ಫಲಾನುಭವಿಗಳಿಂದ ಹೆಸ್ಕಾಂ ಕಚೇರಿಗೆ ಮುತ್ತಿಗೆ
Team Udayavani, Jul 2, 2019, 8:48 AM IST
ಶಿರಹಟ್ಟಿ: ವಿದ್ಯುತ್ ಯೋಜನೆ ಜಾರಿಗೆ ಹೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ಫಲಾನುಭವಿಗಳು ಪಟ್ಟಣದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿರಹಟ್ಟಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಾದ ಬಿಜಲಿ ಹರ್ ಘರ್ ಯೋಜನೆ ಜಾರಿಗೆ ತಂದಿದ್ದರೂ ಪಟ್ಟಣದಲ್ಲಿ ಅನುಷ್ಠಾನಗೊಳಿಸುವಲ್ಲಿ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಪಪಂ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ ನೇತೃತ್ವದಲ್ಲಿ ಫಲಾನುಭವಿಗಳು ಪಟ್ಟಣದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯ ವೀರಣ್ಣ ಮಜ್ಜಗಿ, ಸಹಜ ಬಿಜಲಿ ಹರ್ ಘರ್ ಎಂಬ ಯೋಜನೆ ಸಮೃದ್ಧಿಯಾಗಲು ಅಪಾರ ಹಣ ತೆಗೆದಿರಿಸಲಾಗಿತ್ತು. ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ಹೆಸ್ಕಾಂಗೆ ಇಚ್ಛಾಶಕ್ತಿಯಿಲ್ಲ. ಬರಿ ಹೆಸ್ಕಾಂ ಅಧಿಕಾರಿಗಳು ಲಾಭದಾಯಕವಾದ ವ್ಯವಹಾರದಲ್ಲಿ ತೊಡಗಲು ಮುಂದಾಗುತ್ತಾರೆ ಎಂದು ದೂರಿದರು.
ಜೂ. 30ರೊಳಗೆ ಬೇಡಿಕೆ ಈಡೇರಿಸಬೇಕೆಂದು ತಿಳಿಸಲಾಗಿತ್ತು. ಇಲ್ಲದಿದ್ದರೆ ಜು. 1ಕ್ಕೆ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಹೀಗಾಗಿ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದೇವೆ ಎಂದರು.
ಈ ವೇಳೆ ಹೆಸ್ಕಾಂ ಅಸಿಸ್ಟಂಟ್ ಇಂಜಿನಿಯರ್ ಕೃಷ್ಣಪ್ಪ ಹೆಂಡಗರ್ ಧರಣಿ ನಿರತರೊಂದಿಗೆ ಮಾತನಾಡಿ, ಈ ಯೋಜನೆ ಕುರಿತು ಈವರೆಗೆ ಸ್ಥಳೀಯವಾಗಿ ತಾನೇ ಫಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿದಾಗ ಅರ್ಜಿಯಲ್ಲಿ ತಿಳಿಸಿರುವ ಫಲಾನುಭವಿಗಳ ವಿಳಾಸ ಹಾಗೂ ವಿವರಗಳಲ್ಲಿ ಸ್ವಲ್ಪ ಗೊಂದಲವಾದ ಕಾರಣ ವಿಳಂಬವಾಗಿದೆ. ಬರುವ ಆ. 10ರೊಳಗೆ ಎಲ್ಲ ಫಲಾನುಭವಿಗಳ ಮನೆ ಮನೆಗೆ ಈ ಯೋಜನೆ ತಲುಪಿಸಿ ದೀಪ ಬೆಳಗುವಂತೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಹೆಸ್ಕಾಂ ಅಸಿಸ್ಟಂಟ್ ಇಂಜಿನಿಯರ್ ಕೃಷ್ಣಪ್ಪ ಹೆಂಡಗರ್ ಅವರಿಂದ ಲಿಖೀತ ರೂಪದ ಭರವಸೆ ಪಡೆದು ಧರಣಿ ಹಿಂಪಡೆದರು. ಪಪಂ ಸದಸ್ಯ ಮಹದೇವ ಗಾಣಿಗೇರ, ಡೊಂಕಬಳ್ಳಿ ಪರಶುರಾಮ ಡೊಂಕಬಳ್ಳಿ,ಪ್ರಕಾಶ ಬಾರಬಾರ, ಗೌರವ್ವ ಕಪ್ಪತ್ತನವರ, ನೀಲಮ್ಮ ಲಕ್ಕುಂಡಿಮಠ, ಪಾರವ್ವ ಇಟ್ಟಪ್ಪನವರ, ದೇವಕ್ಕ ಇಟ್ಟಪ್ಪನವರ, ನೀಲವ್ವ ಕುಳಗೇರಿ, ರೇಣವ್ವ ಕುರಿ, ಫಕ್ಕೀರವ್ವ ದಂಡಿನ, ಕರಿಯಪ್ಪ ಬಾಳೂಟಗಿ, ಕೆ.ಬಿ. ಬಳೂಟಗಿ, ಬಸವರಾಜ ಬಕ್ಸದ, ಬಸಪ್ಪ ಬಕ್ಸದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು