ಸದಸ್ಯರ ‘ನೋಟಿಸ್’ ಪ್ರಶ್ನೆಗೆ ಅಧಿಕಾರಿ ಗಪ್ಚುಪ್
ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ನೀಡಲು ಸೂಚನೆ
Team Udayavani, Jun 26, 2019, 2:56 PM IST
ಯಾದಗಿರಿ: ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಜಿಪಂ ಸಮಾಜಿಕ ಸ್ಥಾಯಿ ಸಮಿತಿ ಸಭೆ ಕಿಶನ್ ರಾಠೊಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಯಾದಗಿರಿ: ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಗೆ ಸಂಬಂಧಿಸಿದ 33.50 ಲಕ್ಷ ರೂ. ಹಣ ಉಪಯೋಗವಾಗದೇ ಹಿಂತಿರುಗುವುದು. ಇದಕ್ಕೆ ಯಾರು ಕಾರಣ ಎಂಬ ಬಗ್ಗೆ ಸಂಬಂಧಿಸಿದವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಅವರಿಂದ ಏನಾದರೂ ಉತ್ತರ ಬಂದಿದೆಯೇ ಎಂದು ಜಿಪಂ ಸದಸ್ಯ ಶಿವಲಿಂಗಪ್ಪ ಪುಟಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಸಮಜಾಯಿಷಿ ನೀಡಬೇಕಿದ್ದ ಅಧಿಕಾರಿಗಳು ಎರಡು ನಿಮಿಷಗಳ ಕಾಲ ಮೌನವಹಿಸಿದರು. ಈ ಬಗ್ಗೆ ಅವರು ಏನು ಉತ್ತರ ನೀಡಿದ್ದಾರೆ. ಇದಕ್ಕೆ ಯಾರು ಹೊಣೆ? ಇದರ ಬಗ್ಗೆ ಸಾಮಾನ್ಯ ಸಭೆಯಲ್ಲಿ ಸ್ಪಷ್ಟನೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆ ಆರಂಭವಾಗುತ್ತದಂತೆ ಹಿಂದುಳಿದ ವರ್ಗಗಳ ಅಧಿಕಾರಿ ಬಂದೇನವಾಜ್ ಇಲಾಖೆ ಪ್ರಗತಿ ವರದಿ ಓದಲು ಆರಂಭಿಸಿದರು. ಈ ವೇಳೆ ಸಭೆ ಪುಸ್ತಕದಲ್ಲಿ ಮಾರ್ಚ್ ತಿಂಗಳ ಮಾಹಿತಿ ಒದಗಿಸಲಾಗಿತ್ತು. ಆದರೆ ಅಧಿಕಾರಿ ಮೇ ತಿಂಗಳ ಪ್ರಗತಿ ವರದಿ ವಾಚಿಸುತ್ತಿದ್ದರು. ಇದರಿಂದ ಅಚ್ಛರಿಯಾದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ ರಾಠೊಡ, ಯಾವ ಮಾಹಿತಿ ಹೇಳುತ್ತಿದ್ದೀರಿ? ಇಲ್ಲಿ ಬೇರೆಯೇ ಇದೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಪಂ ಯೋಜನಾ ನಿರ್ದೇಶಕರು ಸಿಬ್ಬಂದಿಯನ್ನು ವಿಚಾರಿಸಿದಾಗ ಸಭೆ ಕಡತಗಳನ್ನು ಹೊಂದಿಸುವಾಗ ಬದಲಾವಣೆಯಾಗಿದೆ ಎಂದು ಸಮಜಾಯಿಸಿ ನೀಡಿ ಪುನಃ ಬೇರೆ ಮಾಹಿತಿ ಒದಗಿಸಲಾಯಿತು.
ದೇವರಾಜ ಅರಸು ದಿನಾಚರಣೆ ಕುರಿತು ಸಮಿತಿಗೆ ಯಾವುದೇ ಮಾಹಿತಿಯಿಲ್ಲ. ಅಧಿಕಾರಿಗಳು ಸಮಿತಿ ಗಮನಕ್ಕೆ ತರಬೇಕು ಎಂದು ಅಧ್ಯಕ್ಷ ಕಿಶನ ರಾಠೊಡ ಸೂಚಿಸಿದರು.
ಕಳೆದ ವರ್ಷ ಹಿಂದುಳಿದ ವರ್ಗಗಳ ಕಾನೂನು ಪದವಿಧರರಿಗೆ ನೀಡಬೇಕಾಗಿದ್ದ 10 ಲಕ್ಷ ರೂ. ಪ್ರೋತ್ಸಾಹ ಧನ ಹಿಂತಿರುಗಿದೆ. ಅರ್ಜಿ ಆಹ್ವಾನಿಸಿದರೂ ಬರುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಈ ಬಾರಿ 4.35 ಕೋಟಿ ನಿಗದಿಯಾಗಿದೆ ಎಂದು ಅಧಿಕಾರಿ ಬಂದೇನವಾಜ್ ಹೇಳಿದರು. ಕಕ್ಕೇರಾದಲ್ಲಿ ಆಶ್ರಮ ಶಾಲೆ ನಿರ್ವಹಣೆಗೆ 18 ಲಕ್ಷ ರೂ. ಮೀಸಲಿಡಲಾಗಿದೆ. 125 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ ಎಂದು ಹೇಳಿದರು. ಖಾಸಗಿ ಹಾಸ್ಟೆಲ್ ಬಗ್ಗೆ ಮಾಹಿತಿ ಕೇಳಿದ ಅಧ್ಯಕ್ಷರು, ಸರ್ಕಾರ ಅನುದಾನ ಪಡೆದ ಖಾಸಗಿ ಹಾಸ್ಟೆಲ್ಗಳು ಸರಿಯಾಗಿ ನಡೆಸುತ್ತಿಲ್ಲ. ಹಾಗಾಗಿ ಪರಿಶೀಲಿಸಬೇಕು. ಬಳಿಕ ಅನುದಾನ ನೀಡಬೇಕು ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಡಾ| ಬಿ.ಆರ್. ಅಂಬೇಡ್ಕರ್ ನಿಗಮ, ದೇವರಾಜ ಅರಸು ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಪಂಚಾಯತ ರಾಜ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!