ಗೊಂದಲಕ್ಕೆಡೆ ಮಾಡುವ ಹೆಮ್ಮಾಡಿ ಜಂಕ್ಷನ್
ಅವೈಜ್ಞಾನಿಕ ತಿರುವಿನಿಂದ ವಾಹನ ಸವಾರರಿಗೆ ಸವಾಲು
Team Udayavani, Jun 26, 2019, 5:35 AM IST
ಹೆಮ್ಮಾಡಿ: ಕುಂದಾಪುರದಿಂದ ಕೊಲ್ಲೂರು ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಪ್ರಮಖ ಪ್ರದೇಶವಾದ ಹೆಮ್ಮಾಡಿ ಜಂಕ್ಷನ್ನಲ್ಲಿ ಈಗ ಅರೆಬರೆ ಹಾಗೂ ಅವೈಜ್ಞಾನಿಕ ತಿರುವಿನ ಹೆದ್ದಾರಿ ಕಾಮಗಾರಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯ ಆಹ್ವಾನಿಸುವಂತಿದೆ.
ಕುಂದಾಪುರದಿಂದ ಗಂಗೊಳ್ಳಿ, ಬೈಂದೂರು ಕಡೆಗಳಿಗೆ ಸಂಚರಿಸುವ ವಾಹನಗಳಿಗೆ ಹೆಮ್ಮಾಡಿಯಿಂದ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೆಮ್ಮಾಡಿ ಸರ್ಕಲ್ನಲ್ಲಿ ತಿರುವು ಕೊಟ್ಟಿದ್ದ ರಿಂದ ಈ ಭಾಗದಲ್ಲಿ ದಿನನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.
ಕೊಲ್ಲೂರು ರಸ್ತೆಯಿಂದ ಹೆಮ್ಮಾಡಿ ಲಕ್ಷ್ಮೀನಾರಾಯಣ ದೇವಸ್ಥಾನದ ರಸ್ತೆ ಪ್ರವೇಶಿಸುವವರು ಗೊಂದಲದಲ್ಲಿಯೇ ರಸ್ತೆ ದಾಟಬೇಕಾದ ಸ್ಥಿತಿ ಇದೆ. ಎರಡೂ ರಸ್ತೆಗಳಲ್ಲಿ ಬರುವ ವಾಹನಗಳು ಹೆಮ್ಮಾಡಿ ಜಂಕ್ಷನ್ ಬಳಿ ಒಂದೇ ರಸ್ತೆಗೆ ಸಂಧಿಸುವುದರಿಂದ ಸಮಸ್ಯೆಯಾಗುತ್ತಿದೆ.
ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ
ಹೆಮ್ಮಾಡಿ ಪೇಟೆ ಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಪೇಟೆಯಿಂದ ಬರುವ ಕೊಳಚೆ ನೀರೆಲ್ಲ ಭಟ್ರಬೆಟ್ಟು ರಸ್ತೆ ಮೂಲಕ ಕೃಷಿ ಗದ್ದೆಗಳಿಗೆ ಪ್ರವೇಶಿಸುತ್ತಿದೆ. ನೀರು ರಸ್ತೆಯ ಮೇಲೆ ಹೋಗುವುದರಿಂದ ಭಟ್ರಬೆಟ್ಟು ರಸ್ತೆ ಸಂಪೂರ್ಣ ಹಾಳಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಇದೇ ರೀತಿ ಇದೆ.
ಸೇತುವೆ ಕಾಮಗಾರಿ ವಿಳಂಬ
ರಾಜಾಡಿ ಹಳೆ ಸೇತುವೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದ ಗುತ್ತಿಗೆ ಕಂಪೆನಿ ಈಗ ಕಾಮಗಾರಿಯನ್ನು ನಿಲ್ಲಿಸಿ ಹಲವು ದಿನಗಳಾಗಿದೆ. ಇದರ ದುರಸ್ತಿ ಪೂರ್ಣವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಹೆಮ್ಮಾಡಿಯಲ್ಲಿನ ಸಮಸ್ಯೆ ದೂರವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ