ಫರಂಗಿಪೇಟೆಯಲ್ಲಿ ತ್ಯಾಜ್ಯ ರಾಶಿಯ ಸಮಸ್ಯೆ
Team Udayavani, Jun 29, 2019, 5:31 AM IST
ಬಂಟ್ವಾಳ: ಪುದು ಗ್ರಾ.ಪಂ. ಕೇಂದ್ರ ಫರಂಗಿಪೇಟೆಯಲ್ಲಿ ಅಶುಚಿತ್ವದ ಮೀನು ಮಾರುಕಟ್ಟೆ, ಫ್ಲಾ ್ಯಟ್ ನಿವಾಸಿಗಳು ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವುದು, ಹೊಟೇಲ್, ಅಂಗಡಿಗಳ ತ್ಯಾಜ್ಯವನ್ನು ಜನ ಸಂಚಾರದ ಸ್ಥಳದಲ್ಲಿ ಹಾಕುವ ಮೂಲಕ ನಗರವು ಆಕರ್ಷಣೆ ಕಳೆದುಕೊಂಡಿದೆ.
ಜನಸಾಮಾನ್ಯರು ಫರಂಗಿಪೇಟೆ ಎಂದಾಕ್ಷಣ ಎರಡು ಚಿತ್ರಣಗಳನ್ನು ಕಲ್ಪಿಸಿ ಕೊಳ್ಳುತ್ತಾರೆ. ಒಂದು ಸಾಮಾಜಿಕ ಆರೋಗ್ಯದ ಬಗೆಗಿನ ಸಂಘಟನೆಯೊಂದರ ಸೇವೆ. ಇನ್ನೊಂದು ಇಲ್ಲಿನ ತ್ಯಾಜ್ಯದ ಸಮಸ್ಯೆ ಬೃಹತ್ತಾಗಿ ಬೆಳೆದಿರುವುದು.
ಅಶುಚಿತ್ವಕ್ಕೆ ಗ್ರಾ.ಪಂ. ವ್ಯಾಪ್ತಿಯ ಕೆಲವು ಫ್ಲಾ ್ಯಟ್ ನಿವಾಸಿಗಳ ಕೊಡುಗೆ ಇದೆ ಎನ್ನುವುದನ್ನು ಗ್ರಾ.ಪಂ. ಆಡಳಿತ ಒಪ್ಪುತ್ತದೆ. ಹಾಗೆಂದು ಕ್ರಮ ಕೈಗೊಂಡಿಲ್ಲ ಎಂದಲ್ಲ. ಅದರ ಅನುಷ್ಠಾನದಲ್ಲಿ ನಿರಂತರ ಪ್ರಯತ್ನ ಇದ್ದಾಗ ಜನರು ನಿಧಾನವಾಗಿ ಸ್ವಚ್ಛತೆಗೆ ಒಗ್ಗುತ್ತಾರೆ.
ನಿರಂತರ ಕಿರಿಕ್
ಇಲ್ಲಿ ಕೆಲವು ಫ್ಲ್ಯಾಟ್ಗಳ ನಿವಾಸಿಗಳು ರಸ್ತೆಗೆ ತ್ಯಾಜ್ಯ ಎಸೆಯುವುದು, ರಸ್ತೆ ಮೂಲೆ ಯಲ್ಲಿ ತ್ಯಾಜ್ಯ ತಂದಿರಿಸಿ ಹೋಗುವುದು, ಸೇತುವೆ ಬದಿಯಲ್ಲಿ ಹಾಕುವುದು ಹೀಗೆ ನಿರಂತರವಾಗಿ ಕಿರಿಕ್ ನೀಡುತ್ತಲೇ ಇದ್ದಾರೆ.
ಒಂದು ಕಾಲದಲ್ಲಿ ನಗರ ಪ್ರದೇಶ ತ್ಯಾಜ್ಯಗಳ ರಾಶಿಯಿಂದ ತುಂಬಿಕೊಂಡಿತ್ತು. ತ್ಯಾಜ್ಯ ರಾಶಿ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ಆಲೋಚನೆಯಿಂದ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಲವಾರು ಜನಪರ ಕಾರ್ಯ ಸಹಿತ ಮನೆ ಮನೆಗೆ ತ್ಯಾಜ್ಯ ಪಡೆಯಲು ವಾಹನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಾಸಿಕವಾಗಿ 50 ರೂ. ಶುಲ್ಕ ವಿಧಿಸಿದ್ದು, ಗ್ರಾಮದ ಮನೆಗಳು, ಅಂಗಡಿದಾರರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ.
ರೈಲ್ವೇ ಜಾಗವೇ ಡಂಪಿಂಗ್ ಯಾರ್ಡ್
ಫರಂಗಿಪೇಟೆ ನಗರದ ಒಂದು ಬದಿಯಲ್ಲಿರುವ ರೈಲ್ವೇ ಇಲಾಖೆಯ ಸ್ಥಳವೇ ಹೆಚ್ಚಿನ ಫ್ಲ್ಯಾಟ್ಗಳ ನಿವಾಸಿಗಳಿಗೆ ತ್ಯಾಜ್ಯ ಹಾಕುವ ಕೇಂದ್ರವಾಗಿದೆ. ಕೆಲವು ತಿಂಗಳುಗಳ ಹಿಂದೆ ಹೆದ್ದಾರಿ ಬದಿಯಲ್ಲಿರುವ ಮೀನು ಮಾರ್ಕೇಟನ್ನು ರೈಲ್ವೇ ಇಲಾಖೆ ತೆರವುಗೊಳಿಸಿ ತಂತಿ ಬೇಲಿಗಳನ್ನು ಹಾಕಿದೆ. ಈಗ ಅದು ದೊಡ್ಡ ಮಟ್ಟದಲ್ಲಿ ತ್ಯಾಜ್ಯ ಸಂಗ್ರಹ ಘಟಕವಾಗಿ ಪರಿಣಮಿಸಿದೆ. ಪಕ್ಕದಲ್ಲಿಯೇ ದೇವಸ್ಥಾನ ಇದ್ದರೂ ಅದರ ಬಗ್ಗೆ ಯಾರಿಗೂ ಗಮನವಿಲ್ಲ. ಮಾರುಕಟ್ಟೆ ತೆರವು ಮಾಡಿದ ರೈಲ್ವೇ ಇಲಾಖೆ ಬಳಿಕ ತನ್ನ ಅಧೀನ ಸ್ಥಳಕ್ಕೆ ಭದ್ರತೆ ರೂಪಿಸುವಲ್ಲಿ ವಿಫಲವಾಗಿದೆ.
ಭದ್ರತೆ ಅಗತ್ಯ
ಫರಂಗಿಪೇಟೆಯಲ್ಲಿ ರೈಲ್ವೇ ಜಮೀನು ತ್ಯಾಜ್ಯದ ತೊಟ್ಟಿ ಆಗುತ್ತಿದೆ ಎಂಬ ದೂರು ಗಮನಿಸಿದ್ದೇವೆ. ಸದ್ರಿ ತೆರವು ಜಮೀನಿಗೆ ಸೂಕ್ತ ರೀತಿಯಲ್ಲಿ ಭದ್ರತೆ ಮಾಡಬೇಕಿತ್ತು. ಅದನ್ನು ಮಾಡಿಲ್ಲ. ಅರಿವಿನ ಕೊರತೆ ಇರುವ ವ್ಯಕ್ತಿಗಳು ತ್ಯಾಜ್ಯ ತಂದು ಎಸೆಯುವ ಮೂಲಕ ನೈರ್ಮಲ್ಯಕ್ಕೆ ಹಾನಿ ಆಗುತ್ತಿದೆ. ಈ ಬಗ್ಗೆ ಪಂ.ಆಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ. – ಪ್ರೇಮಲತಾ ಪಂ. ಅ. ಅಧಿಕಾರಿ, ಪುದು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ