ಕಾರ್ಗಿಲ್ ಶ್ರದ್ಧಾಂಜಲಿ ಹಾಡು
Team Udayavani, Jul 8, 2019, 5:27 AM IST
ನವದೆಹಲಿ: ಕಾರ್ಗಿಲ್ ಯುದ್ಧದ ವಿಜಯೋತ್ಸವಕ್ಕೆ ಜು. 26ರಂದು 20 ವರ್ಷಗಳು ಸಲ್ಲಲಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆ ‘ತು ಝೇ ಭೂಲೇ ನಾ, ತೇರಾ ಹಿಂದೂಸ್ತಾನ್’ ಎಂಬ ಒಂದು ವಿಡಿಯೋ ಹಾಡನ್ನು ಸಿದ್ಧಪಡಿಸಿದೆ. ಭಾನುವಾರ, ದೆಹಲಿಯ ಮಾಣಿಕ್ ಷಾ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತೀಯ ಭೂಸೇನೆಯ ಮುಖ್ಯಸ್ಥ ಜ. ಬಿಪಿನ್ ರಾವತ್ ಅವರು ಆ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಹಿಂದಿ ಚಿತ್ರರಂಗದ ಹೆಸರಾಂತ ಸಾಹಿತಿ ಸಮೀರ್ ಅವರು ಸಾಹಿತ್ಯ ಬರೆದಿದ್ದು, ರಾಜು ಸಿಂಗ್ ಸಂಗೀತವಿದೆ. ಶತಾಬ್ದು ಕಬೀರ್ ಎಂಬುವರು ಇದನ್ನು ಹಾಡಿದ್ದಾರೆ.
ಯುದ್ಧದ ಸನ್ನಿವೇಶಗಳೊಂದಿಗೆ, ಹುತಾತ್ಮರ ಸೈನಿಕರ ತಬ್ಬಲಿ ಕುಟುಂಬಗಳ ನೈಜ ಸದಸ್ಯರನ್ನು ತೋರಿಸುತ್ತಾ, ಯೋಧರ ತ್ಯಾಗದ ಗುಣಗಾನ ಮಾಡುತ್ತಾ ಸಾಗುವ ಈ ಹಾಡಿನಲ್ಲಿ ಹಿಂದಿ ಚಿತ್ರರಂಗದ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಅನುಪಮ್ ಖೇರ್, ಸುನಿಲ್ ಶೆಟ್ಟಿ, ವಿಕ್ಕಿ ಕೌಶಲ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?