ಕಸ ಸಂಗ್ರಹಕ್ಕೆ ನಗರಸಭೆಗೆ 10 ಹೊಸ ವಾಹನ

ಸೆಪ್ಟಂಬರ್‌ ಅಂತ್ಯದೊಳಗೆ ಆಗಮನದ ನಿರೀಕ್ಷೆ

Team Udayavani, Jul 10, 2019, 5:00 AM IST

s-20

ಪುತ್ತೂರು: ಪುತ್ತೂರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ‘ಸ್ವಚ್ಛ ಪುತ್ತೂರು’ ಕಲ್ಪನೆಯಲ್ಲಿ ಮುಂದಡಿಯಿಟ್ಟಿರುವ ಪುತ್ತೂರು ನಗರಸಭೆಗೆ 4.49 ಕೋಟಿ ರೂ.ಗಳಲ್ಲಿ ನೈರ್ಮಲ್ಯ ಘಟಕ ಸೇರಿದಂತೆ ಮನೆ ಮನೆ ಕಸ ಸಂಗ್ರಹಕ್ಕೆ 10 ನೂತನ ವಾಹನ ಗಳು ಮಂಜೂರಾಗಿದ್ದು, ಸೆಪ್ಟಂಬರ್‌ ಅಂತ್ಯದೊಳಗೆ ಈ ವಾಹನಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿವೆ.

ಸ್ವಚ್ಛ ಭಾರತ್‌ ಯೋಜನೆಯಡಿ ಪುತ್ತೂರು ನಗರಸಭೆಗೆ ಡಿಪಿಆರ್‌ ಮಂಜೂರಾತಿ ಲಭಿಸಿದ್ದು, ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಒಗ್ಗೂಡುವಿಕೆ ಅನುದಾನ ಮಂಜೂರಾಗಿದೆ. ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಜೂರಾತಿ ಲಭಿಸಿದೆ.

ಶೇಕಡಾವಾರು ಅನುದಾನ
ಪ್ರಸ್ತುತ ಸ್ವಚ್ಛ ಭಾರತ್‌ ಯೋಜನೆಯಡಿ ಮಂಜೂರಾಗಿರುವ ಅನುದಾನವು ಮೂರು ಮೂಲಗಳಿಂದ ಶೇಕಡಾವಾರು ಅನುದಾನದಲ್ಲಿ ಲಭ್ಯವಾಗಿದೆ. ಕೇಂದ್ರ ಸರಕಾರದಿಂದ ಶೇ. 35 ಅಂದರೆ 1.57 ಕೋಟಿ ರೂ., ರಾಜ್ಯ ಸರಕಾರದ ಶೇ. 23.30 ಅಂದರೆ 1.04 ಕೋಟಿ ರೂ. ಹಾಗೂ ಸ್ಥಳೀಯ ಸಂಸ್ಥೆಯ (ಯುಎಲ್ಡಿ) ಶೇ. 41.70 ಅಂದರೆ 1.87 ಕೋಟಿ ರೂ. ಹೀಗೆ ಒಟ್ಟು 4.49.38 ಕೋಟಿ ರೂ. ಅನುದಾನ ಮಂಜೂರಾಗಿದೆ.

ಸ್ಥಳೀಯ ಸಂಸ್ಥೆಯ ಎಸ್‌ಎಫ್‌ಸಿಹಾಗೂ 14ನೇ ಹಣಕಾಸು ಯೋಜನೆಯ ಮೂಲಕ ಅನುದಾನ ಮೀಸಲಿರಿಸಲಾಗಿದೆ. ಈ ಒಟ್ಟು ಅನುದಾನದಲ್ಲಿ ಕಸ ವಿಲೇವಾರಿ ವಾಹನಗಳು ಸಹಿತ 1.02.55 ಕೋ.ರೂ.ನಲ್ಲಿ ನೈರ್ಮಲ್ಯ ಘಟಕ (ಸ್ಯಾನಿಟರಿ ಲ್ಯಾಂಡ್‌ ಫಿಲ್ ಸೈಟ್) ಹಾಗೂ 3.50 ಲಕ್ಷ ರೂ.ಗಳನ್ನು ವಿಡ್ರೊ ಫ್ಲಾ ್ಯಟ್ಫಾರ್ಮ್ಗೆ ಮೀಸಲಿರಿಸಲಾಗಿದೆ.

ಸಿಬಂದಿ ಕೊರತೆ
ನಿಯಮದ ಪ್ರಕಾರ 700 ಮಂದಿಗೆ ಒಬ್ಬ ಪೌರಕಾರ್ಮಿಕ ಬೇಕಿದ್ದು, ಪುತ್ತೂರು ನಗರಸಭೆಯಲ್ಲಿ ಒಟ್ಟು 100 ಮಂದಿ ಕಾರ್ಯಾ ಚರಿಸಬೇಕು. ಆದರೆ 41 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಿಸುತ್ತಿದ್ದಾರೆ. ನಗರಸಭೆಯಲ್ಲಿ 15 ಖಾಯಂ ಕಾರ್ಮಿಕರಿದ್ದು, ಅವರಲ್ಲಿ ಮೂವರು ನೀರು ಬಿಡುವ ಕಾರ್ಯ ಹಾಗೂ ಇನ್ನೂ ಮೂವರು ನಗರಸಭೆ ಕಚೇರಿ ಯಲ್ಲಿ ಅಟೆಂಡರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪುತ್ತೂರು ನಗರಸಭೆಯಲ್ಲಿ ಹಾಲಿ ಒಟ್ಟು 7 ವಾಹನಗಳು ಮನೆ ಮನೆ ಕಸ ಸಂಗ್ರಹದ ಕಾರ್ಯ ನಡೆಸುತ್ತಿವೆ. ಪುತ್ತೂರು ನಗರಸಭೆಯ ಮೂರು ಟಾಟಾ ಏಸ್‌ ಆಟೋಲಿಫ್ಟ್‌ ವಾಹನಗಳು ಹಾಗೂ ನಾಲ್ಕು ವಾಹನಗಳು ಹೊರಗುತ್ತಿಗೆಯಲ್ಲಿ ಕಾರ್ಯಾಚರಿಸುತ್ತಿವೆ. ಜತೆಗೆ ಒಂದು ನಗರಸಭೆಯ ಮಿನಿ ಟಿಪ್ಪರ್‌ ಕಾರ್ಯಾಚರಿಸುತ್ತಿದೆ. ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ 10 ಬೊಲೆರೊ ಪಿಕ್‌ಅಪ್‌ ಹೊಸ ವಾಹನಗಳು ನಗರಸಭೆಗೆ ಬರಲಿದ್ದು, ಒಂದು ಮಿನಿ ಟಿಪ್ಪರ್‌ ಆಗಮಿಸಲಿದೆ. ಹೊರಗುತ್ತಿಗೆಯ ವಾಹನಗಳನ್ನು ಕೈಬಿಟ್ಟರೆ ಒಟ್ಟು 15 ವಾಹನಗಳಿಂದ ಕಸ ವಿಲೇವಾರಿ ಕಾರ್ಯ ನಡೆಯಲಿದೆ.

ಹೊಸ ವಾಹನಗಳು
ಪುತ್ತೂರು ನಗರಸಭೆಯಲ್ಲಿ ಹಾಲಿ ಒಟ್ಟು 7 ವಾಹನಗಳು ಮನೆ ಮನೆ ಕಸ ಸಂಗ್ರಹದ ಕಾರ್ಯ ನಡೆಸುತ್ತಿವೆ. ಪುತ್ತೂರು ನಗರಸಭೆಯ ಮೂರು ಟಾಟಾ ಏಸ್‌ ಆಟೋಲಿಫ್ಟ್‌ ವಾಹನಗಳು ಹಾಗೂ ನಾಲ್ಕು ವಾಹನಗಳು ಹೊರಗುತ್ತಿಗೆಯಲ್ಲಿ ಕಾರ್ಯಾಚರಿಸುತ್ತಿವೆ. ಜತೆಗೆ ಒಂದು ನಗರಸಭೆಯ ಮಿನಿ ಟಿಪ್ಪರ್‌ ಕಾರ್ಯಾಚರಿಸುತ್ತಿದೆ. ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ 10 ಬೊಲೆರೊ ಪಿಕ್‌ಅಪ್‌ ಹೊಸ ವಾಹನಗಳು ನಗರಸಭೆಗೆ ಬರಲಿದ್ದು, ಒಂದು ಮಿನಿ ಟಿಪ್ಪರ್‌ ಆಗಮಿಸಲಿದೆ. ಹೊರಗುತ್ತಿಗೆಯ ವಾಹನಗಳನ್ನು ಕೈಬಿಟ್ಟರೆ ಒಟ್ಟು 15 ವಾಹನಗಳಿಂದ ಕಸ ವಿಲೇವಾರಿ ಕಾರ್ಯ ನಡೆಯಲಿದೆ.

ಸ್ವಚ್ಛ ಪುತ್ತೂರು ಅಭಿಯಾನ

ನಗರಸಭೆಗೆ ಸ್ವಚ್ಛ ಭಾರತ್‌ ಯೋಜನೆಯಡಿ 4.49 ಕೋ.ರೂ.ಗಳು ಮಂಜೂರಾಗಿದ್ದು, 10 ಕಸ ಸಂಗ್ರಹ ಹೊಸ ವಾಹನಗಳು ಆಗಮಿಸಲಿವೆ. ರೋಟರಿ ಕ್ಲಬ್‌, ಹಸುರು ದಳ ಹಾಗೂ ನಗರಸಭೆಯ ಸಹಯೋಗದಲ್ಲಿ ಸ್ವಚ್ಛ ಪುತ್ತೂರು ಅಭಿಯಾನ ಕೈಗೊಂಡಿದ್ದು, ಕಸ ಸಂಗ್ರಹಣೆಯ ಸಂದರ್ಭ ಹಸಿ ಕಸ, ಒಣ ಕಸ ಹಾಗೂ ಅಪಾಯಕಾರಿ ಕಸಗಳನ್ನು ಪ್ರತ್ಯೇಕ ಮಾಡಿ ನೀಡುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ, ಪುತ್ತೂರು ನಗರಸಭೆ

ಟಾಪ್ ನ್ಯೂಸ್

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

18-

UV Fusion: ತೇರು ಬೀದಿಗೆ ಬಂದಿದೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.