ಹಸಿವನ್ನೂ ಮರೆತು ಸದನ ನಡೆಸಿದ ಸ್ಪೀಕರ್
Team Udayavani, Jun 27, 2019, 5:58 AM IST
ಹೊಸದಿಲ್ಲಿ: ಸಂಸದರಿಗೆ ಊಟಕ್ಕೂ ಸಮಯ ಕೊಡದೇ ತಾನೂ ಊಟ ಮಾಡದೇ ಸದನವನ್ನು ಅರ್ಧ ಗಂಟೆ ಹೆಚ್ಚು ಕಾಲ ನಡೆಸಿ ಶೂನ್ಯ ವೇಳೆಯಲ್ಲಿ ಸಂಸದರಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟ ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ ಬಗ್ಗೆ ಸಂಸದರು ಬುಧವಾರ ಮೆಚ್ಚುಗೆಯ ಮಾತನಾಡಿದ್ದಾರೆ. ಊಟದ ವಿರಾಮದ ಸಮಯದಲ್ಲೂ ಮಾತನಾಡುವಂತೆ ಟಿಎಂಸಿ ಸಂಸದ ಸೌಗತ ರಾಯ್ ಹೆಸರು ಕೂಗಿದಾಗ ಎದ್ದು ನಿಂತ ರಾಯ್, ಸ್ಪೀಕರ್ ಹಸಿವನ್ನೂ ಮರೆತಿದ್ದಾರೆ ಎನಿಸುತ್ತದೆ. ಸತತ ಮೂರು ಗಂಟೆಗಳಿಂದ ಸದನ ನಡೆಸುತ್ತಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲ, ಸ್ಪೀಕರ್ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಇದು ಒಂದು ಉದಾಹರಣೆಯೂ ಹೌದು ಎಂದು ಅವರು ಹೇಳಿದ್ದಾರೆ. ಹಲವು ಸಂಸದರು ಕೂಡ ಇದೇ ವೇಳೆ ಸ್ಪೀಕರ್ ವೃತ್ತಿಪರತೆಯ ಬಗ್ಗೆ ಶ್ಲಾಘಿಸಿದರು.