌ ಮೇವು ವಿತರಿಸಲಾಗುವುದರಿಂದ ಇನ್ನು 2 ದಿನಕ್ಕೆ ಮಾತ್ರ ಮೇವು ಉಳಿದಿದೆ. ಸಹಜವಾಗಿ ಮೇವಿನ ಕೊರತೆ ಇರುವುದರಿಂದ ಜಾನುವಾರಗಳ ರೈತರು ಆಂತಕದಲ್ಲಿದ್ದಾರೆ. ಕೂಡಲೇ ತಾಲೂಕಾಡಳಿತವು ಅಗತ್ಯ ಮೇವು ಪೂರೈಕೆ ಕ್ರಮಕೈಗೊಳ್ಳಬೇಕಿದೆ. ಗೋಶಾಲೆ ಆರಂಭದಲ್ಲಿ 3 ತಿಂಗಳ ಕಾಲ ಉತ್ತಮ ಗುಣಮಟ್ಟದ ಬತ್ತದ ಮೇವಿನ ಜತೆಗೆ ಜೋಳದ ಸೊಪ್ಪೆ ಮೇವು ನೀಡಲಾಗುತ್ತಿತ್ತು. ಹೀಗಾಗಿ ಜಾನುವಾರುಗಳ ಆರೋಗ್ಯವು ಉತ್ತಮವಾಗಿತ್ತು. ಆದರೆ, ಕಳೆದ 2 ವಾರದಿಂದ ಕೇವಲ ಭತ್ತದ ಮೇವು ಪೂರೈಸಲಾಗಿದ್ದು, ಅದು ಕೂಡ ತೀರ ಕಳಪೆ ಗುಣಮಟ್ಟದಿಂದ ಕೂಡಿದೆ.

ಅಸಮರ್ಪಕ ನೆರಳಿನ ವ್ಯವಸ್ಥೆ: ಗೋಶಾಲೆಯಲ್ಲಿ ಜಾನುವಾರುಗಳ ನೆರಳಿಗೆಂದು 4 ಶೆಡ್‌ಗಳಿದ್ದು, ಆರಂಭದಲ್ಲಿ 5 ಲಕ್ಷ ವೆಚ್ಚದಲ್ಲಿ 16 ಶೆಡ್‌ ನಿರ್ಮಿಸಲಾಗಿತ್ತು. ಒಟ್ಟು 20 ಶೆಡ್‌ಗಳಿದ್ದು, ಪ್ರತಿಯೊಂದು ಶೆಡ್‌ನ‌ಲ್ಲಿ 40 ರಿಂದ 50 ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಸಲಾಗಿದೆ. ಒಟ್ಟು 20 ಶೆಡ್‌ಗಳಿಂದ ಸುಮಾರು 1500ಕ್ಕೂ ಜಾನುವಾರುಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸದಂತಾಗುತ್ತದೆ. ಇನ್ನೂಳಿದ 1500 ಜಾನುವಾರುಗಳು ನಿತ್ಯವು ಬಿಸಿಲಿನ ತಾಪದಿಂದ ನರಳುತ್ತಿವೆ.

ಆರಂಭದಲ್ಲಿ ನೀಡಲಾಗುತ್ತಿದ್ದ ಮೇವು ಉತ್ತಮವಾಗಿತ್ತು. ಅದೇ ರೀತಿ ಜೋಳ ಮತ್ತು ಭತ್ತ ಮೇವು ವಿತರಿಸುತ್ತಿದ್ದರು. ಆದರೆ, ವಾರದಿಂದ ಕೇವಲ ಭತ್ತದ ಮೇವು ನೀಡಲಾಗುತ್ತಿದೆ. ಕಳಪೆ ಗುಣಮಟ್ಟದ ಭತ್ತದ ಮೇವು ಆಗಿರುವುದರಿಂದ ಜಾನುವಾರುಗಳು ತಿನ್ನುತ್ತಿಲ್ಲ.
ಓಬಣ್ಣ,
ರಾಮಸಾಗರಹಟ್ಟಿ ರೈತ.

ಗೋಶಾಲೆ ಆರಂಭವಾದಾಗಿನಿಂದ ಗುಣಮಟ್ಟದ ಮೇವು ವಿತರಿಸಲಾಗಿದೆ. ಸದ್ಯ ಸಂಗ್ರಹವಿರುವ ಮೇವು ಟೆಂಡರ್‌ನಿಂದ ಖರೀದಿಸಿದ್ದಲ್ಲ. ಮೇವಿನ ಕೊರತೆ ಇರುವ ಕಾರಣ ಬಳ್ಳಾರಿ ಮೇವು ಬ್ಯಾಂಕ್‌ನಲ್ಲಿ ಸಂಗ್ರಹಸಿದ್ದ ಮೇವನ್ನು ತಂದಿದ್ದು, ನಾಳೆಯಿಂದ ಉತ್ತಮ ಮೇವು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
•ಮಹಾಬಲೇಶ್ವರ,
ತಹಶೀಲ್ದಾರ್‌.

ಜಾನುವಾರುಗಳ ಆರೈಕೆಗೆ ವೈದ್ಯರು ಮತ್ತು ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಗುಣಮಟ್ಟದ ಮೇವು ಪರಿಶೀಲಿಸಿ ತರಿಸಲಾಗುವುದು.
ಡಾ.ವಿನೋದಕುಮಾರ್‌,
ತಾಲೂಕು ಪಶುವೈದ್ಯಾಧಿಕಾರಿ.

ಟಾಪ್ ನ್ಯೂಸ್

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.