ಆಪರೇಷನ್‌ ವಿಜಯ್‌ ಶೌರ್ಯದ ದಾಖಲೆ: ಸಿಎಂ ಫ‌ಡ್ನವೀಸ್‌


Team Udayavani, Jul 27, 2019, 12:44 PM IST

mumbai-tdy-4

ಮುಂಬಯಿ, ಜು. 26: ಭಾರತ ಯಾವತ್ತೂ ಯಾವುದೇ ದೇಶವನ್ನು ಆಕ್ರಮಿಸಿಲ್ಲ, ಆದರೆ ಯಾರಾದರೂ ಭಾರತವನ್ನು ಆಕ್ರಮಿಸಲು ಪ್ರಯತ್ನಿಸಿದರೆ, ನಮ್ಮ ದೇಶದ ಸೈನಿಕರು ಅವರ ದಾಳಿಗೆ ಪ್ರತಿ ಉತ್ತರ ನೀಡಿ, ಅವರನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದ್ದಾರೆ. ಆಪರೇಶನ್‌ ವಿಜಯದಲ್ಲಿ ಭಾರತೀಯ ಸೈನಿಕರು ಪಾಕಿಸ್ಥಾನವನ್ನು ತಲುಪಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಭಾವಿಸಿತ್ತು. ಆದರೆ ಭಾರತೀಯ ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿ ಆಪರೇಶನ್‌ ವಿಜಯ್‌ ಯಶಸ್ವಿಯಾದರು. ಅದಕ್ಕಾಗಿಯೇ ಆಪರೇಶನ್‌ ವಿಜಯ ಶೌರ್ಯದ ದಾಖಲೆಯಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಹೇಳಿದರು.

ಕಾರ್ಗಿಲ್ ವಿಜಯ ದಿನದ ನಿಮಿತ್ತ ಅಥರ್ವಾ ಫೌಂಡೇಶನ್‌ ವತಿಯಿಂದ ಶಣ್ಮುಖಾನಂದನ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಸಚಿವ ಆಶಿಶ್‌ ಶೇಲಾರ್‌, ಶಾಸಕ ಮಂಗಲ್ ಪ್ರಭಾತ್‌ ಲೋಧಾ, ಶಾಸಕ ರಾಜ್‌ ಪುರೋಹಿತ್‌, ಲೆಫ್ಟಿನೆಂಟ್ ಜನರಲ್ ಎಸ್‌. ಕೆ. ಪರಾಶರ್‌, ವಿಂಗ್‌ ಕಮಾಂಡರ್‌ ಜಗಮೋಹನ್‌ನಾಥ್‌, ಚಾರಿಟಿ ಅಧಿಕಾರಿ ಸಂಜಯ್‌ ಭಾಟಿಯಾ, ಆಪರೇಶನ್‌ ವಿಜಯದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವ ದಿನದ ಶುಭಾಶಯಗಳನ್ನು ಉಪಸ್ಥಿತ ಗಣ್ಯರಿಗೆ ಪ್ರಸ್ತುತಪಡಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು, ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯ್‌ ದಿನ ಎಂದು ಆಚರಿಸಲಾಗುತ್ತಿದೆ. ಕಾರ್ಗಿಲ್ ವಿಜಯವು 20 ವರ್ಷಗಳನ್ನು ಪೂರೈಸಿದ್ದು, ನಮ್ಮ ಭಾರತಕ್ಕೆ ಗೌರವದ ದಿನವಾಗಿದೆ. ಇಂದು ಆಪರೇಶನ್‌ ವಿಜಯದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗವನ್ನು ನಾವು ನೆನಪಿನಲ್ಲಿಡಬೇಕು. ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಭಾರತಕ್ಕೆ ಸಂಪನ್ಮೂಲಗಳ ಅವಶ್ಯಕತೆಯಿದೆಯೋ, ಹಾಗೆ ನಮ್ಮ ರಾಷ್ಟ್ರದ ಸೈನ್ಯವು ದೊಡ್ಡದಾಗಿರಬೇಕು. ಇಂದು ಭಾರತ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ದೇಶ ಸುರಕ್ಷಿತ ಮತ್ತು ಪ್ರಬಲ ವಾಗಿರುವುದರಿಂದ ಈ ಅಭಿವೃದ್ಧಿಯನ್ನು ಮಾಡಲು ನಮಗೆ ಸಾಧ್ಯವಾಗಿದೆ.

ರಾಜ್ಯದ ಸೈನಿಕರ ಸಹಾಯದಲ್ಲಿ ಹೆಚ್ಚಳ:

ಭಾರತವು ಯಾವಾಗಲೂ ತ್ಯಾಗ ಮತ್ತು ಶೌರ್ಯವನ್ನು ತೋರಿಸಿದೆ. ಭಾರತೀಯ ಸೈನಿಕರು ಸಹ ತ್ಯಾಗ ಮತ್ತು ಶೌರ್ಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದ್ದರಿಂದ ಮಹಾರಾಷ್ಟ್ರ ಸರಕಾರ ಈ ಸೈನಿಕರ ಹಿಂದೆ ಬೆಂಬಲವಾಗಿ ನಿಂತಿದೆ. ನಮ್ಮ ಸೈನಿಕರ ಬಗ್ಗೆ ನಾವೆಲ್ಲರೂ ಕರ್ತವ್ಯಭಾವನೆಯನ್ನು ಹೊಂದಿರುವುದು ಅವಶ್ಯವಾಗಿದೆ.

ಮಹಾರಾಷ್ಟ್ರದ ಹುತಾತ್ಮರ ಕುಟುಂಬ ಗಳಿಗೆ ನೀಡುವ ಪರಿಹಾರ ನಿಧಿಯನ್ನು ಹೆಚ್ಚಿಸಲಾಗಿದೆ. ಈಗ ನೆರವು ಸುಮಾರು 5 ಲಕ್ಷ ರೂ. ದಿಂದ ಹೆಚ್ಚಿಸಿ ಒಂದು ಕೋಟಿ ರೂ.ಗಳಷ್ಟು ಮಾಡಲಾಗಿದೆ. ನಾವೆಲ್ಲರೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಏನೆಂದರೆ, ಸುಮಾರು 125 ಕೋಟಿ ಜನರು ಸೈನಿಕರ ಕುಟುಂಬದೊಂದಿಗೆ ಇದ್ದಾರೆ ಎಂದು ನಾವು ಭರವಸೆ ನೀಡಬೇಕು.

5 ಎಕರೆ ಭೂಮಿ:

ಹುತಾತ್ಮರ ಕುಟುಂಬಗಳಿಗೆ 5 ಎಕರೆ ಭೂಮಿಯನ್ನು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಈ ಭೂ ಖರೀದಿಯಲ್ಲಿ ಸ್ಟಾಂಪ್‌ ಡ್ಯೂಟಿ ಮನ್ನಾ ಮಾಡಲಾಗುತ್ತದೆ. ಈ ನಿರ್ಧಾರವನ್ನು ಎರಡು ವರ್ಷಗಳ ಹಿಂದೆ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರವು ಆಗಸ್ಟ್‌ 15 ಹಾಗೂ ಜನವರಿ 26ರಂದು ಹುತಾತ್ಮರ ಕುಟುಂಬದವರನ್ನು ಸಮ್ಮಾನಪೂರ್ವಕ ಸರಕಾರಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್‌ ಹೇಳಿದರು.

ಅಥರ್ವಾ ಫೌಂಡೇಶನ್‌ ವತಿಯಿಂದ ಕಾರ್ಗಿಲ್ ವಿಜಯ ದಿನವನ್ನು ಆಚರಿ ಸಲು ವಿಶೇಷ ಕಾರ್ಯಕ್ರಮವನ್ನು ನಡೆಯಿತು. ಆಪರೇಶನ್‌ ವಿಜಯ್‌ದ ಬಗ್ಗೆ ಕಿರುಚಿತ್ರವನ್ನು ಕಾರ್ಯಕ್ರಮದ ವೇಳೆ ಪ್ರದರ್ಶಿಸಲಾಯಿತು.

ಹುತಾತ್ಮರ ಕುಟುಂಬಗಳಿಗಾಗಿ ಅಥರ್ವಾ ಫೌಂಡೇಶನ್‌ ಮಾಡಿದ ಕಾರ್ಯಗಳ ಬಗ್ಗೆ ಸುನಿಲ್ ರಾಣೆ ಮಾಹಿತಿ ನೀಡಿದರು. ಫೌಂಡೇಶನ್‌ ವತಿಯಿಂದ ವರ್ಷಾ ರಾಣೆ ಅವರು ಹುತಾತ್ಮರಾದ ಕುಟುಂಬಗಳನ್ನು ಗೌರವಿಸಿದರು.

ಟಾಪ್ ನ್ಯೂಸ್

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ra

Congress; ಅಮೇಠಿಗೆ ರಾಹುಲ್‌: ಅಂತಿಮ ನಿರ್ಧಾರ ಖರ್ಗೆ ಹೆಗಲಿಗೆ

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.