ಪಂಚತಂತ್ರ; ಗ್ರಾಪಂ ನೌಕರರು ಅತಂತ್ರ
5-6 ವರ್ಷದಿಂದ ಸೇವೆ ಸಲ್ಲಿಸಿದ ಗ್ರಾಪಂ ನೌಕರರಿಗೆ ಸರ್ಕಾರದ ನಿಧಿಯಿಂದ ವೇತನ ಪಾವತಿಗೆ ಆಗ್ರಹ
Team Udayavani, Jul 22, 2019, 12:47 PM IST
ಮುದಗಲ್ಲ: ಬನ್ನಿಗೋಳ ಗ್ರಾಪಂ ಕಾರ್ಯಾಲಯ
ಮುದಗಲ್ಲ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರದಲ್ಲಿ ಗ್ರಾಪಂ ನೌಕರರನ್ನು ನೋಂದಣಿ ಮಾಡಿದ್ದಲ್ಲಿ ಸರ್ಕಾರದ ನಿಧಿಯಿಂದ ಇಎಫ್ಎಂಎಸ್ ಮೂಲಕ ನೇರವಾಗಿ ಗ್ರಾಪಂ ನೌಕರರ ಖಾತೆಗೆ ವೇತನ ಪಾವತಿಸಲಾಗುತ್ತಿದೆ.
ಆದರೆ ಲಿಂಗಸುಗೂರ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ 202 ಸಿಬ್ಬಂದಿಇದ್ದು, ಅದರಲ್ಲಿ ಸುಮಾರು 102 ಗ್ರಾಪಂ ನೌಕರರ ಮಾಹಿತಿಯನ್ನು ಆಯಾ ಪಿಡಿಒ ಹಂತದಲ್ಲಿ ಪಂಚತಂತ್ರದಲ್ಲಿ ಅಳವಡಿಸಲಾಗಿತ್ತು, ಅವುಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೇ ಸುಮಾರು 70 ಜನ ನೌಕರರ ದಾಖಲೆಗಳನ್ನು ಪರಿಶೀಲಿಸಿ ಕೇವಲ 18 ಜನ ನೌಕರರಿಗೆ ಮಾತ್ರ ಅನುಮೋದನೆ ನೀಡಿದ್ದಾರೆ. ಇನ್ನುಳಿದ 52ಜನ ನೌಕರರ ಮಾಹಿತಿಯನ್ನು ತಿರಸ್ಕರಿಸಿದ್ದಾರೆ. ಉಳಿದ 52 ಜನ ನೌಕರರ ಪರಿಸ್ಥಿತಿ ಅಯೋಮಯವಾಗಿದೆ. ಇವರಲ್ಲಿ ಬಹಳಷ್ಟು ನೌಕರರು ಸುಮಾರು 10-15 ವರ್ಷಗಳಿಂದ ಕನಿಷ್ಠ ವೇತನ ಇಲ್ಲದೇ ಸೇವೆ ಸಲ್ಲಿಸಿದ್ದಾರೆ. ಹೆಚ್ಚಿನವರು ಅನಕ್ಷರಸ್ಥರಿದ್ದಾರೆ. ಇವರ ಶೈಕ್ಷಣಿಕ ದಾಖಲೆಗಳಿಲ್ಲ. ಹೀಗಾಗಿ ಜಿಲ್ಲಾ ವೈದ್ಯಕಿಯ ಮಂಡಳಿಯಿಂದ ಪಡೆದ ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಆಧಾರದ ಮೇಲೆ ಅನುಮೋದಿಸಬೇಕೆಂದು ಗ್ರಾಪಂ ನೌಕರರ ಸಂಘಟನೆ ಆಗ್ರಹಿಸಿದೆ. 30-40 ತಿಂಗಳುಗಳಿಂದ ವೇತನವಿಲ್ಲದೇ ನೀರಗಂಟಿ ಕೆಲಸ, ಗ್ರಾಪಂ ಸಫಾಯಿ ಹಾಗೂ ಗ್ರಾಪಂ ಅಟೆಂಡರ್ ಕೆಲಸ ನಿರ್ವಹಿಸುತ್ತಿರವ ನೌಕರರ ಬದುಕು ತುಂಬಾ ಶೋಚನಿಯವಾಗಿದೆ. ಗ್ರಾಮ ಪಂಚಾಯಿತಿಗಳು ಕರ ವಸೂಲಾತಿ ಹಣದಲ್ಲಿ ಶೇ. 40ರಷ್ಟು ಸಿಬ್ಬಂದಿ ವೇತನ ನೀಡುತ್ತಿಲ್ಲ ಹಾಗೂ ವೇತನ ನೀಡುವ ಭರವಸೆ ಕೂಡಾ ಇರುವುದಿಲ್ಲ. ಕಾರಣ ತಾಲೂಕು ಪಂಚಾಯಿತಿ ಅಧಿಕಾರಿಗಳು ಈಗಾಗಲೇ ತಿರಸ್ಕರಿಸಿದ ನೌಕರರ ಮಾಹಿತಿಯನ್ನು ಪಿಡಿಒ ಲಾಗಿನ್ನಿಂದ ತಮ್ಮ ಲಾಗಿನ್ಗೆ ತರಿಸಿಕೊಂಡು ಸಾಧ್ಯವಾದಷ್ಟು 5-6 ವರ್ಷಕ್ಕೂ ಮೆಲ್ಪಟ್ಟು ಸೇವೆ ಸಲ್ಲಿಸಿದ ನೌಕರರಿಗೆ ಸರಕಾದ ನಿಧಿಯಿಂದ ವೇತನ ದೊರೆಯುವಂತೆ ಮಾಡಬೇಕೆಂದು ಗ್ರಾಪಂ ಸಿಬ್ಬಂದಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ