ಊರಿನ ಮಾರಿ ಕಳೆಯಲು ಬಂದ ಆಟಿಕಳಂಜ

ಸಾಂಕ್ರಾಮಿಕ ರೋಗಗಳ ನಿವಾರಣೆಗಾಗಿ ಜನಪದ ಆಚರಣೆ

Team Udayavani, Jul 28, 2019, 5:00 AM IST

q-16

ಆಲಂಕಾರು: ಧೋ ಎಂದು ಸುರಿಯುವ ಮಳೆ, ಆಗಾಗ ಮೈ ಸುಡುವ ಬಿಸಿಲು. ಇಂತಹ ಸಮಯದಲ್ಲಿ ಹೊರಗಡೆ ಗಗ್ಗರ. ತೆಂಬರೆ ಹಾಗೂ ಪಾಡ್ದನದ ಶಬ್ದ ಕೇಳುತ್ತದೆ. ಮನೆ ಬಾಗಿಲಿಗೆ ಆಟಿ ಕಳಂಜನ ಆಗಮನವಾಗಿದೆ!

ತುಳು ನಾಡಿನಲ್ಲಿ ಆಟಿ (ಆಷಾಢ) ತಿಂಗಳು ಬೇಸಾಯದ ಕೃಷಿ ಕಾಯಕಗಳೆಲ್ಲ ಮುಗಿದು, ಗ್ರಾಮೀಣ ಜನತೆ ವಿಶ್ರಾಂತಿ ಪಡೆಯುವ ಸಮಯ. ಈ ಅವಧಿಯಲ್ಲಿ ತುಳುನಾಡಿನ ಸಾಂಸ್ಕೃತಿಕ ಸೊಗಡನ್ನು ಬಿತ್ತರಿಸಲು ಮನೆ ಮನೆಗೆ ಬರುತ್ತಾನೆ, ಆಟಿ ಕಳಂಜ.

ಯಾರಿದು ಆಟಿಕಳಂಜ?
ಅನಾದಿ ಕಾಲದಲ್ಲಿ ತುಳು ನಾಡಿನ ಜನರಿಗೆ ವಿಚಿತ್ರ ರೋಗವೊಂದು ಬಾಧಿಸಿ, ಎಲ್ಲರೂ ನರಳುತ್ತಿದ್ದರಂತೆ. ಆಗ ನಾಗಬ್ರಹ್ಮ ದೇವರು ನಾಡಿನ ರೋಗ (ಮಾರಿ) ಕಳೆಯಲು ಆಟಿಕಳಂಜನನ್ನು ಭೂಮಿಗೆ ಕಳುಹಿಸುತ್ತಾನೆ. ಭೂಮಿಗೆ ಬಂದ ಆಟಿಕಳಂಜ ಮನೆ ಮನೆಗೆ ತೆರಳಿ, ಮಾರಿಯನ್ನು ಓಡಿಸಿ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿ, ಜನರನ್ನು ಹರಸುತ್ತಾನೆ. ಕೃತಜ್ಞತೆಯ ಪ್ರತೀಕವಾಗಿ ಜನರು ನೀಡುವ ಭತ್ತ, ಅರಿಸಿನ, ಉಪ್ಪು, ತೆಂಗಿನಕಾಯಿ, ಹುಳಿ, ಮೆಣಸುಗಳನ್ನು ಪಡೆದು ಊರನ್ನು ಉದ್ಧರಿಸುತ್ತಾನೆ. ಆಟಿ ಕಳಂಜ ನಾಗಬ್ರಹ್ಮನ ಸೃಷ್ಟಿ. ಈಗಲೂ ಪ್ರತಿ ವರ್ಷ ಆಟಿ ತಿಂಗಳಲ್ಲಿ ಆಟಿ ಕಳಂಜ ಮನೆ ಮನೆಗೆ ಬಂದು, ಜನರು ನೀಡುವ ದವಸ- ಧಾನ್ಯಗಳನ್ನು ಸ್ವೀಕರಿಸುತ್ತಾನೆ.

ಆಟಿ ಕಳಂಜ ಸೇವೆಯನ್ನು ನಲಿಕೆ ಹಾಗೂ ಪಂಬತ್ತ ಜನಾಂಗದವರು ಮಾತ್ರ ಮಾಡುತ್ತಾರೆ. ಆಟಿ ತಿಂಗಳು ಭಾರೀ ಮಳೆ ಬರುವ ಸಮಯ. ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚು. ಆಧುನಿಕ ವೈದ್ಯ ಲೋಕಕ್ಕೂ ಸವಾಲಾಗಬಲ್ಲ ಕಾಯಿಲೆಗಳು ಹೊಸದಾಗಿ ವಕ್ಕರಿಸುತ್ತವೆ. ಹಿಂದಿನ ಕಾಲದಲ್ಲಂತೂ ಸಮರ್ಪಕ ಔಷಧ, ಚಿಕಿತ್ಸೆ ಹಾಗೂ ಇತರ ಸೌಲಭ್ಯಗಳಿರಲಿಲ್ಲ. ದೇವರೇ ರೋಗ – ರುಜಿನಗಳಿಂದ ತಮ್ಮನ್ನು ಪಾರು ಮಾಡಬೇಕು ಎಂದು ಜನ ಪ್ರಾರ್ಥಿಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಆಟಿ ಕಳಂಜ ಮನೆಗೆ ಬಂದು ಹರಸಿದರೆ ರೋಗ ಬಾಧಿತನಿಗೆ ಒಂದಷ್ಟು ಧೈರ್ಯ, ಸಮಾಧಾನ. ಇದರಿಂದ ಆರೋಗ್ಯ ಸುಧಾರಿಸುತ್ತಿತ್ತು. ಇದು ಆಟಿ ಕಳಂಜನ ಪ್ರಭಾವ ಎಂದೇ ಜನ ಬಲವಾಗಿ ನಂಬಿದರು.

ಆಟಿಯ 16 ದಿನಗಳು
ಆಟಿ ಕಳಂಜ ತಿಂಗಳ ಮೂವತ್ತು ದಿನವೂ ಊರು ಸುತ್ತುವುದಿಲ್ಲ. ಆರಂಭದಿಂದ ಹದಿನಾರು ದಿನ ಮಾತ್ರ ಊರ ಮಾರಿ ಕಳೆಯಲು ನಾಡಿಗೆ ಇಳಿಯುತ್ತಾನೆ. ಕಾಲಿಗೆ ಹಾಳೆಯಿಂದ ಮಾಡಿದ ಕವಚದ ರಕ್ಷಣೆಯಲ್ಲಿ ಗಗ್ಗರವನ್ನು ಕಟ್ಟಿ, ತೆಂಗಿನ ಗರಿಯಿಂದ ನಿರ್ಮಿಸಿದ ಸಿರಿಯನ್ನು ಸೊಂಟಕ್ಕೆ ಬಿಗಿದು ಮುಖಕ್ಕೆ ವಿಶೇಷ ಬಣ್ಣ ಬಳಿದುಕೊಂಡು ಪಣೋಲಿ ಮರದ ಗರಿಯಿಂದ ನಿರ್ಮಿಸಿದ ಕೊಡೆಯನ್ನು ಹಿಡಿದುಕೊಂಡು ‘ಕಳೆಂಜ ಕಳೆಂಜೆನಾ ಆಟಿದ ಕಳೆಂಜೆನಾ ಊರುದ ಮಾರಿ ಕಳೆಯರೆಂದ್‌ ಆಟಿದ ಕಳೆಂಜೆ ಬತ್ತೇನಾ’ ಎಂಬ ಹಾಡನ್ನು ಹೇಳಿಕೊಂಡು ಸಹಾಯಕ ಬಡಿಯುವ ತೆಂಬರೆಯ ತಾಳಕ್ಕೆ ಹೆಚ್ಚೆ ಹಾಕುತ್ತ ಕಳಂಜ ಮನೆ ಬಾಗಿಲಿಗೆ ಬರುತ್ತಾನೆ. ಬಳಿಕ ಗದ್ದೆ, ತೋಟಗಳಿಗೆ ಹಾಗೂ ಕೃಷಿಗೂ ತಟ್ಟಿದ ಮಾರಿಯನ್ನು ಕಳೆಯುತ್ತಾನೆ. ಹೀಗೆ ಹದಿನಾರು ದಿನ ಮಾತ್ರ ತಿರುಗಾಟ ನಡೆಸಿ ಕೊನೆಯ ದಿನ ತನ್ನೆಲ್ಲ ಪರಿಕರಗಳನ್ನು ಊರಿನ ಗಡಿಯಲ್ಲಿರುವ ಕಾಸರಕನ ಮರಕ್ಕೆ ಕಟ್ಟಿ, ‘ಊರಿಗೆ ಬಂದ ಮಾರಿ ಏಳು ಕಡಲಾಚೆಗೆ ಬೀಳಲಿ’ ಎಂದು ಪ್ರಾರ್ಥನೆ ಸಲ್ಲಿಸಿ ತಿರುಗಾಟ ಕೊನೆಗೊಳಿಸುತ್ತಾನೆ.

ಸದಾನಂದ ಆಲಂಕಾರು

ಟಾಪ್ ನ್ಯೂಸ್

IPL: ರಿಷಭ್‌ ಪಂತ್‌ಗೆ ಒಂದು ನಿಷೇಧ; ಆರ್‌ ಸಿಬಿ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶಾಕ್

IPL: ರಿಷಭ್‌ ಪಂತ್‌ಗೆ ಒಂದು ನಿಷೇಧ; ಆರ್‌ ಸಿಬಿ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶಾಕ್

14-uv-fusion

Mother Nature: ಪ್ರಕೃತಿ ಮಾತೆಯೇ ನೀ ಏಕೆ ಮೌನವಾಗಿರುವೆ ?

Cash Seized: ಅಪಘಾತವಾದ ವಾಹನದಲ್ಲಿತ್ತು ಕಂತೆ ಕಂತೆ ಹಣದ ಕಟ್ಟು… ಬೆಚ್ಚಿ ಬಿದ್ದ ಜನ

Cash Seized: ಅಪಘಾತವಾದ ವಾಹನದಲ್ಲಿತ್ತು ದಾಖಲೆ ಇಲ್ಲದ 7 ಕೋಟಿ ಹಣ… ಬೆಚ್ಚಿ ಬಿದ್ದ ಜನ

11

ವಿವಾಹ ದಿನಾಂಕವನ್ನು ಘೋಷಿಸಿದ ʼಬಿಗ್‌ ಬಾಸ್‌ 16ʼ ಖ್ಯಾತಿಯ ಅಬ್ದು ರೋಝಿಕ್: ಹುಡುಗಿ ಯಾರು?

ಹೈದರಾಬಾದ್‌ ಗೆ ಬರುವೆ ಯಾರು ತಡೆಯುತ್ತಾರೋ…ನೋಡೋಣ: ಒವೈಸಿಗೆ ಬಿಜೆಪಿ ನಾಯಕಿ ರಾಣಾ

ಹೈದರಾಬಾದ್‌ ಗೆ ಬರುವೆ ಯಾರು ತಡೆಯುತ್ತಾರೋ…ನೋಡೋಣ: ಒವೈಸಿಗೆ ಬಿಜೆಪಿ ನಾಯಕಿ ರಾಣಾ

12-mysore

Politics: ಪ್ರಧಾನಿ ಸೋಲುವ ಭಯ, ಹತಾಶೆಯಿಂದ ಮಾತನಾಡುತ್ತಿದ್ದಾರೆ: ಸಿಎಂ

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು

ಮದುವೆ ಸಮಾರಂಭದಲ್ಲಿ ಊಟ ಮಾಡಿದ 30ಕ್ಕೂ ಅಧಿಕ ಮಂದಿ ಅಸ್ವಸ್ಥ… ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಸಂಕೋಲೆ ಬಿಗಿದು ಎಳೆದು ತರುವಾಗ ಯುವಕ ಸಾವು

ಮದ್ಯ ಸೇವಿಸಿ ನೆರೆಮನೆಗೆ ತೆರಳಿ ಗಲಾಟೆಗೆ ಯತ್ನ; ಸಂಕೋಲೆ ಬಿಗಿದು ಎಳೆದು ತರುವಾಗ ಯುವಕ ಸಾವು

Sullia ಪಯಸ್ವಿನಿಯಲ್ಲಿ ಮೀನುಗಳ ಸಾವು; ವಿಷ ಪ್ರಾಶನ ಶಂಕೆ

Sullia ಪಯಸ್ವಿನಿಯಲ್ಲಿ ಮೀನುಗಳ ಸಾವು; ವಿಷ ಪ್ರಾಶನ ಶಂಕೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

IPL: ರಿಷಭ್‌ ಪಂತ್‌ಗೆ ಒಂದು ನಿಷೇಧ; ಆರ್‌ ಸಿಬಿ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶಾಕ್

IPL: ರಿಷಭ್‌ ಪಂತ್‌ಗೆ ಒಂದು ನಿಷೇಧ; ಆರ್‌ ಸಿಬಿ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶಾಕ್

14-uv-fusion

Mother Nature: ಪ್ರಕೃತಿ ಮಾತೆಯೇ ನೀ ಏಕೆ ಮೌನವಾಗಿರುವೆ ?

13-uv-fusion

UV Fusion: ಇಂದೇಕೆ ಎಂಬ ಮಂದತ್ವ!

Cash Seized: ಅಪಘಾತವಾದ ವಾಹನದಲ್ಲಿತ್ತು ಕಂತೆ ಕಂತೆ ಹಣದ ಕಟ್ಟು… ಬೆಚ್ಚಿ ಬಿದ್ದ ಜನ

Cash Seized: ಅಪಘಾತವಾದ ವಾಹನದಲ್ಲಿತ್ತು ದಾಖಲೆ ಇಲ್ಲದ 7 ಕೋಟಿ ಹಣ… ಬೆಚ್ಚಿ ಬಿದ್ದ ಜನ

11

ವಿವಾಹ ದಿನಾಂಕವನ್ನು ಘೋಷಿಸಿದ ʼಬಿಗ್‌ ಬಾಸ್‌ 16ʼ ಖ್ಯಾತಿಯ ಅಬ್ದು ರೋಝಿಕ್: ಹುಡುಗಿ ಯಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.