ಅನ್ನದಾತರಿಗೆ ಶಾಪವಾದ ಉಳಿಮೇಶ್ವರ ಕೆರೆ

ಕೋಟ್ಯಂತರ ರೂ. ವ್ಯಯಿಸಿದರೂ ಕಾಲುವೆಯಲ್ಲಿ ಹರಿಯದ ನೀರು • ಕೆರೆ ದಡದಲ್ಲಿ ಬಿದ್ದಿವೆ ದೊಡ್ಡ ಗಾತ್ರದ ಬೋಂಗಾ

Team Udayavani, Aug 5, 2019, 1:13 PM IST

5-AGUST-23

ಮುದಗಲ್ಲ: ನೀರು ಪೂರೈಸಲು ಅಳವಡಿಸಿರುವ ಪೈಪ್‌ ಕಾಲುವೆ ಅಲ್ಲಲ್ಲಿ ಬಿರುಕು ಬಿಟ್ಟಿದೆ.

ಮುದಗಲ್ಲ: ಈ ಭಾಗದ ವಿವಿಧ ಗ್ರಾಮಗಳ ಸುಮಾರು 607 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸಬೇಕಿದ್ದ ಉಳಿಮೇಶ್ವರ ಕೆÃ,ೆ ನಿರ್ವಹಣೆ ಕೊರತೆ ಮತ್ತು ಮಳೆ ಅಭಾವದಿಂದಾಗಿ ಕಾಲುವೆಯಲ್ಲಿ ಹನಿ ನೀರು ಹರಿಯುತ್ತಿಲ್ಲ. ಪರಿಣಾಮ ರೈತರ ಪಾಲಿಗೆ ವರವಾಗಬೇಕಿದ್ದ ಉಳುಮೇಶ್ವರ ಕೆರೆ ಕಾಲುವೆ ರೈತರಿಗೆ ಶಾಪವಾಗಿ ಪರಿಣಮಿಸಿದೆ.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಎಚ್.ಡಿ. ದೇವಗೌಡರು ನೀರಾವರಿ ಸಚಿವರಿದ್ದಾಗ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ನಿರ್ಮಿಸಿದ ದೊಡ್ಡ ಕೆರೆ 82.55 ಹೆಕ್ಟೇರ್‌ ಪ್ರದೇಶ ವಿಸ್ತಿರ್ಣ ಹೊಂದಿದೆ. 92.87 ಎಂಟಿಎಫ್‌ಟಿ, ನೀರು ಸಂಗ್ರಹ ಸಾಮರ್ಥಯ ಹೊಂದಿದೆ. 39.16 ಹೆಕ್ಟೇರ್‌ ಕ್ಯಾಚ್ಪ್‌ ಏರಿಯಾದಿಂದ ಕೆರೆಗೆ ನೀರು ಹರಿದು ಬರುತ್ತದೆ. ಉಳಿಮೇಶ್ವರ, ಪಿಕಳಿಹಾಳ, ಕನ್ನಾಳ, ವ್ಯಾಸನಂದಿಹಾಳ, ನಾಗಲಾಪುರ ಸೇರಿದಂತೆ ಇತರ ಗ್ರಾಮಗಳ ಸುಮಾರು 607 ಹೆಕ್ಟೇರ್‌ ಪ್ರದೇಶದ ರೈತರ ಜಮೀನಿಗೆ ನೀರುಣಿಸುವ ಯೋಜನೆ ರೂಪಿಸಲಾಗಿತ್ತು. ಯೋಜನೆ ಜಾರಿಗೆ ಕೋಟ್ಯಂತರ ರೂ. ವ್ಯಯಿಸಿದ್ದರೂ ಈಗ ಕಾಲುವೆಯಲ್ಲಿ ನೀರು ಹರಿಯುತ್ತಿಲ್ಲ.

ಆದರೆ ಕೆರೆ ನಿರ್ವಹಣೆ ಹಾಗೂ ಮಳೆ ಕೊರತೆಯಿಂದ 200 ಎಕರೆ ಪ್ರದೇಶಕ್ಕೂ ನೀರು ತಲಪುತ್ತಿಲ್ಲ, ಕಾಲುವೆ ಮೂಲಕ ನೀರು ಹರಿಯುವುದಕ್ಕಿಂತ ಹಳ್ಳ, ನಾಲೆಗಳಲ್ಲಿ ನೀರು ವ್ಯರ್ಥವಾಗಿ ಹರಿಯುವುದೇ ಹೆಚ್ಚು ಎನ್ನುತ್ತಾರೆ ಪಿಕಳಿಹಾಳ ಗ್ರಾಮದ ರೈತ ಶರಣಪ್ಪ ಮಂಕಣಿ, ರಾಮಣ್ಣ ಮತ್ತು ಶೇಖರಪ್ಪ.

ಕೆರೆ-ಕಾಲುವೆ ದುರಸ್ತಿಗೆ ನಿರ್ಲಕ್ಷ್ಯ: ಕೆರೆ ಎಡ ಭಾಗಕ್ಕೆ ಕಾಲುವೆ ನಿರ್ಮಾಣ ಮಾಡಲಾಗಿದೆ. ಕಾಲುವೆ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೂ ಕಾಲುವೆಯಲ್ಲಿನ ಹೂಳು ತೆಗೆಯುವ, ಕಾಲುವೆ ದುರಸ್ತಿ ಮಾಡುವ ಕೆಲಸವಾಗಿಲ್ಲ. ಕೆರೆಯಲ್ಲಿನ ಹೂಳು ತೆಗೆಯಲು ಬಿಜೆಎಸ್‌ ಸಂಸ್ಥೆ ಹಾಗೂ ರಾಜ್ಯ ಸರಕಾರದ ಆಶ್ರಯದಲ್ಲಿ ಶಾಸಕರು ಚಾಲನೆ ನೀಡಿದ್ದರು. ಅದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೆರೆ ಹೂಳನ್ನು ಹೊಲಕ್ಕೆ ತೆಗೆದುಕೊಂಡು ಹೋಗದ್ದಕ್ಕೆ ಹೂಳು ತೆರವು ಕಾರ್ಯ ಸ್ಥಗಿತಗೊಂಡಿದೆ. ಆದರೆ 2006-07ರಿಂದಲೂ ನಾಗಲಾಪುರ, ಬನ್ನಿಗೋಳ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಹೂಳೆತ್ತುವ ಕಾರ್ಯ ನಡೆಯುತ್ತಿರುವುದು ಮಾತ್ರ ಅಷ್ಟಕಷ್ಟೆ. 2010-11ರಲ್ಲಿ ಸಣ್ಣ ನಿರಾವರಿ ಇಲಾಖೆಯಿಂದ ಜಲ ಸಂವರ್ಧನ ಯೋಜನೆ ಸಂಘ(ಜೆಎಸ್‌ವೈಎಸ್‌) ಯೋಜನೆಯಡಿ ಉಳಿಮೇಶ್ವರ ಗ್ರಾಮದ ಶ್ರೀ ಗಂಗಾದೇವಿ ಕೆರೆ ನೀರು ಬಳಕೆದಾರರ ಸಂಘದ ವತಿಯಿಂದ ಸಮಗ್ರ ಕೆರೆ ಅಭಿವೃದ್ದಿ ಯೋಜನೆಗೆ 45.82 ಲಕ್ಷ ರೂ. ಹಾಗೂ ಸಿಎಲ್ ಕಾಮಗಾರಿಗೆ 43.08 ಲಕ್ಷ ರೂ.ಗಳಲ್ಲಿ ಕೆರೆ ಹೂಳು ತೆಗೆಸುವುದು, ಕಾಲುವೆ ರಿಪೇರಿ ಕಾಮಗಾರಿ ನಡೆಸಲಾಗಿದೆ. ಹೆಸರಿಗೆ ದೊಡ್ಡ ಕೆರೆಯಾದರೂ ನೀರು ಸಂಗ್ರಹ ಮಾತ್ರ ಅತೀ ಕಡಿಮೆ ಎನ್ನುತ್ತಾರೆ ಉಳಿಮೇಶ್ವರ ಗ್ರಾಮದ ರೈತ ಮುಖಂಡ ಯಂಕಣ್ಣ.

2014-15ರಲ್ಲಿ ಕೆರೆ ಅಭಿವೃದ್ದಿ ಕಾಯಕಕ್ಕೆ ಕೈ ಹಾಕಿದ ಆಗಿನ ಜೆಡಿಎಸ್‌ ಮುಖಂಡರೊಬ್ಬರು ಬಲ ಭಾಗದಲ್ಲಿ ಕೆರೆ ಒಡ್ಡಿಗೆ ತಡೆಗೋಡೆ ನಿರ್ಮಿಸಿ ಒಡ್ಡಿಗೆ ಹೊಸ ಮಣ್ಣಿನ ಲೇಪನ ಮಾಡಲಾಗಿದೆ. ಆದರೆ ಈ ಕಾಮಗಾರಿಯೂ ಅಷ್ಟಕ್ಕಷ್ಟೆ ಆಗಿದೆ ಎನ್ನುತ್ತಾರೆ ರೈತರು. ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡಿದ್ದು, ರೈತರ ಹಿತರಕ್ಷಣೆ ಕಾಪಾಡಿಲ್ಲ ಎಂದು ಉಳಿಮೇಶ್ವರ ಗ್ರಾಮದ ರೈತರು ದೂರಿದ್ದಾರೆ.

ಕೆರೆಗೆ ಬೋಂಗಾ: ಕೆರೆ ದಂಡೆಗೆ ಹುತ್ತ ಬೆಳೆದಿದ್ದಲ್ಲದೇ, ಇಲಿ, ಹೆಗ್ಗಣಗಳು, ಹುಳ-ಹುಪ್ಪಡಿಗಳು ರಂಧ್ರ ಹಾಕಿರುವುರಿಂದ ಕೆರೆ ದಡಗಳಿಗೆ ದೊಡ್ಡ ಗಾತ್ರದ ಬೋಂಗಾಗಳು ಬಿದ್ದಿವೆ. ಕೆರೆಯ ನೀರು ಹರಿಸುವ ಕಾಲುವೆ ಗೇಟ್ ಮುರಿದಿದೆ. ಮಳೆಗಾಲದಲ್ಲಿ ಕೆರೆಯ ನೀರು ನಿಲ್ಲದೆ ಜಿನುಗಿ ಅಕ್ಕಪಕ್ಕದ ಹೊಲಗಳಿಗೆ ಹರಿದು ಬೆಳೆಗಳು ಜಲಾವೃತವಾಗುತ್ತವೆ ಎಂದು ಕೆರೆ ಪಕ್ಕದ ಜಮೀನಿನ ರೈತರು ಅಳಲು ತೋಡಿಕೊಂಡಿದ್ದಾರೆ.

ಶಾಸಕರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಅಭಿವೃದ್ಧಿ ಜತೆಗೆ ಕಾಲುವೆಯಲ್ಲಿನ ಹೂಳು ತೆರವು ಮತ್ತು ದುರಸ್ತಿಗೆ ಕ್ರಮ ವಹಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.