ವಿಕಾಸಾಶ್ರಮ ಮಂಗಳವಾರ ಸಂತೆಗೆ ಇನ್ನಿಲ್ಲ ಗಿಜಿಗಿಜಿ

•ಫೇವರ್ ಅಳವಡಿಕೆಯಿಂದ ವ್ಯಾಪಾರ ಸಲೀಸು •ನಿಟ್ಟುಸಿರು ಬಿಟ್ಟ ವ್ಯಾಪಾರಸ್ಥರು-ಗ್ರಾಹಕರು

Team Udayavani, Jul 8, 2019, 11:33 AM IST

uk-tdy-1..

ಶಿರಸಿ: ಫೇವರ್ ಅಳವಡಿಸಿರುವುದು.

ಶಿರಸಿ: ಇಲ್ಲಿನ ಐತಿಹಾಸಿಕ ಪ್ರಸಿದ್ಧ ವಿಕಾಸಾಶ್ರಮ ಬಯಲಿನಲ್ಲಿ ಮಂಗಳವಾರದ ವಾರದ ಸಂತೆಯಂದು ಇನ್ನು ತರಕಾರಿ, ಹಣ್ಣು ಹಂಪಲು ಮಾರಾಟಕ್ಕೂ, ಖರೀದಿಗೂ ಗಿಜಿ ಗಿಟ್ಟಿಯಿಲ್ಲ.

ಏಕೆಂದರೆ, ಅಭಿವೃದ್ಧಿ ಕಾಮಗಾರಿಯೊಂದು ಬಹುತೇಕ ಪೂರ್ಣವಾಗಿದ್ದು, ನಾಡಿದ್ದು ಮಂಗಳವಾರ ಸಂತೆಗೆ ಬಹುತೇಕ ಬಳಕೆಗೆ ಸಿಗಲಿದೆ.

ಏನಾಗಿತ್ತು ಸಮಸ್ಯೆ?: ಆರೆಂಟು ವರ್ಷಗಳ ಹಿಂದೆ ನಗರದ ಹಳೆ ಬಸ್‌ನಿಲ್ದಾಣ ಬಳಿಯ ಬಿಡಕಿ ಬಯಲು ಹಾಗೂ ಸುತ್ತಲಿನ ರಸ್ತೆ ಮೇಲೆ ಮಂಗಳವಾರದ ಸಂತೆಗೆ ತರಕಾರಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಸಂಚಾರಕ್ಕೆ ತೊಂದರೆ ಆಗುತ್ತದೆ ಎಂದು ಮಾರಿಕಾಂಬಾ ದೇವಿ ಜಾತ್ರೆ ವೇಳೆಗೆ ಮಾತ್ರ ಬಸ್‌ ನಿಲ್ದಾಣ ಹಾಗೂ ಸಂತೆ ವ್ಯಾಪಾರಸ್ಥರಿಗೆ ಅನುಕೂಲ ಮಾಡಲು ಸ್ಥಳಾಂತರಿಸಲಾಗುತ್ತಿದ್ದ ವಿಕಾಸಾಶ್ರಮದಲ್ಲಿ ಮಂಗಳವಾರದ ಸಂತೆ ಕಾಲಕ್ರಮೇಣ ಕಾಯಂ ಆಗಿತ್ತು.

ಮಳೆಗಾಲ ಬಂತೆಂದರೆ ಮಣ್ಣಿನ ನೆಲದಲ್ಲಿ ಹೊಂಡಗಳು ಬಿದ್ದು ಗಿಜಿಗಿಟ್ಟಿಯೂ ಆಗುತ್ತಿತ್ತು. ತರಕಾರಿಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಹಾಗೂ ಗ್ರಾಹಕರಿಗೂ ಖರೀದಿಸಲು ಸಮಸ್ಯೆ ಆಗುತ್ತಿತ್ತು. ಎಷ್ಟೊತ್ತಿಗೆ ಇಲ್ಲಿಂದ ಹೋಗುತ್ತೇವಪ್ಪ ಎಂಬಂತೆ ಆಗಿದ್ದವು.

ಯಾರೆಲ್ಲ ಬರ್ತಾರೆ?: ಮಂಗಳವಾರದ ಸಂತೆಗೆ ಹಾನಗಲ್, ಬಂಕಾಪುರ, ಹಾವೇರಿ ಭಾಗದ ರೈತರು, ಸಂತೆ ವರ್ತಕರು ಬರುತ್ತಾರೆ. ಬಹುತೇಕ ಬೆಳೆಗಾರರೇ ಬಂದು ಮಾರಾಟ ಮಾಡುವುದೂ ಇದೆ. ಕೊತ್ತಂಬರಿ, ಸಬ್ಬಸಿಗೆ, ಹರಿವೆ ಸೊಪ್ಪಿನಿಂದ ಮೆಣಸಿನ ತನಕ, ಮೂಲಂಗಿ, ಬೀಟ್ರೂಟ್, ಆಲೂಗಡ್ಡೆ, ತೊಂಡೆಕಾಯಿ, ಹೀರೇಕಾಯಿ, ಬೆಂಡೆಕಾಯಿ, ಸೌತೆಕಾಯಿಯಂತಹ ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ಸುಮಾರು 60 ಜನ ವಿಕಾಸಾಶ್ರಮದ ಸಂತೆ ವರ್ತಕರಿದ್ದಾರೆ. ನಗರಸಭೆ ಇವರಿಂದ ವಾರಕ್ಕೆ ಎರಡುವರೆ ಸಾವಿರ ರೂ. ಕರ ವಸೂಲಿ ಮಾಡುತ್ತದೆ. ಇಲ್ಲಿ ಈವರೆಗೆ ಬೆಳಕಿನ ವ್ಯವಸ್ಥೆ ಬಿಟ್ಟು ಬೇರೇನೂ ಇರಲಿಲ್ಲ.

ಸಮಸ್ಯೆ ನಿವಾರಣೆಗೆ ಯತ್ನ: ನಗರಸಭೆಯು ವಿಕಾಸಾಶ್ರಮದಲ್ಲಿ ಸಂತೆಗೆ ಅವಕಾಶ ಮಾಡಿಕೊಟ್ಟ ಬಳಿಕ ಸುತ್ತಮುತ್ತಲಿನ ನಿವಾಸಿಗಳಿಗೆ ಅನುಕೂಲವೇನೋ ಆಯ್ತು. ಆದರೆ, ಮಳೆಗಾಲ ಬಂದರೆ ಗಿಜಿಗುಡುತ್ತಿತ್ತು. ನಗರಸಭೆ ಕರ ವಸೂಲಿ ಮಾಡಿದರೂ ವ್ಯವಸ್ಥೆ ಮಾಡಿರಲಿಲ್ಲ.

ಇದಕ್ಕೆ ಕರಾವಳಿ ಅಭಿವೃದ್ಧಿ ಪ್ರಾಕಾರಕ್ಕೆ ನಗರಸಭೆ ಮನವಿ ಸಲ್ಲಿಸಿತು. ಇದರ ಪರಿಣಾಮ ಅನುದಾನ ಕೂಡ ಮಂಜೂರಿ ಆಯ್ತು. ವಿಕಾಸಾಶ್ರಮ ಬಯಲಿಗೆ ಇಂಟರ್‌ಲಾಕ್‌ ಫೇವರ್ ಅಳವಡಿಕೆಗೆ 24.57 ಲಕ್ಷ ರೂ. ಅನುದಾನ ಬಂತು. ನಿರ್ಮಿತಿ ಕೇಂದ್ರ ಕಾಮಗಾರಿ ನಿರ್ವಹಣೆ ಆರಂಭಿಸಿತು. 17 ಸಾವಿರ ಚದುರಡಿಗೆ ಇಂಟರ್‌ಲಾಕ್‌ ಫೇವರ್ ಅಳವಡಿಕೆ ಮಾಡಲಾಯಿತು. ಕಳೆದ ಎರಡು ತಿಂಗಳಿಂದ ಕಾಮಗಾರಿ ನಡೆದಿದ್ದು, ಮುಂದಿನ ಮಂಗಳವಾರದ ವೇಳೆಗೆ ಬಳಕೆಗೆ ಸಿಗಬಹುದು ಎನ್ನುತ್ತಾರೆ ಅಧಿಕಾರಿಗಳು.

ಕಳೆದ ಆರೇಳು ವಾರದಿಂದ ವಿಕಾಸಾಶ್ರಮದ ಹೊರಗಡೆ ರಸ್ತೆ ಅಂಚಿನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದಷ್ಟು ಬೇಗ ಒಳಗಡೆ ಮಾರಾಟಕ್ಕೆ ಅನುಕೂಲ ಮಾಡಿಕೊಡಲಿ ಎಂದೂ ಈಗಾಗಲೇ ರೈತರು ಆಗ್ರಹಿಸಿದ್ದೂ ಆಗಿದೆ.

ಇನ್ನೂ ಏನಾಗಬೇಕಿದೆ?:
ದನಗಳು ಒಳಗೆ ಬಾರದಂತೆ ಕೌ ಗಾರ್ಡ್‌ ಹಾಕಬೇಕು. ವಿಕಾಸಾಶ್ರಮ ಬಯಲಿನಲ್ಲಿನ ರಂಗಮಂದಿರದ ನಿರ್ವಹಣೆ ಆಗಬೇಕು. ಹಿಂಬದಿ ಕಟ್ಟಡ ಜೀರ್ಣವಾಗಿದ್ದು, ಬಳಕೆಗೆ ಬರುವಂತೆ ನಿರ್ಮಾಣ ಮಾಡಬೇಕು. ಸಹ್ಯಾದ್ರಿ ರಂಗ ಮಂದಿರ ತೆರೆದಿದ್ದು, ಅದರಲ್ಲಿ ಅನೈತಿಕ ಚಟುವಟಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಇಡೀ ಬಯಲನ್ನು ಅಂದವಾಗಿಟ್ಟುಕೊಳ್ಳಬೇಕಿದೆ.

 

•ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.