ಮುಳುಗಡೆಯ ಭೀತಿಯಲ್ಲಿ ಉಡುಪಿ ಗುಂಡಿಬೈಲು: ಸಂಕಷ್ಟದಲ್ಲಿ ಸ್ಥಳೀಯರು
Team Udayavani, Jul 23, 2019, 10:03 AM IST
ಉಡುಪಿ: ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಉಡುಪಿಯ ಗುಂಡಿಬೈಲು ಪ್ರದೇಶ ಮುಳುಗಡೆಯ ಭೀತಿ ಎದುರಿಸುತ್ತಿದೆ. ಪ್ರದೇಶದ ಮನೆಗಳು, ವಲಸೆ ಕಾರ್ಮಿಕರ ಜೋಪಡಿಗಳ ಒಳಗೆ ನೀರು ನುಗ್ಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಗುಂಡಿಬೈಲು ಪ್ರದೇಶದಲ್ಲಿ ತೋಡೊಂದು ತುಂಬಿ ಹರಿಯುತ್ತಿದ್ದು, ಅದರಿಂದಾಗಿ ನೆರೆ ಉಂಟಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು, ಸ್ಥಳೀಯ ಬೃಹತ್ ಕಟ್ಟಡಗಳ ನೀರು ಕೂಡಾ ಇದೇ ಪ್ರದೇಶಕ್ಕೆ ಹರಿಯುತ್ತಿದೆ.
ಈ ಕೆಸರು ನೀರು ಶೇಖರಣೆಯಿಂದ ತೊಂದರೆಗೆ ಒಳಗಾಗುತ್ತಿದ್ದು, ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತರಿದ್ದಾರೆ.
ಆತಂಕದಲ್ಲಿ ವೃದ್ಧ ದಂಪತಿ: ಗುಂಡಿಬೈಲು ಪ್ರದೇಶದಲ್ಲಿ ವಿಕ್ಟರ್ ದಂಪತಿಗಳು ವಾಸವಾಗಿದ್ದು, ಅವರ ಮನೆಯ ಜಗಲಿ ಮುಳುಗಡೆಯಾಗುವ ಹಂತಕ್ಕೆ ನೀರು ಬಂದಿದೆ. 85 ವರ್ಷದ ವಿಕ್ಟರ್ ಮತ್ತು ಪತ್ನಿ ಮಾತ್ರ ಮನೆಯಲ್ಲಿ ವಾಸವಿದ್ದು, ಮನೆಯ ಸುತ್ತ ನೀರು ನಿಂತಿರುವುದರಿಂದ ಆತಂಕಕ್ಕೀಡಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ