ಅಷ್ಟಾಂಗಗಳನ್ನೂ ಅಭ್ಯಸಿಸಿದಾಗಲೇ ಯೋಗ‌ ಪರಿಪೂರ್ಣ


Team Udayavani, Jul 2, 2019, 11:15 AM IST

avadhani

ಬಂಟ್ವಾಳ: ಪ್ರಸ್ತುತ ಆಸನ-ಪ್ರಾಣಾಯಾಮ ಮಾತ್ರ ಯೋಗ ಎಂಬ ಭಾವನೆ ಇದೆ. ಇದನ್ನು ಗುರುಗಳು ಕಲಿಸುವ ಕಾರಣ ಯೋಗ ಎಂದರೆ ಅಷ್ಟೇ ಎಂದು ಬಹುತೇಕರು ತಿಳಿದು ಕೊಂಡಿರುವುದು. ಆದರೆ ಹಾಗಲ್ಲ; ಯೋಗಾಭ್ಯಾಸ ಪೂರ್ಣ ಎಂದೆನಿಸಿಕೊಳ್ಳುವುದು ಅಷ್ಟಾಂಗ ಯೋಗವನ್ನು ಅಭ್ಯಾಸ ಮಾಡಿದಾಗಲಷ್ಟೇ.

ಅಷ್ಟಾಂಗ ಯೋಗ ಎಂದರೆ ಯೋಗದ ಎಂಟು ಅಂಗಗಳು ಅಥವಾ ಹಂತಗಳು- ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಇವಿಷ್ಟನ್ನು ನಮ್ಮ ಜೀವನದಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದಾಗ ಯೋಗ ಜೀವನವಾಗುತ್ತದೆ, ಯೋಗಾಭ್ಯಾಸವೂ ಪರಿಪೂರ್ಣವಾಗುತ್ತದೆ. ಪ್ರಾಣಾಯಾಮ-ಧ್ಯಾನ ಯೋಗಾಂಗ ಮಾತ್ರ.

ಈ ಎಂಟು ಹಂತಗಳನ್ನು ಕ್ರಮಪ್ರಕಾರವಾಗಿ ಅಧ್ಯಯನ-ಅನುಷ್ಠಾನ ಮಾಡುತ್ತ ಬರಬೇಕು. ಪ್ರಾರಂಭಿಕ ಹಂತಗಳಾದ ಯಮ-ನಿಯಮ ಇಡಿಯ ಜೀವನಕ್ಕೇನೇ ಚೌಕಟ್ಟು ಹಾಕಿಕೊಡುವಂಥವು. ಸಮಾಜದ ಜತೆ ನಾವು ಹೇಗೆ ವರ್ತಿಸಬೇಕು, ನಮ್ಮನ್ನು ನಾವು ಹೇಗೆ ಬೆಳೆಸಬೇಕು ಎಂಬುದೇ ಯಮ-ನಿಯಮ.

ಅಷ್ಟಾಂಗ ಯೋಗದ ಮೂರನೇ ಹಂತ ಆಸನ- ಪ್ರಾಣಾಯಾಮ. ಇದು ಗುರುಮುಖೇನ ಕಲಿಯುವಂಥದ್ದು. ಇವುಗಳ ಅಭ್ಯಾಸ ಸಂದರ್ಭದಲ್ಲಿ ಬಹಳ ಶ್ರದ್ಧೆ-ಭಕ್ತಿಯಿಂದ ಗುರುವಿನ ಮಾರ್ಗದರ್ಶನವನ್ನು ಪಾಲಿಸಬೇಕಾಗುತ್ತದೆ. ಆದರೆ ಈಚೆಗಿನ ದಿನಗಳಲ್ಲಿ ಯೋಗ ಎಂದರೆ ಇಷ್ಟೇ ಎಂಬ ಭಾವನೆ ಹೆಚ್ಚಿನವರಲ್ಲಿದೆ.

ಇಷ್ಟನ್ನು ಕಲಿತು ಯೋಗಾಭ್ಯಾಸ ಪರಿಪೂರ್ಣವಾಯಿತು ಎಂದು ಭಾವಿಸುವವರೂ ಇದ್ದಾರೆ. ಅಷ್ಟಾಂಗ ಯೋಗದ ಅನಂತರದ ಎರಡು ಹಂತ
ಗಳು ಪ್ರತ್ಯಾಹಾರ, ಧಾರಣ. ಇವು ತಾವಾಗಿ ಬರುವಂಥವು. ಇದು ನಮ್ಮ ಮನಸ್ಸು ಬೆಳವಣಿಗೆ ಹೊಂದಿ ಯೌಗಿಕ ಸಂಸ್ಕಾರ ಪಡೆಯುವ ಹಂತ. ಇಲ್ಲಿ ಗುರುಗಳಿಂದ ಮಾರ್ಗದರ್ಶನ ಪಡೆಯಬಹುದು. ಇದನ್ನು ಅಂತರಂಗ ಯೋಗ ಎಂದು ಕರೆಯುತ್ತಾರೆ.

ಯೋಗಾಭ್ಯಾಸ ಪೂರ್ಣಗೊಳ್ಳಬೇಕಾದರೆ ನಾವು ಯೋಗದ ಸಮಾಧಿ ಹಂತವನ್ನು ತಲುಪಬೇಕಾಗುತ್ತದೆ. ನಾವು ಈ ಹಂತಕ್ಕೆ ತಲುಪಿದಾಗ ಮನಸ್ಸು ಸಮತ್ವಕ್ಕೆ ಬರುತ್ತದೆ. ಸುಖ-ದುಃಖವನ್ನು ಸಮಾನವಾಗಿ ಸ್ವೀಕರಿಸುವ ಶಕ್ತಿಯನ್ನು ಸಮಾಧಿ ನೀಡುತ್ತದೆ. ಈ ಸ್ಥಿತಿಯನ್ನು ತಲುಪಿದಾಗ ಜೀವನದ ಯಾವುದೇ ಸವಾಲು ಎದುರಿಸುವ ಶಕ್ತಿ ಒದಗುತ್ತದೆ.

ನಾವು ಪುನರ್‌ಜನ್ಮವನ್ನು ನಂಬುತ್ತೇವೆ. ಅದರಂತೆ ಹಿಂದಿನ ಜನ್ಮದಲ್ಲಿ ಮಾಡಿದ ಯೋಗಾಭ್ಯಾಸದ ಫಲ ಉಳಿದಿದ್ದರೆ ಅಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರೂ ಅದು ಪರಿಪೂರ್ಣವಾಗಲೂಬಹುದು. ರಮಣ ಮಹರ್ಷಿಗಳು, ರಾಮಕೃಷ್ಣ ಪರಮಹಂಸರೇ ಮೊದಲಾದವರು ತಮ್ಮ ಪೂರ್ವಜನ್ಮದ ಸಾಧನೆ, ಸಂಸ್ಕಾರದ ಫಲದಿಂದ ಯೋಗ ಸಮಾಧಿ ಹಂತಕ್ಕೆ ತಲುಪಿದವರು. ಹೀಗಾಗಿ ಪ್ರಾಣಾಯಾಮ-ಧ್ಯಾನದ ಜತೆಗೆ ಇತರ ಹಂತಗಳು ಕೂಡ ಪ್ರಮುಖ. ಅವನ್ನು ಅಭ್ಯಾಸ ಮಾಡಿ ಅನುಷ್ಠಾನಕ್ಕೆ ತಂದಾಗಲಷ್ಟೇ ಅಷ್ಟಾಂಗ ಯೋಗ ಸಿದ್ಧಿಯಾಗುತ್ತದೆ.

ಡಾ| ರಘುವೀರ್‌ ಅವಧಾನಿ
ಬಾಲ್ಯದಿಂದಲೇ ಯೋಗಾಭ್ಯಾಸದಲ್ಲಿ ತೊಡಗಿರುವ ಡಾ| ರಘುವೀರ್‌ ಅವಧಾನಿಯವರು 15 ವರ್ಷಗಳಿಂದ ಯೋಗವನ್ನು ಕಲಿಸುತ್ತಿದ್ದಾರೆ. ಮೂಲತಃ ಉಡುಪಿಯ ಕಲ್ಯಾಣಪುರದವರಾಗಿರುವ ಅವರು 30 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆಯುರ್ವೇದ ವೈದ್ಯರೂ ಆಗಿದ್ದು, ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನದ ಪ್ರಧಾನ ಯೋಗ ಸಂವಾಹಕರಾಗಿ ಸೇವೆ ಮಾಡುತ್ತಿದ್ದಾರೆ. 2015ರಿಂದ ಬಂಟ್ವಾಳದಲ್ಲಿಯೂ ಯೋಗ ಕಲಿಸುತ್ತಿದ್ದು, ಜತೆಗೆ ಹಲವಾರು ಊರುಗಳಿಗೆ ತೆರಳಿ ಯೋಗ ಶಿಬಿರಗಳನ್ನು ಏರ್ಪಡಿಸುತ್ತಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.