ಸರ್ಕಾರಿ ಶಾಲೆ ಸ್ಥಿತಿ ದೇವರಿಗೇ ಪ್ರೀತಿ
•30 ಸಾವಿರ ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ ಸಮವಸ್ತ್ರ•21,96,171 ಮಕ್ಕಳಿಗೆ ಸಮವಸ್ತ್ರದ ಬೇಡಿಕೆ
Team Udayavani, Jul 15, 2019, 10:39 AM IST
ಕೊಪ್ಪಳ: ಶಾಲಾ ಸಮವಸ್ತ್ರದ ಸಾಂದರ್ಭಿಕ ಚಿತ್ರ.
ಕೊಪ್ಪಳ: ಸರ್ಕಾರಿ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿ ತಿಂಗಳು ಪೂರೈಸಿದೆ. ಆದರೆ ರಾಜ್ಯ ಶಿಕ್ಷಣ ಇಲಾಖೆ ಜಿಲ್ಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಸಮವಸ್ತ್ರ ಪೂರೈಸಿಲ್ಲ. ಜಿಲ್ಲೆಯ 30,694 ವಿದ್ಯಾರ್ಥಿಗಳಿಗೆ ಸಮವಸ್ತ್ರದ ಕೊರತೆಯಾಗಿದ್ದು, ಹಂತ ಹಂತವಾಗಿ ಪೂರೈಕೆಯಾಗಲಿವೆ ಎನ್ನುವ ಮಾತು ಇಲಾಖೆಯಲ್ಲಿ ಕೇಳಿ ಬಂದಿವೆ.
ರಾಜ್ಯ ಸರ್ಕಾರವು ಪ್ರತಿ ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳೂ ಶಾಲೆಗೆ ಪ್ರವೇಶಾತಿ ಪಡೆದು ಶಿಕ್ಷಣದ ಬಗ್ಗೆ ಕಾಳಜಿ ತೋರಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಪ್ರಾಥಮಿಕ ಹಂತದಲ್ಲಿ ಹಲವು ಯೋಜನೆ ಜಾರಿ ಮಾಡುತ್ತಿದೆ. ಆ ಯೋಜನೆಗಳಲ್ಲಿ ಸಮವಸ್ತ್ರಗಳ ಪೂರೈಕೆಯೂ ಒಂದಾಗಿದೆ.
ವಿಶೇಷವಾಗಿ, ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಪಾಲಕರಿಗೆ ಆರ್ಥಿಕ ತೊಂದರೆ ಇರುತ್ತೆ. ಕೆಲವೊಂದು ಸಂದರ್ಭದಲ್ಲಿ ಸಕಾಲಕ್ಕೆ ಮಕ್ಕಳಿಗೆ ಸಮವಸ್ತ್ರ ಕೊಡಿಸಲು ಆಗುವುದಿಲ್ಲ. ಈ ಹಿಂಜರಿಕೆಯಿಂದ ಮಕ್ಕಳು ಶಾಲೆ ಬಿಡುವ ಪರಿಸ್ಥಿತಿ ಎದುರಾಗುತ್ತಿವೆ. ಇನ್ನೂ ಶಾಲೆಗಳಲ್ಲಿ ಶ್ರೀಮಂತ ಮಕ್ಕಳು ಉತ್ತಮ ಬಟ್ಟೆ ಧರಿಸಿದ್ದರೆ, ಬಡ ಮಕ್ಕಳಿಗೆ ಬಟ್ಟೆಗಳ ಕೊರತೆ ಇರುವುದನ್ನು ಅವಲೋಕಿಸಿ ಸರ್ಕಾರವು ಶಾಲೆಗಳಲ್ಲಿ ಪ್ರತಿಯೊಬ್ಬರಿಗೂ ಸಮವಸ್ತ್ರ ಕೊಡಲು ನಿರ್ಧರಿಸಿ ಈ ಯೋಜನೆ ಆರಂಭಿಸಿದೆ. ಯೋಜನೆಯ ಉದ್ದೇಶವೇನೋ ಉತ್ತಮವಾಗಿದೆ. ಆದರೆ ಸಕಾಲಕ್ಕೆ ಮಕ್ಕಳಿಗೆ ಸಮವಸ್ತ್ರ ತಲುಪಿಲ್ಲ ಎನ್ನುವುದೇ ಬೇಸರದ ಸಂಗತಿ.
ಪ್ರಸಕ್ತ ವರ್ಷ ಜಿಲ್ಲೆಯ 1,96,171 ವಿದ್ಯಾರ್ಥಿಗಳಿಗೆ ರಾಜ್ಯ ಇಲಾಖೆಯು ಸಮವಸ್ತ್ರ ಪೂರೈಕೆ ಮಾಡಬೇಕಿತ್ತು. ಆದರೆ ಕೊಪ್ಪಳ ತಾಲೂಕಿಗೆ 41,809, ಕುಷ್ಟಗಿ ತಾಲೂಕಿಗೆ 42,099, ಗಂಗಾವತಿ ತಾಲೂಕಿಗೆ 46,050 ಹಾಗೂ ಯಲಬುರ್ಗಾ ತಾಲೂಕಿಗೆ 35,519 ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ಪೂರೈಕೆ ಮಾಡಿದೆ. ಇನ್ನೂ ಜಿಲ್ಲಾದ್ಯಂತ 30,694 ವಿದ್ಯಾರ್ಥಿಗಳಿಗೆ ಇಲಾಖೆ ಸಮವಸ್ತ್ರ ಪೂರೈಸಿಲ್ಲ.
ಸಮವಸ್ತ್ರಗಳ ಪೂರೈಕೆಯ ಕುರಿತು ಸರ್ಕಾರವು ವಿದ್ಯಾರ್ಥಿಗಳ ಹಾಜರಾತಿಗೆ ಅನುಗುಣವಾಗಿ ಪೂರೈಕೆಯಾಗಲಿದೆ. ನಿಯಮದ ಪ್ರಕಾರ, ಶಾಲಾ ಆರಂಭದ ದಿನದಂದೇ ಕೊಡಬೇಕು ಎಂದು ಹೇಳುತ್ತದೆ. ಆದರೆ ಕೆಲ ತೊಂದರೆಯಿಂದ ಸಕಾಲಕ್ಕೆ ಪೂರೈಕೆ ಮಾಡಲು ಆಗುತ್ತಿಲ್ಲ. ನಮ್ಮ ಮಕ್ಕಳ ದಾಖಲಾತಿ ರಾಜ್ಯ ಇಲಾಖೆಯಲ್ಲಿ ಇರುತ್ತೆ. ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ಪೂರೈಕೆಯಾಗಬೇಕಾಗಿರುವುದರಿಂದ ಕೆಲವಿ ಬಾರಿ ವಿಳಂಬವಾಗಲಿದೆ. ಹಂತ ಹಂತವಾಗಿ ಮಗುವಿಗೆ ಸಮವಸ್ತ್ರ ಪೂರೈಕೆಯಾಗಲಿದೆ. ಇದರಲ್ಲಿ ಯಾವುದೇ ತೊಂದರೆಯಾಗಲ್ಲ. ಸಮವಸ್ತ್ರ ಕೊರತೆ ಇರುವ ಎಲ್ಲ ಶಾಲೆಗಳಿಗೂ ಪೂರೈಕೆಯಾಗಲಿದೆ ಎನ್ನುವ ಮಾತನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ