ಪ್ರೊ ಕಬಡ್ಡಿ: ಚಾಂಪಿಯನ್‌ ಬುಲ್ಸ್‌ ಗೆ ಪಾಟ್ನಾ ಸವಾಲು

ಇಂದಿನಿಂದ 7ನೇ ಪ್ರೊ ಕಬಡ್ಡಿ ಪಂದ್ಯಾವಳಿ ಆರಂಭ ; ಮೊದಲ ಪಂದ್ಯದಲ್ಲಿ ಟೈಟಾನ್ಸ್‌-ಮುಂಬಾ ಸ್ಪರ್ಧೆ

Team Udayavani, Jul 20, 2019, 5:13 AM IST

PRO-KABADDI

ಹೈದರಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮೊದಲ ಮುಖಾಮುಖೀಯಲ್ಲಿ ಪಾಟ್ನಾ ಪೈರೇಟ್ಸ್‌ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಯು ಮುಂಬಾ ಎದುರಿಸಲಿದೆ.

ಸವಾಲಿಗೆ ರೆಡಿ ಬುಲ್ಸ್‌
ಕಳೆದ ಸಲ ಚಾಂಪಿಯನ್‌ ಆಗಿರುವ ಬೆಂಗಳೂರು ಬುಲ್ಸ್‌ ಈ ಸಲವೂ ಕಪ್‌ ಗೆಲ್ಲುವ ನಿರೀಕ್ಷೆಯಲ್ಲಿದೆ. ಪವನ್‌ ಸೆಹ್ರಾವತ್‌, ರೋಹಿತ್‌ ಕುಮಾರ್‌ ಅವರಂತಹ ದಿಗ್ಗಜ ರೈಡರ್ ತಂಡದ ಬಲ. ಪವನ್‌ ಕಳೆದ ಆವೃತ್ತಿಯಲ್ಲಿ ಒಟ್ಟಾರೆ 271 ರೈಡಿಂಗ್‌ ಅಂಕ ಸಂಪಾದಿಸಿದ್ದರು. ಈ ಸಲವೂ ಅವರ ಮೇಲೆ ಬಹಳ ನಿರೀಕ್ಷೆ ಇಡಲಾಗಿದೆ. ಡಿಫೆಂಡರ್‌ ಮಹೇಂದ್ರ ಸಿಂಗ್‌ ಕೂಡ ತಂಡಕ್ಕೆ ನೆರವಾಗಬಲ್ಲರು.

ಪಾಟ್ನಾಗೆ ಜಯದ ನಿರೀಕ್ಷೆ
ಪಾಟ್ನಾ ಪೈರೇಟ್ಸ್‌ ಪ್ರೊ ಕಬಡ್ಡಿಯಲ್ಲಿ ಒಟ್ಟಾರೆ ಮೂರು ಸಲ ಚಾಂಪಿಯನ್‌ ಆಗಿದೆ. ಈ ಸಲವೂ ಕೂಟದ ಪ್ರಬಲ ತಂಡವಾಗಿದೆ. ಪ್ರದೀಪ್‌ ನರ್ವಾಲ್‌, ಜಾಂಗ್‌ ಕುನ್‌ ಲೀ ರೈಡಿಂಗ್‌ನಲ್ಲಿ ಜಾದೂ ಮಾಡಬಲ್ಲರು. ಆದರೆ ಡಿಫೆಂಡಿಂಗ್‌ ವಿಭಾಗದಲ್ಲಿ ತಂಡದ ಸಾಮರ್ಥ್ಯ ಸಾಲದು ಎಂಬಂತಿದೆ. ಲೆಫ್ಟ್ ಕಾರ್ನರ್‌ ಡಿಫೆಂಡರ್‌ ಜೈದೀಪ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಗಮನ ಸೆಳೆಯಬಲ್ಲ
ಐದು ರೈಡರ್

ರಾಹುಲ್‌ ಚೌಧರಿ
ಈ ಸಲ ತಮಿಳ್‌ ತಲೈ ವಾಸ್‌ ತಂಡದ ಪರ ಆಡಲಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಈ ಸಲ ರಾಹುಲ್‌ ಚೌಧರಿ ಕೂಡಿಕೊಂಡಿರುವುದರಿಂದ ತಂಡ ಮತ್ತಷ್ಟು ಬಲಿಷ್ಠವಾಗಿ ಗೋಚರಿಸಿದೆ.

ಪ್ರದೀಪ್‌ ನರ್ವಾಲ್‌
ಪಾಟ್ನಾ ಪೈರೇಟ್ಸ್‌ ತಾರಾ ಆಟಗಾರ ಪ್ರದೀ ಪ್‌ ನರ್ವಾಲ್‌. ಎದುರಾಳಿಗೆ ಇವರು ಕಬ್ಬಿಣದ ಕಡಲೆ. ಒಂದೇ ರೈಡ್‌ನ‌ಲ್ಲಿ ಎರಡು-ಮೂರು ಅಂಕಗಳನ್ನು ಒಟ್ಟಿಗೆ ತರುವಷ್ಟು ಮಟ್ಟಿಗೆ ಸಾಮರ್ಥ್ಯವಿದೆ. ಒಟ್ಟಾರೆ ರೈಡಿಂಗ್‌ನಿಂದ 858 ಅಂಕವನ್ನು ಪಡೆದಿರುತ್ತಾರೆ.

ಮಣಿಂದರ್‌ ಸಿಂಗ್‌
ಉದ್ದ ಕಾಲಿನಿಂದ ಎದುರಾಳಿ ಆಟಗಾರನ ಟಚ್‌ ಮಾಡಿ ಅಂಕ ಪಡೆಯುವುದರಲ್ಲಿ ಬೆಂಗಾಲ್‌ ವಾರಿಯರ್ ರೈಡರ್‌ ಮಣಿಂದರ್‌ ಸಿಂಗ್‌ ನಿಸ್ಸೀಮರು. ಕಳೆದ ಸಲ ಬೆಂಗಾಲ್‌ ಪರ ಪ್ರಚಂಡ ರೈಡಿಂಗ್‌ ಪ್ರದರ್ಶಿಸಿದ್ದರು.

ಅಜಯ್‌ ಠಾಕೂರ್‌
ಕಳೆದ ಸಲ ತಮಿಳ್‌ ಸ್ವಲ್ಪವಾದರೂ ಮಾನ ಉಳಿಸಿ ಕೊಂಡಿತ್ತು ಎಂದರೆ ಅದಕ್ಕೆ ಕಾರಣ ಅಜಯ್‌ ಠಾಕುರ್‌. ಯಾವುದೇ ಸಂದರ್ಭದಲ್ಲಿ ಎದುರಾಳಿಗಳನ್ನು ಔಟ್‌ ಮಾಡಿ ಅಂಕ ತರಬಲ್ಲ ಬಲ ಠಾಕುರ್‌ ಅವರಲ್ಲಿದೆ.

ಪವನ್‌ ಸೆಹ್ರಾವತ್‌
ಕಳೆದ ಆವೃತ್ತಿಯಲ್ಲಿ ಬೆಂಗಳೂರು ಚಾಂಪಿಯನ್‌ ಆಗಿದ್ದರೆ ಅದಕ್ಕೆ ಮುಖ್ಯ ಕಾರಣ ಪವನ್‌ ಸೆಹ್ರಾವತ್‌. ಈ ಸಲವೂ ಪವನ್‌ ಮಿಂಚಿನ ಆಟದಿಂದ ಎದುರಾಳಿಗೆ ಆಘಾತ ನೀಡಲು ತುದಿಗಾಲಲ್ಲಿ ನಿಂತಿದ್ದಾರೆ. ಒಟ್ಟಾರೆ ರೈಡಿಂಗ್‌ ಅಂಕ 271.

ಟಾಪ್ ನ್ಯೂಸ್

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.