ಜನಿವಾರ ಕಾಯಕದಲ್ಲಿ ತೊಡಗಿವೆ 3 ಕುಟುಂಬ

ಇಂದು ಯಜುರುಪಾಕರ್ಮ

Team Udayavani, Aug 15, 2019, 6:03 AM IST

janivara

ಉಡುಪಿ: ಜನಿವಾರ (ಯಜ್ಞೋಪವೀತ) ಎಂಬುದು ಬ್ರಹ್ಮಗ್ರಂಥಿ ಎಂಬ ಗಂಟಿನಿಂದ ಕೂಡಿಸಲ್ಪಟ್ಟ ದಾರ. ನೋಡಲು ಸಾಧಾರಣ ನೂಲಿನಂತೆ ಕಾಣುವ ಇದರ ಹಿಂದಿನ ಶ್ರಮ ಮಾತ್ರ ಅಪಾರ. ಆ. 15ರಂದು ಯಜುರುಪಾಕರ್ಮದಂದು ವಾರ್ಷಿಕವಾಗಿ ಜನಿವಾರ ಬದಲಾಯಿಸುವ ಕ್ರಮ ಚಾಲ್ತಿಯಲ್ಲಿದೆ. ತೆಂಕನಿಡಿಯೂರು ಶಾಲೆಯ ಬಳಿ ಕಳೆದ 5 ತಲೆಮಾರುಗಳಿಂದಲೂ ಪೈ ಕುಟುಂಬಸ್ಥರು ಜನಿವಾರ ತಯಾರಿ ಕಾಯಕದಲ್ಲಿ ತೊಡಗಿದ್ದಾರೆ. ಪ್ರಸ್ತುತ ವಾಸುದೇವ ಪೈ ಹಾಗೂ ಸಹೋದರರು ಈ ಕಾಯಕವನ್ನೇ ಮುಂದುವರಿಸಿದ್ದಾರೆ.

1 ರೂ.ಗೆ ಮಾರಾಟ

ಚರಕಗಳ ಸಹಾಯದಿಂದ ಜನಿವಾರ ತಯಾರಿಕೆ ಯಲ್ಲಿ ಇವರು ತೊಡಗಿಸಿಕೊಂಡಿದ್ದಾರೆ. ದಿನ ವೊಂದಕ್ಕೆ ಸುಮಾರು 300ರಷ್ಟು ಜನಿವಾರಗಳನ್ನು ಉತ್ಪಾದಿಸುತ್ತಾರೆ. ಒಂದು ಜನಿವಾರಕ್ಕೆ ಸುಮಾರು 70ಪೈಸೆಯಷ್ಟು ವೆಚ್ಚ ಬೀಳುತ್ತದೆ. 1 ರೂಪಾಯಿಗೆ ಇವರು ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ವ್ಯಾಪಾರಸ್ಥರು 3.20 ರೂ.ನಲ್ಲಿ ಮಾರಾಟ ಮಾಡುತ್ತಾರೆ.

ಬೇಕಿದೆ ಸರಕಾರದ ಪ್ರೋತ್ಸಾಹ

ಈ ಕೈಗಾರಿಕೆ ಇಂದು ಅವನತಿಯತ್ತ ಸಾಗುತ್ತಿದೆ. 1991ರಲ್ಲಿ 6 ಎಳೆಯ ಜನಿವಾರಕ್ಕೆ 15 ಪೈಸೆ ಹಾಗೂ 9 ಎಳೆಯ ಜನಿವಾರಕ್ಕೆ 24 ಪೈಸೆ ದರವಿತ್ತು. ಈಗ ನೂಲಿನ ದರ ಹೆಚ್ಚಳವಾದ ಕಾರಣ ಜನವಾರದ ದರವೂ ಅಧಿಕವಾಗಿದೆ. ಈ ಕಾಯಕವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಇಂತಹವರನ್ನು ಗುರುತಿಸುವ ಕೆಲಸ ಮಾಡಬೇಕಿದೆ. ಪ್ರಸ್ತುತ ಇವರು ಮಾಡಿದ ಜನಿವಾರಗಳು ಉಡುಪಿ, ಮಂಗಳೂರು ಮಾತ್ರವಲ್ಲದೆ ಸುಳ್ಯ, ಪುತ್ತೂರು, ಮೂಡುಬಿದಿರೆ, ಹೊನ್ನಾವರ ಭಾಗ ಗಳಿಗೂ ವ್ಯಾಪಾರಸ್ಥರ ಮೂಲಕ ತಲುಪುತ್ತಿವೆ. ದೊಡ್ಡ ದೊಡ್ಡ ಯಂತ್ರಗಳು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ಈ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ರೀತಿಯ ಉತ್ಪಾದನೆ ಕಂಡು ಬರುವುದೂ ವಿರಳ. ನಶಿಸುತ್ತಿರುವ ಈ ಕೈಗಾರಿಕೆಯನ್ನು ಪ್ರೋತ್ಸಾಹಿಸುವುದರಿಂದ ಜನಿವಾರದ ನೈಜತೆಯೂ ಉಳಿಯಲು ಸಾಧ್ಯವಾಗುತ್ತದೆ.

ಗಾಯತ್ರಿ ಮಂತ್ರಪೂರ್ವಕ ಧಾರಣೆ

ಜನಿವಾರದ ಧಾರಣೆ ಗಾಯತ್ರಿ ಮಂತ್ರದಿಂದ ಆರಂಭವಾಗುತ್ತದೆ. ಗಾಯತ್ರಿ ಮಂತ್ರ ಹಾಗೂ ಜನಿವಾರದ ಸಮ್ಮಿಲನವೇ ದ್ವಿಜತ್ವ. ಜನಿವಾರದಲ್ಲಿ ಮೂರು ಎಳೆಗಳಿರುತ್ತವೆ. ಗಾಯತ್ರಿ ಮಂತ್ರದಲ್ಲೂ ಮೂರು ಚರಣಗಳಿರುತ್ತವೆ.

ದೀರ್ಘಾಯುಷ್ಯದ ನಂಬಿಕೆ

ಜನಿವಾರ ಧರಿಸಿದವರು ಹಲವಾರು ನಿಯಮ ಗಳನ್ನು ಪಾಲಿಸಬೇಕಾಗುತ್ತದೆ. ಅದು ವ್ಯಕ್ತಿಯನ್ನು ಸಾತ್ವಿಕ ಜೀವನದತ್ತ ಕೊಂಡೊಯ್ಯುತ್ತದೆ ಎಂಬ ನಂಬಿಕೆಯಿದೆ.

ಜನಿವಾರ ಪವಿತ್ರ ದಾರ

ಜನಿವಾರವನ್ನು ಯಾವುದೋ ನೂಲಿನಿಂದ ತಯಾರಿಸುವಂತಿಲ್ಲ. ಏಕೆಂದರೆ ಇದರ ಪ್ರತಿ ನೂಲಿಗೂ ಧಾರ್ಮಿಕ ಮಹತ್ವವಿದೆ. ಪ್ರಮುಖವಾಗಿ ಜನಿವಾರದಲ್ಲಿ ಮೂರು ಎಳೆಗಳಿರುತ್ತವೆ. ಅವಿವಾಹಿತರು ಒಂದು ಜನಿವಾರ ಧರಿಸಬೇಕು. ವಿವಾಹಿತರು ಎರಡು ಎಳೆಗಳ ಜನಿವಾರವನ್ನೂ, ದಂಪತಿಗಳಿಗೆ ಸಂತಾನಭಾಗ್ಯ ಪ್ರಾಪ್ತವಾದ ಬಳಿಕ ಮೂರು ಎಳೆಗಳ ಜನಿವಾರವನ್ನು ಧರಿಸುವುದು ಸಂಪ್ರದಾಯವಾಗಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.