ಮಳೆ ಬಂದರೆ ಸೇತುವೆ ಮುಳುಗಡೆ!


Team Udayavani, Aug 13, 2019, 6:11 AM IST

male

ಉಳ್ಳೂರು-74ನೇ ಗ್ರಾಮದ ಕಳ್ಗಿ, ಬಂಟಕೋಡು, ದೋಣಗೆರೆ, ಹೊಸಬಾಳು, ಜಡ್ಡು, ಬೋಗಿನಬೆ„ಲ್‌, ಜಂಬಗೋಡು, ನೀರ್‌ಕೊಡ್ಲು, ಹೆದ್ದನಬೇರು, ಬಂಟರಗದ್ದೆ, ಮಾಸಳ್ಳಿ, ಹುಂಬಾಡಿ, ಹಾಲಿಬಚ್ಚಲು, ಕೊಗ್ಗೊàಡು, ಕಳಿನತೋಟ ಮೊದಲಾದ ಪ್ರದೇಶಗಳ ಜನರು ಪ್ರಸ್ತುತ ಸುತ್ತು ಬಳಸಿ 8-10 ಕಿ.ಮೀ. ಕ್ರಮಿಸಿ ಶಂಕರನಾರಾಯಣಕ್ಕೆ ಕೆಲಸ ಕಾರ್ಯಗಳಿಗೆ ಬರುತ್ತಿದ್ದು, ಹಾಲಿಬಚ್ಚಲು ಹೆಬ್ಟಾಡಿ ಎಂಬಲ್ಲಿ ಸೇತುವೆ ನಿರ್ಮಾಣವಾದಲ್ಲಿ 74ನೇ ಉಳ್ಳೂರಿನಿಂದ ಶಂಕರನಾರಾಯಣಕ್ಕೆ ಕೇವಲ ಮೂರು ಕಿ.ಮೀ. ಮಾತ್ರ ಕ್ರಮಿಸಿದರೆ ಸಾಕಾಗುತ್ತದೆ . ಬೇಡಿಕೆಯ ಈ ಸೇತುವೆ ನಿರ್ಮಾಣದಿಂದ 74 -ಉಳ್ಳೂರು, ಕುಳ್ಳುಂಜೆ ಹಾಗೂ ಶಂಕರನಾರಾಯಣ ಮೂರು ಗ್ರಾಮಗಳ ಸಂಪರ್ಕ ಕೊಂಡಿ ಬೆಸೆದಂತೆ ಆಗುತ್ತದೆ.

ಕುಂದಾಪುರ: ಉಳ್ಳೂರು 74 ಗ್ರಾಮ ಹಾಗೂ ಶಂಕರನಾರಾಯಣ ಗ್ರಾಮಗಳನ್ನು ಬೆಸೆ ಯಲು, ಇರುವ ದೂರವನ್ನು ಕಡಿಮೆಗೊಳಿಸಲು ಕುಳ್ಳುಂಜೆ ಗ್ರಾಮದ ಕಿರುನದಿಗೆ ಹೆಬ್ಟಾಡಿ ಹಾಲಿಬಚ್ಚಲು ಸೇತುವೆ ಬೇಕೆಂಬ ಬೇಡಿಕೆ ನನಸಾಗಿಲ್ಲ.

ಗ್ರಾಮಸ್ಥರು ವಿದ್ಯುತ್‌ ಕಂಬ ಹಾಕಿ ಮಾಡಿದ ತಾತ್ಕಾಲಿಕ ಸೇತುವೆ ಮಳೆಗೆ ಹೊಳೆಯಲ್ಲಿ ನೀರು ಬಂದರೆ ಮುಳುಗುತ್ತದೆ, ನೀರು ಇಳಿದರೆ ಸೇತುವೆ ಕಾಣುತ್ತದೆ. ಕೆನ್ನೀರು ಹರಿಯುತ್ತಿದ್ದರೆ ಹೊಳೆ ದಾಟಲು ಎಂಟೆದೆ ಬೇಕು.

ಹರಸಾಹಸ ಮಾಡಬೇಕು. ಕೈ ಕೈ ಹಿಡಿಯಲೇ ಬೇಕು. ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಆತಂಕ. ಮನೆ ಮಂದಿ ಹೊರಹೋದರೆ ಮನೆಗೆ ಬರುವವರೆಗೆ ಮನೆಯವರ ಎದೆ ಢವಢವ. ಊರಿನಿಂದ ಹೋದವರು ಮರಳಿ ಬರ ಬೇಕಾದರೆ ನೀರಿಳಿಯಬೇಕೆಂಬ ಕಾಯುವಿಕೆ. ಮನೆ ಮುಟ್ಟುವವರೆಗೆ ಹೊಳೆಯಲ್ಲಿ ನೀರು ಬಾರದಿರಲಿ, ಎಷ್ಟೇ ಮಳೆಯಾದರೂ ಸೇತುವೆ ಮುಳುಗದಿರಲಿ ಎಂಬುದು ಮಳೆಗಾಲದಲ್ಲಿ ಈ ಊರಿನವರ ನಿತ್ಯ ಪ್ರಾರ್ಥನೆ. ಏಕೆಂದರೆ ಹರಿಯುವುದು ಸಣ್ಣ ನದಿಯಾದರೂ ಅದರ ಸೆಳೆತ ಭೀಕರವಾಗಿರುತ್ತದೆ. ಈಗ ಇರುವ ಕಾಲುಸಂಕದ ಹಿಡಿಕೆ ದುರ್ಬಲವಾಗಿದ್ದು ಅಪಾಯ ಕಟ್ಟಿಟ್ಟ ಬುತ್ತಿ. ನದಿಯ ಮೇಲ್ಭಾಗದಲ್ಲಿ ಸ್ವಲ್ಪ ಜಾಸ್ತಿ ಮಳೆಯಾದರೂ ಕೆಂಪು ಕೆಂಪು ನೀರು, ಕಾಲುಸಂಕ ಮುಳುಗಡೆ! ನೀರು ಇಳಿಯಲು ಕಾಯುವುದು ಅನಿವಾರ್ಯ.

ಪ್ರಸ್ತಾವನೆ ಸಲ್ಲಿಕೆ
ಉಳ್ಳೂರು ಗ್ರಾ.ಪಂ. ನಮ್ಮ ಗ್ರಾಮ ನಮ್ಮ ಯೋಜನೆಯಡಿ ಪ್ರಸ್ತಾವಿತ ಸೇತುವೆಯ ನಿರ್ಮಾಣದ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಆದರೆ ವರ್ಷಗಳು ಮೂರು ಕಳೆದರೂ ಮಂಜೂರಾಗಲೇ ಇಲ್ಲ.

ಶಂಕರನಾರಾಯಣದಿಂದ ಹೆಬ್ಟಾಡಿಯ ತನಕ ಈಗಾಗಲೇ ಕರ್ನಾಟಕ ನೀರಾವರಿ ನಿಗಮದಿಂದ ಮಹಿಷಮರ್ದಿನಿ ದೇವಸ್ಥಾನ ಸಮೀಪ ವಾರಾಹಿ ಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ರಸ್ತೆ ಕುಂಬಾರಮಕ್ಕಿ ಜಂಕ್ಷನ್‌, ಹಾಲಾಡಿ ಸಿದ್ದಾಪುಯರ ರಸ್ತೆಯಲ್ಲಿ ಕೊನೆಯಾಗುತ್ತದೆ. ಈ ರಸ್ತೆಯನ್ನು ಉಪಯೋಗಿಸಿದರೆ 15 ಕಿ.ಮೀ. ದೂರದ ಸಿದ್ದಾಪುರ ಹಾಲಾಡಿಗೆ 5 ಕಿ.ಮೀ. ದೂರ ಕಡಿಮೆಯಾಗುತ್ತದೆ. ಸಿದ್ದಾಪುರ, ಉಳ್ಳೂರು, ಕುಳ್ಳುಂಜೆ, ಶಂಕರನಾರಾಯಣ, ಹಾಲಾಡಿ ಮತ್ತಷ್ಟು ಸನಿಹವಾಗುತ್ತದೆ. ಹೆಬ್ಟಾಡಿಯಿಂದ ನದಿಯ ತನಕ ಖಾಸಗಿ ಪಟ್ಟಾ ಭೂಮಿಯಲ್ಲಿ ಸುಮಾರು ನೂರು ಮೀಟರ್‌ನಷ್ಟು ಕೂಡು ರಸ್ತೆ ನಿರ್ಮಾಣವಾಗಬೇಕಾಗಿದೆ.

ಸೇತುವೆ ಬೇಡಿಕೆ
ಕುಳ್ಳುಂಜೆ ಗ್ರಾಮದ ಹಾಲಿಬಚ್ಚಲು ಹೆಬ್ಟಾಡಿಯ ಬಳಿ ಕಿರುಸೇತುವೆ ನಿರ್ಮಾಣವಾದಲ್ಲಿ ಸಿದ್ದಾಪುರ, ಉಳ್ಳೂರು, ಶಂಕರನಾರಾಯಣ, ಕುಳ್ಳುಂಜೆ, ಹಾಲಾಡಿ ಹೀಗೆ ಐದು ಗ್ರಾಮಗಳ ಸಂಪರ್ಕ ಕೊಂಡಿಯಾಗಲಿದೆ. ನದಿಯ ಒಂದು ದಡ ಉಳ್ಳೂರು 74 ಗ್ರಾಮವಾದರೆ ಇನ್ನೊಂದು ಭಾಗ ಕುಳ್ಳುಂಜೆ ಗ್ರಾಮದಲ್ಲಿದೆ. ಎರಡೂ ಕಡೆ ನದಿದಂಡೆವರೆಗೆ ಪಂಚಾಯತ್‌ ರಸ್ತೆಯಿದೆ. ಸ್ವಲ್ಪ ಖಾಸಗಿ ಭೂಮಿಯಿದ್ದು ಭೂಮಾಲಕರು ಪರೋಕ್ಷವಾಗಿ ಸೇತುವೆ ನಿರ್ಮಾಣಕ್ಕೆ ಸಹಕರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮಂಜೂರಿಗೆ ಪ್ರಯತ್ನ
ಈ ವಾರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಈ ಪ್ರದೇಶಕ್ಕೆ ಸೇತುವೆ ಮಂಜೂರುಗೊಳಿಸುತ್ತೇನೆ. ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು

ಸನಿಹದ ದಾರಿ
ಐದು ಗ್ರಾಮಗಳ ಸಂಪರ್ಕ ರಸ್ತೆಯಾದ ಹಾಲಿಬಚ್ಚಲು-ಹೆಬ್ಟಾಡಿ ಸೇತುವೆ ನಿರ್ಮಾಣಕ್ಕೆ ಅನೇಕ ವರ್ಷಗಳಿಂದ ಬೇಡಿಕೆಯಿದೆ. ಹಾಲಿಬಚ್ಚಲು -ಹೆಬ್ಟಾಡಿ ಎಂಬಲ್ಲಿ ಈ ಸೇತುವೆ ಆದರೆ ಜನರಿಗೆ ಕೂಗಳತೆಯಲ್ಲಿ ಶಂಕರನಾರಾಯಣ ಪದವಿಪೂರ್ವ ಕಾಲೇಜು, ಪದವಿ ಕಾಲೇಜು ತಲುಪಬಹುದು, ಶಂಕರನಾರಾಯಣ ಪೊಲೀಸ್‌ ಠಾಣೆ, ಸಬ್‌ ರಿಜಿಸ್ಟ್ರಾರ್‌ ಕಚೇರಿ, ಅರಣ್ಯ ಇಲಾಖೆಯನ್ನು 1.5 ಕಿ.ಮೀ. ದೂರದಲ್ಲಿ ಕ್ರಮಿಸಬಹುದು.
-ಚಿಟ್ಟೆ ರಾಜಗೋಪಾಲ ಹೆಗ್ಡೆ, ಅಧ್ಯಕ್ಷರು, ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.