ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಮೌನ ಸೇವಕ ಕರಿಯಪ್ಪ !

•ಗರ್ಭಿಣಿ ವೇಷ ಧರಿಸಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಧಿಧೀರ •ಕರಿಯಪ್ಪನವರನ್ನು ಹುಡುಕಿಕೊಡಲು ಬಹುಮಾನ ಘೋಷಿಸಿದ್ದ ಬ್ರಿಟಿಷರು

Team Udayavani, Jul 20, 2019, 11:50 AM IST

hv-tdy-2

ಹಾವೇರಿ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು, ಹೋರಾಟಕ್ಕೆ ರೂಪಕೊಟ್ಟ ಮೌಲ್ಯಗಳು ಜಿಲ್ಲೆಯಲ್ಲಿ ಸಮೃದ್ಧವಾಗಿವೆ. ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಆತ್ಮಾರ್ಪಣೆಯ ರೋಮಾಂಚಕ ಕಥೆಗಳಲ್ಲಿ ಸಂಗೂರ ಕರಿಯಪ್ಪನವರ ಹೋರಾಟ ವಿಶಿಷ್ಟವಾಗಿದ್ದು, ರೋಮಾಂಚನಕಾರಿಯಾಗಿದೆ.

ಸಂಗೂರಿನ ಕರಿಯಪ್ಪ ಯರೇಶಿಮೆ ಅವರು ತಿಲಕರ ‘ಕೇಸರಿ’ ಪತ್ರಿಕೆ ಹಾಗೂ ಗಾಂಧಿಧೀಜಿಯವರ ‘ಯಂಗ್‌ ಇಂಡಿಯಾ’ ಪತ್ರಿಕೆ ಓದಿ ಪ್ರಭಾವಿತರಾದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆಗಳು ಯಾವ ರೀತಿ ಕೆಲಸ ಮಾಡಿದವು ಎಂಬುದಕ್ಕೆ ಕರಿಯಪ್ಪ ಅವರೇ ಸಾಕ್ಷಿಯಾಗಿದ್ದಾರೆ.

ಡಾ| ಎನ್‌.ಎಸ್‌. ಹರ್ಡೀಕರ ಅವರ ಸಾನ್ನಿಧ್ಯದಲ್ಲಿ ಸೇವಾದಳ ಶಿಕ್ಷಣ ಪಡೆದು ಸಾಮೂಹಿಕ ಅಸಹಕಾರ ಚಳವಳಿ, ವೈಯಕ್ತಿಕ ಕಾಯಿದೆ ಭಂಗ ಚಳವಳಿಗಳ ಪ್ರಾತಿನಿಧಿಕ ಸತ್ಯಾಗ್ರಹದಲ್ಲಿ ಕರಿಯಪ್ಪನವರ ಪಾತ್ರ ಹಿರಿದಾಗಿತ್ತು. ಸುಮಾರು 10 ವರ್ಷಗಳ ಕಾಲ ಸೆರೆವಾಸ ಕಂಡ ಕರಿಯಪ್ಪ, ‘ದಶರಥ’ ಎಂಬ ಗುಪ್ತನಾಮದಿಂದ ಬ್ರಿಟಿಷರಿಗೆ ತಲೆನೋವಾಗಿದ್ದರು. ಶಾಂತಿ ಮತ್ತು ಕ್ರಾಂತಿಗಳ ಸಂಗಮವೆನಿಸಿದ್ದ ಸಂಗೂರು ಕರಿಯಪ್ಪ, ಖಾದಿ ತೊಟ್ಟು ಮೈಲಾರ ಮಹಾದೇವಪ್ಪ ನವರೊಡನೆ ಬೆರತು ಚಳವಳಿಯಲ್ಲಿ ಸಕ್ರಿಯರಾಗಿ ಹೋರಾಡಿದರು.

1940ರಲ್ಲಿ ಮಹಾತ್ಮಗಾಂಧೀಜಿ ಬೆಂಬಲ ಹಾಗೂ ಆಶೀರ್ವಾದ ದೊಂದಿಗೆ ಅವರ ಸಾಕು ಮಗಳು ಎಂದೇ ಕರೆಯಲಾಗುತ್ತಿದ್ದ ಬೀರಮ್ಮ ಅವರನ್ನು ಮದುವೆಯಾದರು. ಪತಿ ಪತ್ನಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾಗಿ ದುಡಿದರು.

ಬ್ರಿಟಿಷರಿಗೆ ಸಿಂಹಸ್ವಪ್ನ: ಬ್ಯಾಡಗಿ ರೈಲು ನಿಲ್ದಾಣ ಭಸ್ಮ, ಮಾಸೂರು ಚಾವಡಿ ಸುಟ್ಟಿದ್ದು, ಅರಣ್ಯ ಅಧಿಕಾರಿಯ ಹಣ ಕೊಳ್ಳೆ ಹೊಡೆದಿದ್ದು, ಸರ್ಕಾರಿ ದಾಖಲೆಗಳ ನಾಶ, ಅಂಚೆ ತಂತಿ ಕತ್ತರಿಸಿದ್ದು ಹೀಗೆ ಹತ್ತಾರು ಬಗೆಯಲ್ಲಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಅವರನ್ನು ಹುಡುಕಿಕೊಟ್ಟರೆ 500ರೂ. ಬಹುಮಾನ ನೀಡುವುದಾಗಿ ಬ್ರಿಟಿಷ್‌ ಸರ್ಕಾರ ಘೋಷಿಸಿ, ಜಿಲ್ಲೆಯ ವಿವಿಧೆಡೆ ಈ ಕುರಿತು ಭಿತ್ತಿಪತ್ರಗಳನ್ನು ಅಂಟಿಸುವ ವ್ಯವಸ್ಥೆ ಮಾಡಿತ್ತು. ಇದಕ್ಕೆ ಜಗ್ಗದ ಸಂಗೂರ ಕರಿಯಪ್ಪ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಹೋರಾಟ ಮಾಡಿ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

ಸಂಗೂರ ಕರಿಯಪ್ಪನವರ ತಂಡ ಜೋಳದ ಹೊಲದಲ್ಲಿ, ಪೊದೆ, ಕಾನುಗಳಲ್ಲಿ ಬೀಡುಬಿಡುತ್ತಿತ್ತು. ಇಲ್ಲಿಂದ ಸ್ವಾತಂತ್ರ್ಯ ಹೋರಾಟಗಾರರ ಮೂಲಕ ಹತ್ತಿರದ ಮನೆಗಳಿಗೆ ಮಾಹಿತಿ ರವಾನಿಸಿ ಅಲ್ಲಿಂದ ಊಟ ತರಿಸಿಕೊಳ್ಳುತ್ತಿದ್ದರು. ಹಲವು ವೇಳೆ ಅವರಿಗೆ ಊಟವೂ ಸಿಗುತ್ತಿರಲಿಲ್ಲ. ಸ್ಥಳ ಬದಲಾಯಿಸುತ್ತಲೇ ಇರುತ್ತಿದ್ದರು.

1943ರಲ್ಲಿ ಒಮ್ಮೆ ಹಿರೇಕೆರೂರು ತಾಲೂಕು ಸುಣಕಲ್ ಬಿದರಿಗೆ ಬಂದು ಜೋಳದ ಹೊಲದಲ್ಲಿ ಅಡಗಿರುವ ಮಾಹಿತಿ ಬ್ರಿಟಿಷರ ಕಿವಿಗೆ ಬಿತ್ತು. ಆಗ ಪೊಲೀಸರು 15 ಎಕರೆ ಹೊಲದ ಸುತ್ತ ಕಾವಲು ಹಾಕಿದರು. ಇದನ್ನು ತಿಳಿದ ಕರಿಯಪ್ಪ ತಂಡ ಮಧ್ಯ ರಾತ್ರಿಯೇ ಅಲ್ಲಿಂದ ಬೇರೆ ಕಡೆ ಹೋಗಲು ತೀರ್ಮಾನಿಸಿತು. ಆಗ ಕರಿಯಪ್ಪನವರಿಗೆ ಹೊಲದಲ್ಲಿ ಪೊಲೀಸರು ಬಾಂಬ್‌ ಇಟ್ಟಿರುವುದು ಗೋಚರಿಸಿತು. ಬಾಂಬ್‌ ಸಿಡಿದರೆ ತಾವೆಲ್ಲ ಪೊಲೀಸರ ವಶವಾಗುವುದು ಖಚಿತ ಎಂದರಿತ ಕರಿಯಪ್ಪನವರು ಬಾಂಬನ್ನು ಕೈಯಲ್ಲಿ ಒತ್ತಿ ಹಿಡಿದರು. ಎಲ್ಲರೂ ಮುಂದೆ ಹೋದ ಬಳಿಕ ಕೈ ಬಿಟ್ಟು ಓಡಿದರು. ಆದರೂ ಬಾಂಬ್‌ ಸಿಡಿದು ಬಲಗೈಯ ಮುಂಗೈ ಛಿದ್ರಗೊಂಡಿತು.

ಗರ್ಭಿಣಿ ವೇಷ: ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಕರಿಯಪ್ಪನವರ, ಪಕ್ಕದ ಹಳ್ಳಿಗೆ ಹೋಗಿ ಮನೆಯೊಂದರ ಕದ ತಟ್ಟಿ, ಅಲ್ಲಿ ಉಪಚರಿಸಿಕೊಂಡರು.

ಛಿದ್ರಗೊಂಡ ಕೈಗೆ ವೈದ್ಯರ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿತ್ತು. ಆಗ ಅವರು ದಾವಣಗೆರೆಯ ವೈದ್ಯರ ಬಳಿ ಹೋಗಲು ನಿರ್ಧರಿಸಿದ್ದರು. ಆದರೆ, ಬ್ರಿಟಿಷ್‌ ಪೊಲೀಸರ ಕಣ್ಣು ತಪ್ಪಿಲು ಅವರು ಚಕ್ಕಡಿಯೊಂದರಲ್ಲಿ ಹುಲ್ಲು ಹಾಕಿ ಕರಿಯಪ್ಪನವರ ಹೊಟ್ಟೆ, ಹಾಗೂ ಮುಖದ ಸುತ್ತ ಬಟ್ಟೆ ಸುತ್ತಿ ಗರ್ಭಿಣಿಯಂತೆ ಮಲಗಿಸಿಕೊಂಡು ಮೂವರು ಹೆಂಗಸರು, ಮೂವರು ಗಂಡಸರು ಕುಳಿತು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆ ಪೊಲೀಸರು ಬಂದಾಗ ಕರಿಯಪ್ಪನವರು ಗರ್ಭಿಣಿಯಂತೆ ನರಳಾಡಿದರೆ, ಉಳಿದ ಹೆಂಗಸರು ಹೆರಿಗೆ ನೋವು ಬಂದಿದೆ ಎನ್ನುತ್ತ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಗಂಭೀರ ಗಾಯದ ಕಾರಣ ವೈದ್ಯರು ಮುಂಗೈ ಕತ್ತರಿಸಿ ಚಿಕಿತ್ಸೆ ನೀಡಿದರು.

ಈ ವಿಷಯ ಪೊಲೀಸರಿಗೆ ಗೊತ್ತಾದಾಗಿದೆ ಎಂದು ತಿಳಿದಾಗ ಕರಿಯಪ್ಪನವರು ಆಸ್ಪತ್ರೆಯ ಹಿಂಬಾಗಿಲಿನಿಂದ ಓಡಲು ಯತ್ನಿಸಿದರು. ಆದರೆ, ಆ ಯತ್ನ ವಿಫಲವಾಗಿ ಪೊಲೀಸರ ವಶವಾದರು. ಮರುದಿನ ಕರಿಯಪ್ಪನವರ ಮೈಗೆ ಬಣ್ಣ ಬಳಿದ ಪೊಲೀಸರು ದಾವಣಗೆರೆ ಪಟ್ಟಣದಲ್ಲಿ ಮೆರವಣಿಗೆ ಮಾಡಿಕೊಂಡು ಒಯ್ದರು. ತುಂಡಾದ ಕೈ ನೋವು, ಬ್ರಿಟಿಷರ ಹಿಂಸೆ ಅನುಭವಿಸುತ್ತಲೇ ಜೈಲುಪಾಲಾದರು.

ಬಳಿಕ ಗಾಂಧೀಜಿಯವರ ಅಣತಿಯಂತೆ ತಡಸ ಗ್ರಾಮದಲ್ಲಿ ಆಶ್ರಮ ಸ್ಥಾಪಿಸಿ ಗ್ರಾಮ ಸ್ವರಾಜ್ಯದ ಗಾಂಧೀಜಿ ಕನಸನ್ನು ನನಸಾಗಿಸಲು ದುಡಿದು ‘ಮೌನ ಸೇವಕ’ ಎಂದು ಕರೆಸಿಕೊಂಡರು. 20-7-1981ರಲ್ಲಿ ಇಹಲೋಕ ತ್ಯಜಿಸಿದರು.

ಇಂದು ಪುಣ್ಯಸ್ಮರಣೆ: ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪ ಸ್ಮಾರಕ ಟ್ರಸ್ಟ್‌ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸಂಗೂರ ಕರಿಯಪ್ಪನವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ತಾಲೂಕಿನ ಸಂಗೂರು ಗ್ರಾಮದಲ್ಲಿ ಜು. 20ರಂದು ಬೆಳಗ್ಗೆ 10ಗಂಟೆಗೆ ಸಂಘಟಿಸಲಾಗಿದೆ.

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.