ಸತ್ತಳೆಂದು ಸಂಸ್ಕಾರಕ್ಕೆ ಬಂದಾಗ ಕಣ್ಣು ಬಿಟ್ಟಳು!
•ಕೊನೆಗೂ ಮೃತಪಟ್ಟ ತಾಯಿ•6ನೇ ಹೆರಿಗೆ ವೇಳೆ ಆಘಾತ•ಕೊಪ್ಪಳ ಖಾಸಗಿ ಆಸ್ಪತ್ರೆಯಲ್ಲಿ ಯಡವಟ್ಟು
Team Udayavani, Jul 24, 2019, 4:34 PM IST
ಕೊಪ್ಪಳ: ಕೆ.ಎಸ್. ಆಸ್ಪತ್ರೆಯಲ್ಲಿ ಕೃತಕ ಆಮ್ಲಜನಕ ಸಹಾಯದಿಂದ ಜೀವ ಹಿಡಿದಿದ್ದ ಕವಿತಾ.
ಕೊಪ್ಪಳ: ಆರು ಮಕ್ಕಳನ್ನು ಹೆತ್ತಿರುವ ಮಹಿಳೆ ನಗರದ ಕೆ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ ಎಂದು ಸುದ್ದಿ ಹರಡುತ್ತಿದ್ದಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಬಂದಿದ್ದ ವೇಳೆ ಮಹಿಳೆ ಕಣ್ತೆರೆದಿದ್ದರಿಂದ ಸಂಬಂಧಿಕರು ವಿಚಲಿತರಾದ ಘಟನೆ ನಡೆದಿದ್ದು, ಕೊನೆಗೂ ಆ ಮಹಿಳೆ ಮೃತಪಟ್ಟಿದ್ದಾಳೆ.
ಹೌದು, ಕೊಪ್ಪಳದ ಕೆ.ಎಸ್.ಆಸ್ಪತ್ರೆಯಲ್ಲಿ ಸಿನಿಮೀಯ ರೀತಿಯಲ್ಲಿ ವಿಚಿತ್ರ ಘಟನೆ ನಡೆದು ಎಲ್ಲರನ್ನು ತಬ್ಬಿಬ್ಟಾಗಿಸುವಂತೆ ಮಾಡಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಮಹಿಳೆ ಕವಿತಾ ಕುಂಬಾರ ಅವರಿಗೆ ಇಲ್ಲಿನ ಗೋವನಕೊಪ್ಪ ಆಸ್ಪತ್ರೆಯಲ್ಲಿ ಕೇವಲ 25ನೇ ವಯಸ್ಸಿನಲ್ಲಿ ಆರನೇ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಬಳಿಕ ತೊಂದರೆ ಕಾಣಿಸಿಕೊಂಡಿಲ್ಲ. ಆದರೆ ಸೋಮವಾರ ರಾತ್ರಿ ರಕ್ತಸ್ರಾವವಾಗಿದ್ದರಿಂದ ಸಂಬಂಧಿಕರು ಚಿಕಿತ್ಸೆಗಾಗಿ ಕೆ.ಎಸ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದಿದ್ದು ಏನು? ಆಸ್ಪತ್ರೆಯಲ್ಲಿ ಕವಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೆದುಳು, ಮೂತ್ರಪಿಂಡ ನಿಷ್ಕ್ರಿಯವಾಗಿರುವ ವಿಷಯ ತಿಳಿದ ವೈದ್ಯರು, ಪತಿ ಮಂಜುನಾಥ ಕುಂಬಾರಗೆ ಕವಿತಾ ಅವರ ಜೀವಕ್ಕೆ ಅಪಾಯವಿದೆ ಎಂಬ ವಿಷಯ ತಿಳಿಸಿದ್ದರಂತೆ. ಮೆದುಳು ಶಕ್ತಿ ಕಳೆದುಕೊಂಡಿದೆ. ಕಿಡ್ನಿ ಸಹಿತ ವಿಫಲವಾಗಿವೆ. ಕೇವಲ ಆಮ್ಲಜನಕದೊಂದಿಗೆ ಮಾತ್ರ ಉಸಿರಾಟ ನಡೆಸುತ್ತಿದ್ದಾರೆ. ಕೃತಕ ಆಮ್ಲಜನಕ ತೆಗೆದರೆ ಜೀವ ಕಳೆದುಕೊಳ್ಳಲಿದ್ದಾರೆ ಎಂದಿದ್ದರಂತೆ. ಪತಿ ಮಂಜುನಾಥ ಸಹಿತ ಈ ವಿಷಯವನ್ನು ತಮ್ಮ ಕುಟುಂಬ ಸದಸ್ಯರಿಗೆ ಮುಟ್ಟಿಸಿದ್ದಾರೆ. ಆದರೆ ಕವಿತಾ ಸತ್ತಿರುವ ಸುದ್ದಿ ಗ್ರಾಮದಲ್ಲೂ ಹರಡಿದೆ.
ಅಂತ್ಯ ಸಂಸ್ಕಾರಕ್ಕೆ ಬಂದು ಕಂಗಾಲು: ಕವಿತಾ ಅವರ ಸಾವಿನ ಸುದ್ದಿ ಊರಲ್ಲಿ ಹರಡಿದ್ದಲ್ಲದೇ, ಬೇರೆ ಊರಿನ ಸಂಬಂಧಿಕರಿಗೂ ನಿಧನ ಸುದ್ದಿ ತಲುಪಿದೆ. ಅವರೆಲ್ಲರೂ ಮಹಿಳೆ ಅಂತ್ಯಸಂಸ್ಕಾರಕ್ಕೆ ಬಂದಿದ್ದಾರೆ. ಮಹಿಳೆ ಶವ ತೆಗೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದ ವೇಳೆ ಕವಿತಾ ಆಸ್ಪತ್ರೆಯಲ್ಲಿ ಕಣ್ಣು ತೆರೆದು ನೋಡಿದ್ದಾಳೆ. ಇದರಿಂದ ದಿಗ್ಭ್ರಮೆಗೊಂಡ ಕುಟುಂಬ ಸದಸ್ಯರು ನಮ್ಮ ಮಗಳು ಸತ್ತಿಲ್ಲ. ಆದರೂ ವೈದ್ಯರು ಸತ್ತಿದ್ದಾರೆ ಎಂದು ನಮಗೆ ಸುಳ್ಳು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಹಣಕ್ಕಾಗಿ ಈ ರೀತಿ ಮಾಡಿದ್ದಾರೆ. ದೇಹವನ್ನು ಹೊರಗಡೆ ಬಿಡದಂತೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ಹೊರ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್