ಈಗ್ಲ ಹಿಂಗ..ಇನ್ನೂ ದೊಡ್‌ ಮಳಿ ಬಂದ್ರ ಪರಿಸ್ಥಿತಿ ಹೆಂಗ?

•ಅರ್ಥ ಕಳೆದುಕೊಂಡ ತುರ್ತು ಸ್ಥಿತಿ ನಿರ್ವಹಣೆ ತಂಡ •ಪಾಲಿಕೆಯಿಂದ ಬೆಂಕಿಬಿದ್ದ ಮೇಲೆ ಬಾವಿ ತೋಡುವ ಕೆಲಸ •ಪೂರ್ವಸಿದ್ಧತೆಯೇ ಇಲ್ಲ-ಅನಾಹುತದ ನಂತರ ಗಡಿಬಿಡಿ

Team Udayavani, Jun 25, 2019, 7:21 AM IST

hubali-tdy-1..

ಹುಬ್ಬಳ್ಳಿ: ನಗರದಲ್ಲಿ ರವಿವಾರ ಮಳೆ ಸುರಿದಾಗ..

ಹುಬ್ಬಳ್ಳಿ: ಮಳೆಗಾಲದ ಸಂಕಷ್ಟ ನಿವಾರಣೆಗೆ ರಚನೆಗೊಂಡಿದ್ದ ಪಾಲಿಕೆ ತುರ್ತು ಕಾರ್ಯಾಚರಣೆ ತಂಡ ಅರ್ಥ ಕಳೆದುಕೊಂಡಿದೆ. ಇದಕೆಂದೇ ಇದ್ದ ಯಂತ್ರೋಪಕರಣಗಳು, ಸಲಕರಣೆಗಳು ಪಾಲಿಕೆ ಆವರಣದಲ್ಲಿ ತುಕ್ಕು ಹಿಡಿಯುತ್ತಿದ್ದರೂ ನೋಡುವವರಿಲ್ಲ. ಮಳೆ ಅನಾಹುತ ಸೃಷ್ಟಿಸಿದಾಗೊಮ್ಮೆ ಭೇಟಿ, ಪರಿಶೀಲನೆ, ಸಭೆ, ಕ್ರಮದ ಎಚ್ಚರಿಕೆ ಮೊಳಗಿ ಮತ್ತೂಂದು ಅನಾಹುತದವರೆಗೂ ಕ್ರಮವಿಲ್ಲದೆ ಮೌನವಾಗಿ ಬಿಡುತ್ತದೆ.

ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಕಥೆ-ವ್ಯಥೆ. ಈ ವರ್ಷದ ಒಂದೇ ದೊಡ್ಡ ಮಳೆಗೆ ಅನೇಕ ಕಡೆ ನೀರು ನುಗ್ಗಿದೆ. 500ಕ್ಕೂ ಅಧಿಕ ಮನೆಗಳು ಸಂಕಷ್ಟ ಎದುರಿಸುವಂತಾಗಿದೆ. ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಾಡಿವೆ. ಕೆಲವೊಂದು ವಸ್ತುಗಳು ನೀರಿಗೆ ಹರಿದು ಹೋಗಿವೆ. ಇನ್ನಷ್ಟು ದೊಡ್ಡ ಮಳೆ ಬಂದರೆ ಗತಿ ಏನು? ಮಹಾನಗರ ಜನತೆಯನ್ನು ಕಾಡುತ್ತಿರುವ ಪ್ರಶ್ನೆ-ಆಂತಕವಿದು.

ಮಳೆಗಾಲದ ಪೂರ್ವವಾಗಿಯೇ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾದ ಮಹಾನಗರ ಪಾಲಿಕೆ ಮಳೆ ಬಿದ್ದು ಒಂದಿಷ್ಟು ಅನಾಹುತ ಸೃಷ್ಟಿಸಿದ ನಂತರ ಪರಿಹಾರ ಕ್ರಮಗಳ ಬಗ್ಗೆ ಮಾತು ಶುರುವಿಟ್ಟುಕೊಳ್ಳುತ್ತದೆ. ಜನಪ್ರತಿನಿಧಿಗಳು ಸಹ ಪೂರ್ವಭಾವಿಯಾಗಿ ಸಭೆ ಕರೆದು ಚರ್ಚಿಸಿ ಕ್ರಮಕ್ಕೆ ಸೂಚಿಸದೆ, ಅನಾಹುತದ ನಂತರ ಸಭೆಗೆ ಮುಂದಾಗುತ್ತಿದ್ದಾರೆ.

ನಾಲಾ-ಚರಂಡಿಗಳ ಸ್ಥಿತಿ: ಏಪ್ರಿಲ್ನಲ್ಲಿಯೇ ನಾಲಾ-ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಸಮರ್ಪಕ ಕಾರ್ಯವಾಗಿಲ್ಲ ಎಂಬುದಕ್ಕೆ ಅನೇಕ ನಾಲಾ-ಚರಂಡಿಗಳು ಸಾಕ್ಷಿ ಹೇಳುತ್ತಿವೆ. ಒಂದು ನಾಲಾ ಸ್ವಚ್ಛತೆಗೆ ಸ್ವಲ್ಪ ಕ್ರಮ ಕೈಗೊಂಡಿದ್ದು ಬಿಟ್ಟರೆ, ಉಳಿದ ನಾಲಾಗಳ ಸ್ವಚ್ಛತೆಗೆ ಸಮರ್ಪಕ ಕ್ರಮದ ಕೊರತೆ ಕಾಣುತ್ತಿದೆ. ಅಲ್ಲದೆ ಚರಂಡಿಗಳ ಸ್ವಚ್ಛತೆ ಕಾರ್ಯವೂ ಸರಿಯಾಗಿ ನಡೆದಿಲ್ಲ. ಕೆಲವೆಡೆ ಚರಂಡಿಗಳ ಹೂಳು ತೆಗೆದರೂ ಅದನ್ನು ಅಲ್ಲಿಯೇ ಬಿಡಲಾಗಿದೆ. ಗಾಳಿ, ನೀರಿನಿಂದ ಮತ್ತೆ ಅದು ಚರಂಡಿಯನ್ನೇ ಸೇರುತ್ತಿದೆ. ಹೂಳು ತುಂಬಿದ್ದರಿಂದಾಗಿ ಚರಂಡಿಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ನೀರು ಬಂದರೂ ಅದು ರಸ್ತೆ ಮೇಲೆ ಹರಿಯಲು ಶುರುವಿಟ್ಟುಕೊಳ್ಳುತ್ತ್ತಿದೆ. ಈ ಹಿಂದೆ ಚರಂಡಿಯಲ್ಲಿ ಬಾಲಕನೊಬ್ಬ ಕೊಚ್ಚಿ ಹೋಗಿ ಮೃತಪಟ್ಟ ಘಟನೆಯನ್ನೂ ಮರೆಯುವಂತಿಲ್ಲ.

ಇತ್ತೀಚೆಗೆ ನಗರದ ವಿವಿಧೆಡೆ ಸಿಆರ್‌ಎಫ್ ನಿಧಿಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳ ಅವೈಜ್ಞಾನಿಕ ಸ್ಥಿತಿ ಸಹ ಮಳೆ ನೀರಿನಿಂದಾಗುವ ಅನಾಹುತಗಳಿಗೆ ತಮ್ಮದೇ ಕೊಡುಗೆ ನೀಡತೊಡಗಿವೆ. ಮೊದಲ ಮಳೆಯಿಂದ ಉಂಟಾದ ಅನಾಹುತಗಳಿಂದ ಪಾಲಿಕೆ ಎಚ್ಚೆತ್ತುಕೊಂಡು ಇನ್ನಾದರೂ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕಿದೆ. ಜನಪ್ರತಿನಿಧಿಗಳು ಸಭೆ ನಡೆಸಿ, ಕೈಗೊಳ್ಳಬೇಕಾದ ತುರ್ತು ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸ್ಪಷ್ಟ ಸಂದೇಶ ನೀಡಬೇಕಾಗಿದೆ.

ತುಕ್ಕು ಹಿಡಿದ ತುರ್ತು ನೆರವಿನ ಕಾರ್ಯಾಚರಣೆ ಸಾಧನ-ಸಲಕರಣೆಗಳು

ಪಾಲಿಕೆ ಆಯುಕ್ತರಾಗಿದ್ದ ಮಣಿವಣ್ಣನ್‌ ಮಳೆಗಾಲದ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ ನಿಟ್ಟಿನಲ್ಲಿ ತುರ್ತು ಕಾರ್ಯಾಚರಣೆ ತಂಡ ರಚಿಸಿದ್ದರು. ಫ್ಲಡ್‌ಲೈಟ್, ನೀರೆತ್ತುವ ಪಂಪ್‌ಗ್ಳು, ಮರ ಕತ್ತರಿಸುವ ಯಂತ್ರ, ಮತ್ತಿತರ ಸಾಧನ-ಸಲಕರಣೆಗಳನ್ನು ತಂಡಕ್ಕೆ ಒದಗಿಸಿದ್ದರು. ಮಾರ್ಚ್‌ನಿಂದ ಸೆಪ್ಟಂಬರ್‌ವರೆಗೂ ಈ ತಂಡ ಸನ್ನದ್ಧ ಸ್ಥಿತಿಯಲ್ಲಿರುತ್ತಿತ್ತು. ಯಾವುದೇ ಸಮಯದಲ್ಲಿ ಸಂಕಷ್ಟ ಎದುರಾದರೆ ಸ್ಪಂದಿಸುತ್ತಿತ್ತು. ಏಪ್ರಿಲ್ ಮೊದಲ ವಾರದಲ್ಲಿಯೇ ನಾಲಾ, ರಾಜಕಾಲುವೆಗಳ ಸ್ವಚ್ಛತೆ ಕೈಗೊಳ್ಳಲಾಗುತ್ತಿತ್ತು. ಮಳೆ ಹಾನಿ ಬಗ್ಗೆ ತಕ್ಷಣಕ್ಕೆ ಪಾಲಿಕೆಗೆ ಮಾಹಿತಿ ನೀಡಲು ಪ್ರತ್ಯೇಕ ದೂರವಾಣಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೆಲ್ಲವೂ ಈಗ ಇತಿಹಾಸ. ಮಣಿವಣ್ಣನ್‌ ವರ್ಗವಾದ ನಂತರ ಬಂದ ಪಾಲಿಕೆ ಆಯುಕ್ತರು ತುರ್ತು ಕಾರ್ಯಾಚರಣೆ ತಂಡ, ಅದಕ್ಕಾಗಿ ಇದ್ದ ಸಲಕರಣೆ, ಯಂತ್ರಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಿಲ್ಲ. ಪರಿಣಾಮ ಅವು ಪಾಲಿಕೆ ಆಯುಕ್ತರ ನಿವಾಸದ ಬಳಿ ತುಕ್ಕು ಹಿಡಿಯುವ ಸ್ಥಿತಿಯಲ್ಲಿ ಬಿದ್ದಿವೆ.
ಮಳೆಗಾಲ ಪೂರ್ವದಲ್ಲಿಯೇ ನಾಲಾ-ರಾಜಕಾಲುವೆ, ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ಸೇರಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು. ಸಾರ್ವಜನಿಕರ ಸಭೆ ನಡೆಸಿ ಅನಿಸಿಕೆ ಆಲಿಸಿದರೆ ವಾಸ್ತವ ಸ್ಥಿತಿ ಮಾಹಿತಿ ದೊರೆಯುತ್ತದೆ. ಮಳೆಯಿಂದ ಎಲ್ಲೆಲ್ಲಿ ಸಮಸ್ಯೆ ಎನ್ನುವುದರ ನೀಲನಕ್ಷೆ ಇರಬೇಕು. ಇವುಗಳಲ್ಲಿ ಕೊರತೆ ಕಂಡುಬಂದಾಗ, ಮಳೆ ತನ್ನದೇ ಅನಾಹುತ ಸೃಷ್ಟಿಸದೆ ಬಿಡದು. • ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ
•ಅಮರೇಗೌಡ ಗೋನವಾರ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.