175ಕ್ಕೂ ಹೆಚ್ಚು ವಿದ್ಯುತ್ ಕಂಬ ಧರಾಶಾಯಿ
Team Udayavani, Aug 9, 2019, 4:50 AM IST
ಬೆಳ್ತಂಗಡಿ: ಗಾಳಿ-ಮಳೆಗೆ ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ತುಂಬಿ ಹರಿದಿದ್ದ ನೇತ್ರಾವತಿ, ಕಪಿಲಾ, ಮೃತ್ಯುಂಜಯ, ಸೋಮಾವತಿ, ಫಲ್ಗುಣಿ ನದಿ ಗುರುವಾರ ಮಳೆ ಕ್ಷೀಣಿಸಿದ್ದರಿಂದ ಶಾಂತರೂಪ ಪಡೆದಿದೆ.
ಕಳೆದ ಎರಡು-ಮೂರು ದಿನಗಳಿಂದ ತಾಲೂಕಿನಾದ್ಯಂತ ಸುಮಾರು 175ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮೆಸ್ಕಾಂಗೆ 25 ಲಕ್ಷ ರೂ. ನಷ್ಟ ಸಂಭವಿಸಿದೆ. ಜತೆಗೆ 5 ಟ್ರಾನ್ಸ್ ಫಾರ್ಮರ್ಗಳು ಸಂಪೂರ್ಣ ಹಾನಿಯಾಗಿದ್ದು, 2 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ರಬ್ಬರ್, ಅಡಿಕೆ ಸಹಿತ ಮರಗಳು ಉರುಳಿದ ಪರಿಣಾಮ ಸಬ್ಸ್ಟೇಷನ್, ರಸ್ತೆ ಬದಿ ಕಂಬಗಳು ಬುಡಸಮೇತ ಬಿದ್ದು ಮಲವಂತಿಗೆ ಆಸುಪಾಸು ಕಳೆದ ಮೂರು ದಿನಗಳಿಂದ ವಿದ್ಯುತ್ ಸಮಸ್ಯೆಯಿಂದ ನಲುಗುವಂತಾಗಿದೆ.
ಬಂಗಾಡಿ, ನಾವೂರು, ಇಂದಬೆಟ್ಟು, ಗೇರುಕಟ್ಟೆ, ಶಿಶಿಲ, ಪಟ್ರಮೆ, ಅಳದಂಗಡಿ, ಮಡಂತ್ಯಾರು, ಮಾಲಾಡಿ, ಧರ್ಮಸ್ಥಳ, ಮುಂಡಾಜೆ, ಕಾಜೂರು, ಚಾರ್ಮಾಡಿ ಸಹಿತ ತಾಲೂಕಿನ ವಿವಿಧೆಡೆ 100ಕ್ಕೂ ಹೆಚ್ಚು ಕಂಬಗಳು ಧರೆಗುರುಳಿದ್ದು, ವಿದ್ಯುತ್ ಕೈಕೊಟ್ಟಿದ್ದರಿಂದ ಭಾರೀ ಮಳೆ ನಡುವೆ 2 ಬ್ಯಾಚ್ಗಳಾಗಿ 15 ಮಂದಿ ಮೆಸ್ಕಾಂ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೆಸ್ಕಾಂ ಎಇಇ ಶಿವಶಂಕರ್ ತಿಳಿಸಿದ್ದಾರೆ.
ಎರಡು ದಿನ ಸಂಪರ್ಕ ಕಡಿತ
ಬೆಳ್ತಂಗಡಿಯಲ್ಲಿ ಮಂಗಳವಾರ, ಬುಧವಾರ ಒಟ್ಟು 109.8 ಮಿ.ಮೀ. ಮಳೆಯಾಗಿದ್ದು, ಚಾರ್ಮಾಡಿಯ ಅರಣೆಪಾದೆ ಸಮೀಪದ ಅಂತರ ಎಂಬಲ್ಲಿ ಕಿಂಡಿ ಅಣೆಕಟ್ಟು ಜಲಾವೃತ್ತವಾಗಿತ್ತು. ಪರಿಣಾಮ ಎರಡು ದಿನ ಸಂಪರ್ಕ ಕಡಿತವಾಗಿದೆ. ಕಿಂಡಿ ಅಣೆಕಟ್ಟಲ್ಲಿ ಬೃಹತ್ ಮರ ಸಿಲುಕಿಕೊಂಡಿದ್ದರಿಂದ ಸ್ಥಳೀಯ 50ಕ್ಕೂ ಹೆಚ್ಚು ಕುಟುಂಬಗಳು ದಿಗ್ಬಂಧನ ಎದುರಿಸಿತ್ತು. ಸುಮಾರು 4 ಕಿ.ಮೀ. ತೋಟ-ಗದ್ದೆ ಮಧ್ಯೆ ನಡೆದು ಪೇಟೆ ತಲುಪಬೇಕಾದ ಸ್ಥಿತಿ ನಿರ್ಮಾಣವಾಗಿ, ಗುರುವಾರ ನೀರಿನ ಮಟ್ಟ ತಗ್ಗಿದ್ದರಿಂದ ಮರ ತೆರವುಗೊಳಿಸಲಾಗಿದೆ.
ಚಾರ್ಮಾಡಿ ಗ್ರಾಮದ ಗಾಂಧಿನಗರ ನಿವಾಸಿ ಕಲ್ಯಾಣಿ ಅವರ ಮನೆ ಕುಸಿದಿದ್ದು, ಶಾಸಕ ಹರೀಶ್ ಪೂಂಜರವರ ವೈಯಕ್ತಿಕ ಪರಿಹಾರ ಧನ 5,000 ರೂ. ಸಂತ್ರಸ್ತರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಎಂ., ಸ್ಥಳೀಯರಾದ ಗಣೇಶ್ ಕೋಟ್ಯಾನ್ ಜತೆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್