ಕಪ್ಪು ಶಾಲು ಧರಿಸಿ ಚಳವಳಿ
Team Udayavani, Jun 25, 2019, 10:39 AM IST
ಸಾಗರ: ನಗರದ ಎಸ್ಪಿಎಂ ರಸ್ತೆಯಲ್ಲಿ ಸೋಮವಾರ ಶೇಖರ್ ಅವರು ಮಲೆನಾಡು ವಿರೋಧಿ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣಾ ಫಲಕ ಪ್ರದರ್ಶಿಸಿದರು.
ಸಾಗರ: ಸತತ 16 ವರ್ಷಗಳಿಂದ ಕಪ್ಪು ಶಾಲು ಹೊದ್ದುಕೊಂಡು ಕಾವೇರಿ ಚಳವಳಿ ನಡೆಸಿರುವ ಇಲ್ಲಿನ ವಿವೇಕ ನಗರದ ವಾಸಿ ಶೇಖರ್ ತಮ್ಮ ನಿಲುವಿನಲ್ಲಿ ಹೊಸ ಸೇರ್ಪಡೆ ಮಾಡಿಕೊಂಡಿದ್ದು, ಅಂದು ಕಾವೇರಿಗಾಗಿ, ಇಂದು ಶರಾವತಿಗಾಗಿ ಎಂಬ ನಿಲುವಿನಿಂದ ಸೋಮವಾರ ನಗರದಲ್ಲಿ ಸಂಚರಿಸುವಾಗ ಕಪ್ಪು ಶಾಲಿನ ಜೊತೆ ಮಲೆನಾಡು ವಿರೋಧಿ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಪ್ರದರ್ಶಿಸಿದರು.
2003ರಲ್ಲಿ ಕಾವೇರಿ ನದಿ ಸಮಸ್ಯೆಯ ಸಂದರ್ಭದಲ್ಲಿ ರಾಜ್ಯದ ಪರ ತೀರ್ಪು ಬರುವ ತನಕ, ಸಮಸ್ಯೆ ಬಗೆಹರಿಯುವ ತನಕ ಕಪ್ಪು ಪಟ್ಟಿ ಧರಿಸುವ ಶಪಥ ಮಾಡಿದ್ದ ಶೇಖರ್, ತಮ್ಮೊಂದಿಗೆ ಸದಾ ಕಪ್ಪು ಶಾಲು ಹಾಕಿಕೊಂಡೇ ಸಂಚರಿಸುತ್ತಾರೆ. ಈ ವ್ರತ ಇಲ್ಲಿಯವರೆಗೆ ಒಂದು ದಿನ ಕೈಬಿಟ್ಟಿಲ್ಲ. ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ, ಅತ್ಯುತ್ತಮ ಕಲಾವಿದರಾಗಿ, ಬ್ಯಾನರ್ ಬರಹಗಾರರಾಗಿ ಶೇಖರ್ ಈ ಸಮಯದಲ್ಲಿ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆಯ ವಿರುದ್ಧದ ತಮ್ಮ ಪ್ರತಿಭಟನೆ ದಾಖಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು