ಬೇಕಿತ್ತು ಇನ್ನಷ್ಟು ಉತ್ತೇಜನಕಾರಿ ಯೋಜನೆಗಳು
ಶೂನ್ಯ ಬಂಡವಾಳ ಕೃಷಿ, ಹತ್ತು ಸಾವಿರ ರೈತ ಉತ್ಪಾದಕ ಸಂಘಗಳ ಸ್ಥಾಪನೆ ಉತ್ತಮ ಹೆಜ್ಜೆ
Team Udayavani, Jul 6, 2019, 5:57 AM IST
ರೈತ ಉತ್ಪಾದಕ ಸಂಘಗಳ ರಚನೆ, ಶೂನ್ಯ ಬಂಡವಾಳ ಕೃಷಿ, ಪ್ರತಿ ಮನೆಗೆ ನೀರು ಪೂರೈಸುವಂತಹ ಯೋಜನೆಗಳು ರೈತರ ಆದಾಯವನ್ನು ಹೆಚ್ಚಿಸುವ ಕ್ರಮಗಳಾಗಿವೆ. ಆದರೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಎದುರಿಸುತ್ತಿರುವ ಭೀಕರ ಸಮಸ್ಯೆಗಳ ದೃಷ್ಟಿಯಿಂದ ನೋಡಿದಾಗ, ಬಜೆಟ್ ನಿರೀಕ್ಷಿತ ಮಟ್ಟದಲ್ಲಿ ಉತ್ತೇಜನಕಾರಿ ಆಗಿಲ್ಲ.
ದೇಶಕ್ಕೆ ಶೇ.60ರಷ್ಟು ಅಡುಗೆ ಎಣ್ಣೆ ಆಮದು ಆಗುತ್ತಿದೆ. ಈ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಬೆಳೆಗಾರರನ್ನು ಪ್ರೋತ್ಸಾಹಿಸಲು ಹತ್ತು ಸಾವಿರ ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಗರಿಷ್ಠ ತಲಾ ಒಂದು ಸಾವಿರ ರೈತರನ್ನು ತೆಗೆದುಕೊಂಡರೂ ಸುಮಾರು ಒಂದು ಕೋಟಿ ರೈತರು ಇದರ ವ್ಯಾಪ್ತಿಗೊಳಪಡುತ್ತಾರೆ. ಗುಂಪಾಗಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತಂದಾಗ, ಅದಕ್ಕೆ ಉತ್ತಮ ಬೆಲೆಯೂ ದೊರೆಯುತ್ತದೆ. ಹಾಗಾಗಿ, ಇದೊಂದು ಸ್ವಾಗತಾರ್ಹ ಕ್ರಮ. ಆದರೆ ಒಟ್ಟಾರೆ ರೈತರ ಲೆಕ್ಕ ಹಾಕಿದರೆ, ಇದು ನಗಣ್ಯ.
ಶೂನ್ಯ ಬಂಡವಾಳ ಕೃಷಿ ಮತ್ತೂಂದು ಉತ್ತಮ ಹೆಜ್ಜೆಯಾಗಿದೆ. ಕೃಷಿ ಚಟುವಟಿಕೆ ದುಬಾರಿ ಆಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಬಂಡವಾಳ ಹೂಡಿಕೆ ಇಲ್ಲದೆ, ಕೃಷಿ ಮಾಡಲು ಒತ್ತು ಕೊಡಲಾಗಿದೆ. ಇದರಿಂದ ರೈತರ ಆದಾಯ ಕೂಡ ಹೆಚ್ಚಳ ಆಗಲಿದೆ. ಇದಕ್ಕಿಂತ ಮುಖ್ಯವಾಗಿ ‘ಕೃಷಿ ಸಂರಕ್ಷಣೆ’ಗೆ ಒತ್ತುಕೊಡುವ ಅಗತ್ಯ ಇತ್ತು (ಉದಾಹರಣೆಗೆ ಸಿರಿಧಾನ್ಯಗಳನ್ನು ಪ್ರೋತ್ಸಾಹಿಸುವುದು). ದೇಶದ ಆರ್ಥಿಕತೆಯಲ್ಲಿ ಶೇ. 70ರಷ್ಟು ಪಾಲು ಕೃಷಿ ಕ್ಷೇತ್ರದ್ದಾಗಿದೆ. ಆದರೆ, ಅದರಲ್ಲಿ ಆಗುತ್ತಿರುವ ಹೂಡಿಕೆ ಶೇ. 25ರಷ್ಟೂ ಇಲ್ಲ.
ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ 1,500 ತಾಲ್ಲೂಕುಗಳನ್ನು ಆಯ್ಕೆ ಮಾಡಿದ್ದು, ನಾಲ್ಕು ಇಲಾಖೆಗಳು ಒಂದೇ ಸೂರಿನಡಿ ಬಂದು ಕಾರ್ಯನಿರ್ವಹಿಸಲಿವೆ. ಈ ಮೂಲಕ ಪ್ರತಿ ಮನೆಗಳಿಗೆ ನೀರು ಪೂರೈಸಲು ಮುಂದಾಗಿರುವುದು, ಇನ್ಕ್ಯುಬೇಟರ್ಗಳ ಮೂಲಕ ಕೌಶಲ್ಯಯುತ ಉದ್ಯಮಿಗಳನ್ನು ತಯಾರು ಮಾಡುವುದು ಒಳ್ಳೆಯ ಬೆಳವಣಿಗೆ. ‘ಇ-ನ್ಯಾಮ್’ ಕೂಡ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡುವ ಪ್ರಯತ್ನ ಆಗಿದೆ.
ಬಜೆಟ್ ವಿಶ್ಲೇಷಣೆ:ಡಾ.ಎಂ.ಜಿ. ಚಂದ್ರಕಾಂತ್ ನಿರ್ದೇಶಕರು, ಐಸೆಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
MUST WATCH
ಹೊಸ ಸೇರ್ಪಡೆ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
IPL 2024; ಚೆನ್ನೈ ಕಿಂಗ್ಸ್ಗೆ ಚೇಸಿಂಗ್ ಕಿಂಗ್ ಸವಾಲು
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು