ಕಿರುತೆರೆಯಲ್ಲಿ ಶ್ರುತಿ
Team Udayavani, Jul 21, 2019, 5:37 AM IST
ಕನ್ನಡ ಚಿತ್ರರಂಗದ 80-90ರ ದಶಕದ ಜನಪ್ರಿಯ ನಾಯಕ ನಟಿ ಶ್ರುತಿ ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವವರು. ಸಿನಿಮಾ, ರಿಯಾಲಿಟಿ ಶೋಗಳು, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶ್ರುತಿ ಈಗ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇಲ್ಲಿಯವರೆಗೆ ಸಿನಿಮಾ, ರಂಗಭೂಮಿ, ರಿಯಾಲಿಟಿ ಶೋಗಳಲ್ಲಿ ಹಲವು ಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸಿರುವ ಶ್ರುತಿ, ಇದೇ ಮೊದಲ ಬಾರಿಗೆ ಧಾರಾವಾಹಿಯೊಂದರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ, ಅದೂ ಕೂಡ ಧಾರಾವಾಹಿಯ ಅತಿಥಿ ಪಾತ್ರದಲ್ಲಿ!
ಹೌದು, ಕನ್ನಡದ ಖಾಸಗಿ ವಾಹಿನಿ ಯೊಂದರಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿ ಈಗ ನೂರನೆ ಸಂಚಿಕೆಯ ಹೊಸ್ತಿಲಿನಲ್ಲಿದ್ದು, ಪ್ರೇಕ್ಷಕರನ್ನು ಮತ್ತಷ್ಟು ಮನರಂಜಿಸಿ, ರೋಚಕ ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ಶ್ರುತಿ ಅವರನ್ನು ಗೆಸ್ಟ್ ಅಪೀಯರೆನ್ಸ್ ನಲ್ಲಿ ಪ್ರೇಕ್ಷಕರ ಮುಂದೆ ಕರೆತರುವ ಆಲೋಚನೆ ಧಾರಾವಾಹಿ ತಂಡದ್ದು.
ಮೊದಲ ಬಾರಿಗೆ ಧಾರಾವಾಹಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿರುವುದರ ಬಗ್ಗೆ ಮಾತನಾಡುವ ಶ್ರುತಿ, “ನಾನೊಬ್ಬ ಕಲಾವಿದೆಯಾಗಿ ಎಲ್ಲಾ ಥರದ ಪಾತ್ರಗಳಲ್ಲೂ ಕಾಣಿಸಿ ಕೊಳ್ಳಲು ಬಯಸುತ್ತೇನೆ. ಅಭಿನಯದ ವಿಚಾರಕ್ಕೆ ಬಂದಾಗ ನನಗೆ ರಂಗಭೂಮಿ, ಸಿನಿಮಾ, ಸೀರಿಯಲ್ ಅಂಥ ಯಾವ ಬೇಧ-ಭಾವವೂ ಇಲ್ಲ. ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿ ಅಭಿನಯಿಸುವುದಷ್ಟೇ ನನ್ನ ಕೆಲಸ. ಧಾರಾವಾಹಿಯ ಪಾತ್ರ ನನಗೆ ಹೊಸದಿರಬಹುದು, ಆದರೆ ಕಿರುತೆರೆ ನನಗೆ ಹೊಸದಲ್ಲ. ಈಗಾಗಲೆ ಕಿರುತೆರೆಯ ಕೆಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ, ಜಡ್ಜ್ ಆಗಿ ಕೆಲಸ ಮಾಡಿದ್ದೇನೆ. ಈಗ ಇದೊಂದು ಹೊಸ ಅವಕಾಶ ಬಂದಿದೆ. ಅದನ್ನೂ ಖುಷಿಯಿಂದ ಸ್ವೀಕರಿಸಿದ್ದೇನೆ’ ಎನ್ನುತ್ತಾರೆ.
ಇನ್ನೊಂದು ವಿಶೇಷವೆಂದರೆ, ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ದಮಯಂತಿ ಟೀಸರ್ ಅನ್ನು, ಆಯಾಯ ಭಾಷೆಯಲ್ಲಿ ಅಲ್ಲಿನ ಸ್ಟಾರ್ ನಟರ ಬಳಿ ಅದ್ಧೂರಿಯಾಗಿ ರಿಲೀಸ್ ಮಾಡಿಸುವ ಪ್ಲಾನ್ನಲ್ಲಿದೆ ಚಿತ್ರತಂಡ. ಆಗಸ್ಟ್ ವೇಳೆಗೆ ದಮಯಂತಿಯ ಆಡಿಯೋ ಹೊರಬರಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ಸೆಪ್ಟೆಂಬರ್ ವೇಳೆಗೆ ದಮಯಂತಿ ಥಿಯೇಟರ್ನಲ್ಲಿ ದರ್ಶನ ಕೊಡಲಿದ್ದಾಳೆ.
ಒಟ್ಟಾರೆ ಹೊಸ ಲುಕ್ನಲ್ಲಿ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿ ಶ್ರುತಿ ಅವರಿದ್ದರೆ, ಶ್ರುತಿ ಅವರ ಸ್ಪೆಷಲ್ ಎಂಟ್ರಿಯಿಂದ ಹೊಸ ಜೋಶ್ನಲ್ಲಿ ಮುನ್ನುಗ್ಗುವ ನಿರೀಕ್ಷೆಯಲ್ಲಿದೆ ಧಾರಾವಾಹಿಯ ತಂಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ