“ಮರಾಠಾ ಮೀಸಲು ಕ್ರಮ ಸಾಂವಿಧಾನಿಕ’
Team Udayavani, Jun 28, 2019, 5:19 AM IST
ಮುಂಬಯಿ: ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ಮಹಾರಾಷ್ಟ್ರ ಸರಕಾರದ ಮೀಸಲು ನೀತಿಗೆ ಬಾಂಬೆ ಹೈಕೋರ್ಟ್ ಗುರುವಾರ ಸಮ್ಮತಿ ನೀಡಿದೆ. ಶೇ.16ರ ಬದಲಾಗಿ ಶೇ. 12-13ರ ವ್ಯಾಪ್ತಿಯಲ್ಲಿ ಮೀಸಲು ನೀಡಬಹುದು ಎಂದು ಅದು ಸಲಹೆ ಮಾಡಿದೆ.
ಹೀಗಾಗಿ, ಮಹಾರಾಷ್ಟ್ರದಲ್ಲಿ ಅತ್ಯಂತ ಕೋಲಾಹಲ ಮತ್ತು ವಿವಾದ ಸೃಷ್ಟಿಸಿದ್ದ ಬೆಳವಣಿಗೆ ಒಂದು ರೀತಿಯಲ್ಲಿ ಇತ್ಯರ್ಥವಾಗಲಿದೆ. ಈ ವರ್ಷದ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಮೇಲೆ ಕೂಡ ಈ ತೀರ್ಪು ಬಿಜೆಪಿ – ಶಿವಸೇನೆ ಮೈತ್ರಿಕೂಟದ ಪರವಾಗಿಯೇ ಜನರು ಮತ ಹಾಕಲಿದ್ದಾರೆ ಎಂಬ ಲೆಕ್ಕಾಚಾರವೂ ನಡೆದಿದೆ.
“ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ನೀಡುವುದು ಸಾಂವಿಧಾನಕವಾಗಿದೆ. ಆದರೆ ಶೇ. 16ರ ಬದಲಾಗಿ ಶೇ. 12-13ರ ವ್ಯಾಪ್ತಿಯಲ್ಲಿ ಮೀಸಲು ಪ್ರಮಾಣ ಇರಲಿ’ ಹೈಕೋರ್ಟ್ನ ವಿಭಾಗೀಯ ಪೀಠ ಹೇಳಿದೆ. ಅದಕ್ಕೆ ಉತ್ತರಿಸಿದ ಮಹಾರಾಷ್ಟ್ರ ಸರಕಾರದ ಪರ ವಕೀಲರು ಶೇ. 16ರ ಮೀಸಲು ಪ್ರಮಾಣದಲ್ಲಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ