ಜಿಲ್ಲಾದ್ಯಂತ ನಾಗರಪಂಚಮಿ ಸಂಭ್ರಮ
ನಾಗದೇವತೆ ಮೂರ್ತಿಗೆ ಹಾಲೆರೆದ ನೀರೆಯರು,ಜೋಕಾಲಿ ಜೀಕಿದ ಯುವತಿಯರು
Team Udayavani, Aug 5, 2019, 10:05 AM IST
ಕೊಪ್ಪಳ: ಕುಟುಂಬ ಸದಸ್ಯರು ನಾಗಪ್ಪ ದೇವಸ್ಥಾನಕ್ಕೆ ತೆರಳಿ ಹಾಲನ್ನೆರೆದರು.
ಕೊಪ್ಪಳ: ಜಿಲ್ಲಾದ್ಯಂತ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು, ಮಕ್ಕಳು ನಾಗದೇವತೆ ಮೂರ್ತಿಗೆ ಶ್ರದ್ಧಾ ಭಕ್ತಿಯಿಂದ ಹಾಲ್ಲೆರೆದು ಸಿಹಿ ಪದಾರ್ಥವನ್ನು ಅರ್ಪಿಸಿ ಪೂಜೆ ಸಲ್ಲಿಸಿದರು.
ಮನೆಯಲ್ಲಿ ಹೋಳಿಗೆ, ಖರ್ಚಿಕಾಯಿ, ಎಳ್ಳು ಚಿಗುಳಿ, ಎಳ್ಳುಂಡಿ ಸಿದ್ದಪಡಿಸಿ ಮಹಿಳೆಯರೆಲ್ಲ ಸೇರಿ ಸಮೀಪದ ನಾಗಪ್ಪ ದೇವಸ್ಥಾನಕ್ಕೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲೆರೆದರು. ವಿಶೇಷವಾಗಿ ರೈತರು, ರೈತ ಮಹಿಳೆಯರು ವರ್ಷಪೂರ್ತಿ ಕೃಷಿ ಬದುಕಿನಲ್ಲಿ ತೊಡಗಿದ್ದಾಗ ಯಾವುದೇ ವಿಷ ಜಂತುಗಳಿಂದ ಅಪಾಯವಾಗದಿರಲಿ. ನಮ್ಮ ಮಕ್ಕಳು ನಾವು ಕ್ಷೇಮದಿಂದ ಇರಲಿ. ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ. ನಾಡಿನೆಲ್ಲೆಡೆ ಸುಖ-ಶಾಂತಿನೆಲೆಸಲಿ ಎಂಬು ಪ್ರಾರ್ಥಿಸಿ ನಾಗದೇವತೆ ಮೂರ್ತಿಗೆ ಹಾಲೆರೆದರು.
ಶ್ರಾವಣ ಮಾಸ ಪ್ರಾರಂಭದಲ್ಲಿ ಬರುವ ನಾಗರ ಪಂಚಮಿ ಮೊದಲ ಹಾಗೂ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಸಂತಾನ ಪ್ರಾಪ್ತಿಗಾಗಿ, ಮಕ್ಕಳ ಉನ್ನತಿಗಾಗಿ, ನಾಗದೋಷ ಪರಿಹಾರಕ್ಕಾಗಿ, ಸ್ತ್ರೀಯರು ತಮ್ಮ ಸೋದರರ ಒಳಿತಿಗಾಗಿ ಅನಾದಿಕಾಲದಿಂದಲೂ ನಾಗದೇವತೆಯನ್ನು ಪೂಜಿಸುತ್ತಾ ಬಂದಿರುವುದು ವಿಶೇಷ. ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆ, ಇತ್ಯಾದಿಗಳನ್ನು ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸುವುದು ನಂಬಿಕೆ.
ಈ ಹಿನ್ನೆಲೆಯಲ್ಲಿ ಐತಿಹಾಸಿ ಪುಷ್ಕರಣಿ, ಕನಕಾಚಲಪತಿ ದೇವಸ್ಥಾನದ ಮುಂಭಾಗ ಸೇರಿದಂತೆ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಇರುವ ನಾಗದೇವರ ಕಟ್ಟೆಗೆ ಮಹಿಳೆಯರು ತಂಡೋಪ ತಂಡವಾಗಿ ತೆರಳಿ ಪೂಜೆ ಸಲ್ಲಿಸಿ ದೋಷ ನಿವಾರಣೆಗೆ ಭಕ್ತಿ ಸಮರ್ಪಿಸುವುದು ಕಂಡು ಬಂತು.
ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಮಠದ ಹತ್ತಿರ, ರುದ್ರಮುನಿ ಸ್ವಾಮಿ ಮಠದ ಹತ್ತಿರ, ಕಾಳಿನ ಸಂತೆ ಬಾಜಾರ್ ಹತ್ತಿರ, ಹನುಮಂತನ ದೇವಸ್ಥಾನದ ಹತ್ತಿರ, ಕೇಸೂರ ಗ್ರಾಮದ ಮಹಾಂತೇಶ್ವರ ಸ್ವಾಮಿ ಮಠದ ಹತ್ತಿರ ಮತ್ತು ಬಸವಣ್ಣನ ದೇವಸ್ಥಾನದಲ್ಲಿ ಮಹಿಳೆಯರು ನಾಗ ದೇವತೆಗೆ ಹಾಲೆರೆದು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಗ್ರಾಮದ ಪ್ರತಿಮನೆಗಳಲ್ಲಿ ಹಲವಾರು ಬಗೆಯ ಲಾಡು (ಉಂಡಿ) ತಯಾರಿಸಿ ನಾಗದೇವತೆಗೆ ಪೂಜೆ ಸಲ್ಲಿಸಿ ಹಾಲನ್ನು ಎರೆದು ನಂತರ ಗಿಡಮರಗಳಿಗೆ ಜೋಕಾಲಿ ಕಟ್ಟಿ ಆಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ