ತಪಾಸಣೆ ವೇಳೆ ಅವಘಡ: ತಂತ್ರಜ್ಞ ಸಾವು
Team Udayavani, Jul 11, 2019, 5:00 AM IST
ಕೋಲ್ಕತಾ: ಪಶ್ಚಿಮ ಬಂಗಾಲದ ಕೋಲ್ಕತ್ತಾದ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ಸಂಸ್ಥೆಯ ವಿಮಾನವೊಂದರ ತಪಾಸಣೆ ನಡೆಸುತ್ತಿದ್ದ ಏರ್ಕ್ರಾಫ್ಟ್ ಮೇಂಟೆನನ್ಸ್ ಸಿಬಂದಿಯಾದ ರೋಹಿತ್ ಪಾಂಡೆ ಎಂಬ ತಂತಜ್ಞರೊಬ್ಬರು ತಾಂತ್ರಿಕ ಅವಘಡದಿಂದ ಸಾವನ್ನಪ್ಪಿದ್ದಾರೆ.
ನೆಲದ ಮೇಲೆ ನಿಂತು ವಿಮಾನದ ಕೆಳಭಾಗದಲ್ಲಿರುವ ಹೈಡ್ರಾಲಿಕ್ ಬಾಗಿಲುಗಳ ತಪಾಸಣೆ ನಡೆಸುತ್ತಿದ್ದಾಗ ಆ ಬಾಗಿಲುಗಳು “ಹೈಡ್ರಾಲಿಕ್ ಪ್ರಶರ್’ನಿಂದಾಗಿ ಹಠಾತ್ತಾಗಿ ಮುಚ್ಚಿಕೊಂಡ ಪರಿಣಾಮ, ರೋಹಿತ್ ಅವರ ಕುತ್ತಿಗೆಯು ಬಾಗಿಲುಗಳ ನಡುವೆ ಸಿಲುಕಿಕೊಂಡಿತು. ಅವರನ್ನು ರಕ್ಷಿಸಲೆಂದು ಬಾಗಿಲುಗಳನ್ನು ಒಡೆಯಲಾಯಿತಾದರೂ, ಅಷ್ಟ ರಲ್ಲಿ ಅವರು ಅಸುನೀಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ತಾಂತ್ರಿಕ ಸಮಸ್ಯೆ ಕಾರಣವೇ ಅಥವಾ ಯಾರದ್ದಾದರೂ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ